ಬೀದಿ ತರಕಾರಿ ವ್ಯಾಪಾರಿಯೊಬ್ಬರು (Vendor) ರೈಲಿಗೆ ಸಿಲುಕಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh ) ಕಾನ್ಪುರದಲ್ಲಿ (Kanpur) ಶುಕ್ರವಾರ ಸಂಜೆ (ಡಿ.2) ನಡೆದಿದೆ. ಕಾನ್ಪುರದ ಕಲ್ಯಾಣಪುರ ಪ್ರದೇಶದಲ್ಲಿ ರೈಲ್ವೆ ಹಳಿಯ ಮೇಲೆ ಬಿದ್ದ ತರಕಾರಿ ತಕ್ಕಡಿಯನ್ನು ತೆಗೆದುಕೊಳ್ಳಲು ಹೋದಾಗ ಏಕಾಏಕಿ ವ್ಯಾಪಾರಿಯ ಮೇಲೆ ರೈಲು ಹರಿದಿದೆ. ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರು (Police) ದರ್ಪ ಮೆರೆದಿದ್ದು, ಆ ವ್ಯಾಪಾರಿಯ ತರಕಾರಿ, ತಕ್ಕಡಿ ಮುಂತಾದವುಗಳನ್ನು ರೈಲ್ವೆ ಟ್ರ್ಯಾಕ್ ಗೆ ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವ್ಯಕ್ತಿ ತನ್ನ ಎರಡು ಕಾಲನ್ನು ಕಳೆದುಕೊಂಡು ಅಸಹಾಯಕನಾಗಿ ರೈಲ್ವೆ ಟ್ರ್ಯಾಕ್ (Train track) ಮೇಲೆ ಬಿದ್ದು ನರಳಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ.
ಘಟನೆಯ ವಿವರ ಹೀಗಿದೆ
ಜಿ.ಟಿ. ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಇಂದಿರಾ ನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶಾದಾಬ್ ಖಾನ್ ಮತ್ತು ಹೆಡ್ ಕಾನ್ಸ್ಟೆಬಲ್ ಇರ್ಫಾನ್ ಅಲಿಯಾಸ್ ಲಡ್ಡೂ ಎಂಬ ವ್ಯಾಪಾರಿಯ ಸ್ಕೇಲ್, ತೂಕದ ಕಲ್ಲು ಮತ್ತು ತರಕಾರಿಗಳನ್ನು ರೈಲ್ವೆ ಹಳಿಗಳ ಕಡೆಗೆ ಎಸೆದ್ದಿದ್ದಾರೆ. ಈ ಹಿನ್ನೆಲೆ ವ್ಯಾಪಾರಿಯು ಅದನ್ನು ಎತ್ತಿಕೊಳ್ಳಲು ಹೋಗುತ್ತಿದ್ದಾಗ ರೈಲು ಬಂದು ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ತರಕಾರಿ ಮುಂತಾದ ವಸ್ತುಗಳನ್ನು ಎಸೆದ ಪೊಲೀಸರು ಆ ವ್ಯಾಪಾರಿ ಗಾಯಗೊಂಡಿರುವುದನ್ನು ನೋಡಿದರೂ ಆತನ ಕಡೆಗೆ ನೋಡದೆ ಖಾಕಿ ದರ್ಪ ಮೆರೆದಿದ್ದಾರೆ ಎಂದು ವರದಿಯಾಗಿದೆ.
From Kanpur !
Policemen threw away a street vendor Irfan's articles on railway tracks in Kalyanpur.
He was hit by Memu train while picking them back. He has lost both his legs.
Police were clearing sides of GT Road of vendors selling vegetables, and other goods.@haidarpur pic.twitter.com/J5ghRPjI3w
— H Sultan (@h__sultan__) December 2, 2022
ಇರ್ಫಾನ್ ಅಲಿಯಾಸ್ ಲಡ್ಡೂ ಎಂಬ ವ್ಯಾಪಾರಿಯಯನ್ನು ಕಾನ್ಪುರದ ಎಲ್ಎಲ್ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ನನ್ನ ಮಗನ ಎರಡೂ ಕಾಲುಗಳು ಸ್ಥಳದಲ್ಲೇ ತುಂಡಾಗಿದೆ ಎಂದು ವ್ಯಾಪಾರಿಯ ತಂದೆ ಸಲೀಂ ಅಹ್ಮದ್ ದುಃಖ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಅನಾಗರಿಕ ರೀತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದೂ ಆರೋಪ ಮಾಡಿದ್ದಾರೆ .
ಮಾರಾಟಗಾರರಿಂದ ದಿನಕ್ಕೆ 50 ರೂ. ಪಡೆಯುವ ಪೊಲೀಸರು
ಪ್ರತಿ ಮಾರಾಟಗಾರರಿಂದ ದಿನಕ್ಕೆ 50 ರೂಪಾಯಿಗಳನ್ನು ಪಡೆಯುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೀಗಿದ್ದರೂ ಅವರ ಖಾಕಿ ದರ್ಪ ನಿಲ್ಲುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
#POLICE_COMMISSIONERATE_KANPUR_NAGAR के थाना कल्याणपुर क्षेत्रान्तर्गत एक युवक की ट्रेन की चपेट में आने के कारण गम्भीर रूप से घायल हो जाने के प्रकरण में मुख्य आरक्षी को निलंबित कर, की जा रही कार्यवाही के सम्बन्ध में श्री विजय ढुल पुलिस उपायुक्त पश्चिम द्वारा दी गई बाइट। @Uppolice pic.twitter.com/ttM8oCafoW
— POLICE COMMISSIONERATE KANPUR NAGAR (@kanpurnagarpol) December 2, 2022
ಇದನ್ನೂ ಓದಿ: Trend: ಮೊಟ್ಟೆಗಳನ್ನು ಬಾಹ್ಯಾಕಾಶದಿಂದ ಬಿಟ್ಟರೂ ಒಡೆಯುತ್ತಿಲ್ಲ, ಸಖತ್ ವೈರಲ್ ಆಗ್ತಿದೆ ಈ ವಿಡಿಯೋ
ಘಟನೆಯ ಬಗ್ಗೆ ಡಿಸಿಪಿ ಹೇಳಿದ್ದೇನು ?
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪಶ್ಚಿಮ ಹೆಚ್ಚುವರಿ ಡಿಸಿಪಿ ಲಖನ್ ಯಾದವ್, ಇರ್ಫಾನ್ ಅಲಿಯಾಸ್ ಲಡ್ಡೂ ರೈಲ್ವೆ ಹಳಿಯ ಹತ್ತಿರ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು. ಆ ವೇಳೆ, ಪೊಲೀಸರು ಬಂದು ಆತನಿಗೆ ಸ್ಥಳ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾಗ ಆ ವ್ಯಾಪಾರಿಯ ಸ್ಕೇಲ್ ಇತರ ಸಾಮಾನುಗಳು ರೈಲ್ವೆ ಹಳಿಗಳ ಮೇಲೆ ಬಿದ್ದಿದೆ.
ಈ ಸಮಯದಲ್ಲಿ ಏಕಾಏಕಿ ರೈಲು ಆತನ ಮೇಲೆ ಹರಿದಿದೆ. ವ್ಯಾಪಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು, ಪೊಲೀಸರು ಪ್ರತಿ ಮಾರಾಟಗಾರರಿಂದ ದಿನಕ್ಕೆ 50 ರೂಪಾಯಿ ಪಡೆಯುತ್ತಾರೆ. ಆದರೂ ಅವರನ್ನು ಎಂಬ ಸ್ಥಳೀಯರ ಆರೋಪವನ್ನು ಡಿಸಿಪಿ ಯಾದವ್ ತಳ್ಳಿಹಾಕಿದ್ದು, ಈ ಪ್ರದೇಶದಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವುದು ನಿತ್ಯ ನಡೆಯುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ