• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Rajasthan Political Crisis: ನಮ್ಮ ಅಶ್ವಶಾಲೆಯಿಂದ ಕುದುರೆಗಳು ತಪ್ಪಿಸಿಕೊಂಡ ನಂತರವೇ ನಾವು ಎಚ್ಚರಗೊಳುತ್ತಿದ್ದೇವೆ; ಕಪಿಲ್ ಸಿಬಲ್ ಆತಂಕ

Rajasthan Political Crisis: ನಮ್ಮ ಅಶ್ವಶಾಲೆಯಿಂದ ಕುದುರೆಗಳು ತಪ್ಪಿಸಿಕೊಂಡ ನಂತರವೇ ನಾವು ಎಚ್ಚರಗೊಳುತ್ತಿದ್ದೇವೆ; ಕಪಿಲ್ ಸಿಬಲ್ ಆತಂಕ

ಕಪಿಲ್ ಸಿಬಲ್

ಕಪಿಲ್ ಸಿಬಲ್

ಸಚಿನ್ ಪೈಲಟ್ ಮಾರ್ಚ್‌ನಿಂದ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ 22 ಶಾಸಕರೊಂದಿಗೆ ಪಕ್ಷದಿಂದ ಹೊರಬಂದು ಬಿಜೆಪಿ ಸೇರಿದಾಗ ಅಲ್ಲಿನ ಮಧ್ಯಪ್ರದೇಶ ಸರ್ಕಾರ ಕುಸಿದು ಬಿದ್ದಿತ್ತು. ಇದೀಗ ಅಂತಹದ್ದೇ ಸ್ಥಿತಿ ರಾಜಸ್ಥಾನ ಸರ್ಕಾರಕ್ಕೂ ಎದುರಾಗಿದೆ.

ಮುಂದೆ ಓದಿ ...
  • Share this:

ನವ ದೆಹಲಿ (ಜುಲೈ 13); "ನಮ್ಮ ಪಕ್ಷದ ಕುರಿತು ನಾನು ಚಿಂತಿತನಾಗಿದ್ದೇನೆ. ನಮ್ಮ ಅಶ್ವಶಾಲೆಗಳಿಂದ ಕುದುರೆಗಳು ತಪ್ಪಿಸಿಕೊಂಡ ನಂತರವೇ ನಾವು ಎಚ್ಚರಗೊಳ್ಳುತ್ತೇವೆ” ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್‌ ಸಿಬಲ್‌ ಟ್ವೀಟ್‌ ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.


ಕೊರೋನಾ ಲಾಕ್‌ಡೌನ್‌ಗೆ ಮುಂಚೆ ಮಧ್ಯಪ್ರದೇಶದಲ್ಲಿ ಕಮಲನಾಥ್‌ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವಲ್ಲಿ ಬಿಜೆಪಿ ಸಫಲವಾಗಿತ್ತು. ಸರಿಯಾಗಿ ಮೂರು ತಿಂಗಳ ನಂತರ ಇಂದು ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಈ ಕುರಿತು ಕಪಿಲ್‌ ಸಿಬಲ್ ಕಾಂಗ್ರೆಸ್‌ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬರ್ಥದಲ್ಲಿ ಟ್ವೀಟ್‌ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.



ಆದರೆ, ಕಪಿಲ್ ಸಿಬಲ್‌ ಅವರ ಈ ಟ್ವೀಟ್ ಇದೀಗ ಕಾಂಗ್ರೆಸ್‌ನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಅನೇಕ ನಾಯಕರು ಕಪಿಲ್ ಸಿಬಲ್ ಅವರ ಟ್ವೀಟ್ ಪಕ್ಷದ ಮುಖಂಡರ ನಿಷ್ಕ್ರಿಯತೆಯನ್ನು ತೋರಿಸುತ್ತದೆ ಎಂಬ ರೀತಿಯಲ್ಲಿ ಚರ್ಚೆಗೆ ಮುಂದಾಗಿದ್ದಾರೆ.


ಕಳೆದ ವರ್ಷ ಕರ್ನಾಟಕ, ಈ ವರ್ಷ ಮಧ್ಯಪ್ರದೇಶ ಸೇರಿದಂತೆ ಭಾರತದ ಪ್ರಮುಖ ಮತ್ತು ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಯ ಆಪರೇಷನ್‌ ಕಮಲಕ್ಕೆ ಸೋತು ಅಧಿಕಾರ ಕಳೆದುಕೊಂಡಿದೆ. ಈಗ ರಾಜಸ್ಥಾನದಲ್ಲಿಯೂ ಅದೇ ಸ್ಥಿತಿ ಎದರಿಸುತ್ತಿದ್ದು, ಸಚಿನ್ ಪೈಲಟ್ ಪಕ್ಷ ತ್ಯಜಿಸುವುದು ಬಹುತೇಕ ಖಚಿತವಾಗಿದೆ.


ಸಚಿನ್ ಪೈಲಟ್ ಮಾರ್ಚ್‌ನಿಂದ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ 22 ಶಾಸಕರೊಂದಿಗೆ ಪಕ್ಷದಿಂದ ಹೊರಬಂದು ಬಿಜೆಪಿ ಸೇರಿದಾಗ ಅಲ್ಲಿನ ಮಧ್ಯಪ್ರದೇಶ ಸರ್ಕಾರ ಕುಸಿದು ಬಿದ್ದಿತ್ತು. ಇದೀಗ ಅಂತಹದ್ದೇ ಸ್ಥಿತಿ ರಾಜಸ್ಥಾನ ಸರ್ಕಾರಕ್ಕೂ ಎದುರಾಗಿದೆ.


ಅಶೋಕ್ ಗೆಹ್ಲೋಟ್ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದ ಸಚಿನ್ ಪೈಲಟ್‌, "ಗೆಹ್ಲೋಟ್‌ ಜೊತೆಗಿನ ಅನುಭವ ಸಾಕಾಗಿದೆ. ಸರ್ಕಾರ ಉರುಳಿಸುವ ಆರೋಪದ ಸಮನ್ಸ್ ಅನ್ನು ನೀಡಿರುವುದು ಒಬ್ಬ ಉಪಮುಖ್ಯಮಂತ್ರಿಯನ್ನು ನಡೆಸಿಕೊಳ್ಳುವ ರೀತಿಯಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಇದೇ ಕಾರಣಕ್ಕೆ ಅವರು ಬಿಜೆಪಿ ಸೇರ್ಪಡೆಯಾಗಲೂ ಮುಂದಾಗಿದ್ದರು ಎನ್ನಲಾಗುತ್ತಿದೆ.


ಈ ನಡುವೆ ಅವರು ತಮ್ಮ ಬೆಂಬಲಿತ ಶಾಸಕರ ಜೊತೆಗೆ ಕಳೆದ ಶನಿವಾರವೇ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜೊತೆಗೆ ಈ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂತ್ತು. ಆದರೆ, ಈ ನಡುವೆ ಇಂದು ಮತ್ತೊಂದು ಹೇಳಿಕೆ ನೀಡಿರುವ ಅವರು, "ತಾವು ಯಾವುದೇ ಪಕ್ಷದ ಜೊತೆಗೆ ಸೇರ್ಪಡೆಯಾಗುತ್ತಿಲ್ಲ" ಎಂದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.


ಇದನ್ನೂ ಓದಿ : Rajasthan Political Crisis: ’ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ’; ರಾಜಸ್ಥಾನದ ಡಿಸಿಎಂ ಸಚಿನ್‌ ಪೈಲಟ್‌ ಸ್ಪಷ್ಟನೆ



ಆದರೆ, ಪಕ್ಷದಲ್ಲಿರುವ ಶಾಸಕರು ಹಾಗೂ ನಾಯಕರು ಹೀಗೆ ಪಕ್ಷದಿಂದ ವಿಮುಖರಾಗುತ್ತಿದ್ದರೂ, ಕೊನೆಯವರೆಗೆ ಪಕ್ಷದ ಹೈಕಮಾಂಡ್‌ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ನಮ್ಮ ಅಶ್ವ ಶಾಲೆಗಳಿಂದ ಕುದುರೆಗಳು ತಪ್ಪಿಸಿಕೊಂಡ ನಂತರವೇ ಎಚ್ಚೆತ್ತುಕೊಳ್ಳುತ್ತಿದೆ" ಎಂಬ ರೀತಿಯಲ್ಲಿ ಕಪಿಲ್ ಸಿಬಲ್ ಟ್ವೀಟ್‌ ಮಾಡಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Published by:MAshok Kumar
First published: