• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Vizag Gas Leak: ವಿಶಾಖಪಟ್ಟಣದ ವೈಜಾಗ್​ನಲ್ಲಿ ಮತ್ತೆ ಗ್ಯಾಸ್ ಸೋರಿಕೆ; ಇಬ್ಬರು ಸಾವು, ನಾಲ್ವರ ಸ್ಥಿತಿ ಗಂಭೀರ

Vizag Gas Leak: ವಿಶಾಖಪಟ್ಟಣದ ವೈಜಾಗ್​ನಲ್ಲಿ ಮತ್ತೆ ಗ್ಯಾಸ್ ಸೋರಿಕೆ; ಇಬ್ಬರು ಸಾವು, ನಾಲ್ವರ ಸ್ಥಿತಿ ಗಂಭೀರ

 ಇಂದು ಮುಂಜಾನೆ ವಿಶಾಖಪಟ್ಟಣಂನ ಫಾರ್ಮಾ ಫ್ಯಾಕ್ಟರಿಯಲ್ಲಿ ಗ್ಯಾಸ್ ಸೋರಿಕೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಸಿಬ್ಬಂದಿ

ಇಂದು ಮುಂಜಾನೆ ವಿಶಾಖಪಟ್ಟಣಂನ ಫಾರ್ಮಾ ಫ್ಯಾಕ್ಟರಿಯಲ್ಲಿ ಗ್ಯಾಸ್ ಸೋರಿಕೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಸಿಬ್ಬಂದಿ

Vishakapatnam Gas leak: ವಿಶಾಖಪಟ್ಟಣಂನ ವೈಜಾ್​ಗಲ್ಲಿ ಕಳೆದ ತಿಂಗಳ ಎಲ್​ಜಿ ಪಾಲಿಮರ್ಸ್​ನಿಂದ ವಿಷಾನಿಲ ಸೋರಿಕೆಯಾಗಿತ್ತು 13 ಜನ ಸಾವನ್ನಪ್ಪಿದ್ದರು. ಇಂದು ಅದೇ ಪ್ರದೇಶದಲ್ಲಿ ಸೈನರ್ ಲೈಫ್​ ಸೈನ್ಸ್​ ಎಂಬ ಫಾರ್ಮಾ ಫ್ಯಾಕ್ಟರಿಯಲ್ಲಿ ಗ್ಯಾಸ್ ಸೋರಿಕೆಯಾಗಿದೆ.

  • Share this:

ಹೈದರಾಬಾದ್ (ಜೂ. 30): ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮತ್ತೊಂದು ಅನಿಲ ಸೋರಿಕೆ ಪ್ರಕರಣ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಾನಿಲದ ಉಸಿರಾಟದಿಂದ ಸದ್ಯಕ್ಕೆ ನಾಲ್ವರ ಸ್ಥಿತಿ ಗಂಭೀರವಾಗಿದೆ. ವಿಶಾಖಪಟ್ಟಣಂನ ವೈಜಾಗ್​ನಲ್ಲಿರುವ ಪರವಾಡ ಫಾರ್ಮಾ ಸಿಟಿಯಲ್ಲಿರುವ ಸೈನರ್ ಲೈಫ್ ಸೈನ್ಸ್​ನಲ್ಲಿ ಗ್ಯಾಸ್​ ಸೋರಿಕೆಯಾಗಿದೆ.


ಇಂದು ಮುಂಜಾನೆ ನಡೆದ ಈ ಘಟನೆಯಿಂದ ಸುತ್ತಮುತ್ತಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಕೂಡ ವಿಶಾಖಪಟ್ಟಣಂನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ವಿಶಾಖಪಟ್ಟಣಂ ಜಿಲ್ಲೆಯ ಆರ್.ಆರ್. ವೆಂಕಟಪುರಂನ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲದ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿತ್ತು. ಬೆಳ್ಳಂಬೆಳಗ್ಗೆ ಸಂಭವಿಸಿದ ಈ ದುರಂತದಲ್ಲಿ 13ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 1 ಸಾವಿರಕ್ಕೂ ಹೆಚ್ಚು ಜನರು ವಿಷಾನಿಲ ಸೇವನೆಯಿಂದ ಆಸ್ಪತ್ರೆ ಸೇರಿದ್ದರು. ಹಸು, ಸಾಕುಪ್ರಾಣಿಗಳು ರಸ್ತೆಯಲ್ಲಿ ಸತ್ತುಬಿದ್ದಿದ್ದವು. ಆ ದುರಂತದ ಆಘಾತವನ್ನು ಮರೆಯುವ ಮೊದಲೇ ಇದೀಗ ಮತ್ತೊಮ್ಮೆ ವಿಷಾನಿಲ ಸೋರಿಕೆಯಾಗಿದೆ.

top videos


    ಇದನ್ನೂ ಓದಿ: ವಿಶಾಖಪಟ್ಟಣಂ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ; 11 ಸಾವು, 5,000ಕ್ಕೂ ಹೆಚ್ಚು ಜನ ಅಸ್ವಸ್ಥ



    ಇಂದಿನ ವಿಷಾನಿಲ ಸೋರಿಕೆ ಘಟನೆಯಲ್ಲಿ ಸಾವನ್ನಪ್ಪಿದ್ದವರನ್ನು ನರೇಂದ್ರ ಮತ್ತು ಗೌರಿ ಶಂಕರ್ ಎಂದು ಗುರುತಿಸಲಾಗಿದೆ. ನರೇಂದ್ರ ಎಂಬುವವರು ಸೈನರ್ ಲೈಫ್ ಸೈನ್ಸ್​ನ ಶಿಫ್ಟ್​ ಮೇಲ್ವಿಚಾರಕರಾಗಿದ್ದರು. ಘಟನೆ ನಡೆದಾಗ ಸುಮಾರು 30 ಜನರು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ವಿಷಯ ತಿಳಿದ ಕೂಡಲೆ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲಾಗಿದೆ. ಅನಿಲ ಹೆಚ್ಚು ದೂರದವರೆಗೆ ಹರಡಿಲ್ಲ. ಹೀಗಾಗಿ, ಹೆಚ್ಚಿನ ಅಪಾಯವೇನೂ ಆಗಿಲ್ಲ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

    First published: