ಛತ್ತೀಸ್ಗಢದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಬಿಲಾಸ್ಪುರದ ಖುಟಾಘಾಟ್ ಡ್ಯಾಂನಿಂದ ನೀರನ್ನು ಹೊರಬಿಡಲಾಗಿದೆ. ಡ್ಯಾಂನಿಂದ ಹೊರಬಿಟ್ಟ ನೀರಿಗೆ ಸೇತುವೆಯಿಂದ ಹಾರಿದ ವ್ಯಕ್ತಿಯೊಬ್ಬ ನೀರಿನಿಂದ ದಡಕ್ಕೆ ಬರಲಾಗದೆ ಬರೋಬ್ಬರಿ 16 ಗಂಟೆ ನೀರಿನಲ್ಲಿ ಮರದ ಕೊಂಬೆ ಹಿಡಿದುಕೊಂಡು ಜೀವ ಕೈಯಲ್ಲಿ ಹಿಡಿದುಕೊಂಡು ಕಾಯುತ್ತಿದ್ದಾನೆ. ಆತನನ್ನು ರಕ್ಷಣೆ ಮಾಡಲು ಸಾಧ್ಯವಾಗದೆ ಕೊನೆಗೆ ವಾಯುಪಡೆಯ ಸಿಬ್ಬಂದಿ ಹೆಲಿಕಾಪ್ಟರ್ ಮೂಲಕ ಆತನನ್ನು ರಕ್ಷಿಸಿದ್ದಾರೆ.
ಛತ್ತೀಸ್ಗಢದ ಬಿಲಾಸ್ಪುರದಲ್ಲಿ ಭಾರೀ ಮಳೆಯಾಗಿರುವುದರಿಂದ ಖುಟಘಾಟ್ ಡ್ಯಾಂ ಬಳಿ ನೀರನ್ನು ನೋಡಲು ಜನರು ಸೇರಿದ್ದರು. ಈ ವೇಳೆ ಸೇತುವೆಯಿಂದ ನೀರಿಗೆ ಹಾರಿದ ಯುವಕನಿಗೆ ದಡ ಸೇರಲು ಸಾಧ್ಯವಾಗಲಿಲ್ಲ. ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ಅಣೆಕಟ್ಟಿನಿಂದ ಹೆಚ್ಚಿನ ನೀರನ್ನು ಹೊರಗೆ ಬಿಡಲಾಗಿದೆ. ಆದರೆ, ಆತನಿಗೆ ಈಜಿ ದಡ ಸೇರಲು ಸಾಧ್ಯವಾಗದೆ ಪ್ರವಾಹದ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದಾಗ ನೀರಿನ ದಡದಲ್ಲಿದ್ದ ಮರದ ಕೊಂಬೆಯನ್ನು ಹಿಡಿದ ವ್ಯಕ್ತಿ ಸಹಾಯಕ್ಕಾಗಿ ಅಂಗಲಾಚಿದ್ದ. ನಿನ್ನೆಯಿಂದ ಸತತ 16 ಗಂಟೆಗಳ ಕಾಲ ಆ ರೆಂಬೆಯನ್ನು ಹಿಡಿದುಕೊಂಡು ಜೀವ ಉಳಿಸಿಕೊಳ್ಳಲು ಕಾಯುತ್ತಿದ್ದ. ಆತನನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಪ್ರಚೋದನಕಾರಿ ಭಾಷಣದಿಂದ ಜೈಲು ಸೇರಿದ್ದ ಡಾ. ಕಫೀಲ್ ಖಾನ್ ಬಂಧನದ ಅವಧಿ 3 ತಿಂಗಳು ವಿಸ್ತರಣೆ
ನೀರಿನ ಪ್ರವಾಹ ಹೆಚ್ಚಾಗಿದ್ದರಿಂದ ಯಾರಿಗೂ ಆತನನ್ನು ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಬಿಲಾಸ್ಪುರ ಡ್ಯಾಂ ಬಳಿ ಪೊಲೀಸ್ ಅಧಿಕಾರಿಗಳ ತಂಡ ರಕ್ಷಣೆಗಾಗಿ ತೆರಳಿದ್ದರು. ನಿನ್ನೆ ಸಂಜೆಯಿಂದ ಪೊಲೀಸ್ ಅಧಿಕಾರಿಗಳು ವ್ಯಕ್ತಿಯ ರಕ್ಷಣೆಗಾಗಿ ಭಾರತೀಯ ವಾಯುಸೇನೆಯ ನೆರವನ್ನು ಕೋರಿದ್ದರು. ಇಂದು ಬೆಳಗ್ಗೆ ವಾಯುಪಡೆಯ ಸಿಬ್ಬಂದಿ ಹೆಲಿಕಾಪ್ಟರ್ ಸಹಾಯದಿಂದ ನೀರಿನ ಮಧ್ಯೆ ಸಿಲುಕಿದ್ದ ಯುವಕನನ್ನು ರಕ್ಷಿಸಿದ್ದಾರೆ.
@IAF_MCC conducted an incredible rescue operation to rescue a man at Khutaghat dam in Bilaspur, He was stuck in the heavy flow, he sat on a stone, holding onto a tree to save himself for almost 16 hrs! After an arduous night, the IAF airlifted the man @ndtv @ndtvindia #IAF pic.twitter.com/CMI3pP9NcN
— Anurag Dwary (@Anurag_Dwary) August 17, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ