• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ನಿಮ್ಮ ಗೆಲುವಿನಿಂದ ದೇಶ ಕುಣಿಯುತ್ತಿದೆ.. ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ಹಾಕಿ ತಂಡಕ್ಕೆ ಮೋದಿ ಸರ್ಪ್ರೈಸ್ ಕಾಲ್

ನಿಮ್ಮ ಗೆಲುವಿನಿಂದ ದೇಶ ಕುಣಿಯುತ್ತಿದೆ.. ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ಹಾಕಿ ತಂಡಕ್ಕೆ ಮೋದಿ ಸರ್ಪ್ರೈಸ್ ಕಾಲ್

ಮೋದಿ ಸರ್ಪ್ರೈಸ್ ಕಾಲ್

ಮೋದಿ ಸರ್ಪ್ರೈಸ್ ಕಾಲ್

ಮನ್​​ಪ್ರೀತ್​ ನಿಮಗೆ ಹಾಗೂ ಇಡೀ ತಂಡಕ್ಕೆ ಶುಭಾಶಯಗಳು. ನೀವು ಅತ್ತುತ್ತಮ ಸಾಧನೆ ಮಾಡಿದ್ದೀರ. ಇಡೀ ದೇಶ ನಿಮ್ಮ ಗೆಲುವಿನಿಂದ ಖುಷಿಯಲ್ಲಿ ಕುಣಿಯುತ್ತಿದೆ. ನನ್ನ ಹೃದಯವೂ ತುಂಬಿ ಬಂದಿದೆ. ನನ್ನ ಶುಭಾಶಯಗಳನ್ನು ತಂಡದ ಪ್ರತಿಯೊಬ್ಬರಿಗೂ ತಿಳಿಸಿ.

  • Share this:

ಟೊಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರೆದಿದ್ದು, ಭಾರತದ ಪುರುಷರ ಹಾಕಿ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ. ಹಾಕಿಯಲ್ಲಿ 41 ವರ್ಷಗಳ ಬಳಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಜರ್ಮನಿ ತಂಡದ ವಿರುದ್ಧ 5-4 ಅಂತರದಲ್ಲಿ ಗೆಲ್ಲುವ ಮೂಲಕ ಭಾರತದ ತಂಡ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ.  ಭಾರತ ಹಾಕಿ ಟೀಂ ಪದಕ ಗೆಲ್ಲುತ್ತಲೇ ದೇಶಾದ್ಯಂತ ಜನ ಸಂಭ್ರಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಂಡದ ನಾಯಕ ಮನಪ್ರೀತ್​ ಸಿಂಗ್​ ಹಾಗೂ ಕೋಚ್​ ಗ್ರ್ಯಾಮ್​​ ರಿಡ್​ಗೆ ಫೋನ್​​ ಕರೆ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. ಸರ್ಪ್ರೈಸ್​​ ಕಾಲ್​​​ ತಂಡದ ಗೆಲುವಿನ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.


ಮನ್​​ಪ್ರೀತ್​ ನಿಮಗೆ ಹಾಗೂ ಇಡೀ ತಂಡಕ್ಕೆ ಶುಭಾಶಯಗಳು. ನೀವು ಅತ್ತುತ್ತಮ ಸಾಧನೆ ಮಾಡಿದ್ದೀರ. ಇಡೀ ದೇಶ ನಿಮ್ಮ ಗೆಲುವಿನಿಂದ ಖುಷಿಯಲ್ಲಿ ಕುಣಿಯುತ್ತಿದೆ. ನನ್ನ ಹೃದಯವೂ ತುಂಬಿ ಬಂದಿದೆ. ನನ್ನ ಶುಭಾಶಯಗಳನ್ನು ತಂಡದ ಪ್ರತಿಯೊಬ್ಬರಿಗೂ ತಿಳಿಸಿ. ಆಗಸ್ಟ್​​ 15ರಂದು ಭೇಟಿಯಾಗಲು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ ಎಂದು ಮೋದಿ ಅವರು ಕರೆ ಮಾಡಿ ತಿಳಿಸಿದ್ದಾರೆ.



ಪ್ರಧಾನಿ ಮೋದಿ ಅವರು ಹಾಕಿ ತಂಡ ಸೆಮಿಫೈನಲ್​​ನಲ್ಲಿ ಸೋಲು ಕಂಡ ಬಳಿಕವೂ ಕರೆ ಮಾಡಿ ಮಾತನಾಡಿದ್ದರು. ಆ ವೇಳೆ ಕೋಚ್​ ಗ್ರ್ಯಾಮ್​​ ರಿಡ್ ಜೊತೆ ಮಾತನಾಡಿದ್ದ ಪ್ರಧಾನಿ, ನಿಮ್ಮ ಶ್ರಮ ತಂಡದ ಆಟದಲ್ಲಿ ಕಾಣುತ್ತಿದೆ ಎಂದು ಆಸ್ಟ್ರೇಲಿಯಾ ಮೂಲದ ತರಬೇತುದಾರನ ಕೊಡುಗೆಯನ್ನು ಮೋದಿ ಪ್ರಶಂಸಿಸಿ ಅಭಿನಂದನೆಗಳನ್ನು ತಿಳಿಸಿದ್ದರು. ರಿಡ್​​ ಅವರು ಸಹ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಸೋಲಿನ ಬಳಿಕ ನಿಮ್ಮ ಪ್ರೋತ್ಸಾಹದಾಯಕ ಮಾತುಗಳು ನಮಗೆ ದೊಡ್ಡ ಬಲ ತಂದು ಕೊಟ್ಟಿದೆ ಎಂದು ಹೇಳಿದ್ದರು.


ಭಾರತದ ಹಾಕಿ ತಂಡ ಕಂಚಿನ ಪದಕ ಗೆಲ್ಲುತ್ತಲೇ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ, ಭಾರತದ ಪಾಲಿಗೆ ಇಂದು ಐಸಿಹಾಸಿಕ ದಿನ ಎಂದು ಬಣ್ಣಿಸಿದ್ದರು. ಇಡೀ ದೇಶಕ್ಕೆ ಹೆಮ್ಮೆ ತಂದ ತಂಡದ ಪ್ರತಿಯೊಬ್ಬರಿಗೆ ಅಭಿನಂದನೆಗಳು ಎಂದಿದ್ದರು.


ಇದನ್ನೂ ಓದಿ: Tokyo Olympics- ಭಾರತ ಹಾಕಿ ತಂಡಕ್ಕೆ ಕಂಚಿನ ಪದಕ; ಕುಸ್ತಿಪಟು ವಿನೇಶ್ ಫೋಗಾಟ್, ಅಂಶುಗೆ ನಿರಾಸೆ


ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಹಾಕಿ ತಂಡದ ಆಟಗಾರರನ್ನು ಪಧಾನಿ ಮೋದಿ ಆಹ್ವಾನಿಸಿದ್ದಾರೆ. ಕೆಂಪುಕೋಟೆ ಧ್ವಜಾರೋಹಣದಲ್ಲಿ ಹಾಕಿ ತಂಡ ಭಾಗಿಯಾಗಲಿದೆ. 1980ರಲ್ಲಿ ನಡೆದ ಒಲಂಪಿಕ್ಸ್​ನಲ್ಲಿ ಭಾರತದ ಹಾಕಿ ತಂಡ 8 ಚಿನ್ನದ ಪದಕಗಳನ್ನು ಗೆದ್ದಿತ್ತು. ನಂತರ ಒಲಿಂಪಿಕ್ಸ್​ನಲ್ಲಿ ಯಾವುದೇ ಪದಕವನ್ನು ಗೆದ್ದಿರಲಿಲ್ಲ. 41 ವರ್ಷಗಳ ಪದಕದ ಬರವನ್ನು ಈ ಬಾರಿ ಹಾಕಿ ತಂಡ ನಿವಾರಿಸಿದೆ. ಈ ಕಂಚಿನ ಪದಕದ ಮೂಲಕ  ಭಾರತ ಈ ಬಾರಿಯ ಒಲಿಪಿಂಕ್ಸ್​​​ನಲ್ಲಿ 4 ಪದಕಗಳನ್ನು ಗೆದ್ದಂತಾಗಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: