ಲಖನೌ: ಇಡೀ ಭಾರತದಲ್ಲೇ ಅತ್ಯಂತ ಕೀಳುಮಟ್ಟದ ರಾಜಕೀಯಕ್ಕೆ ಉತ್ತರಪ್ರದೇಶವೇ ಮೇಲುಗೈ. ಇದಕ್ಕೆ ಈ ಹಿಂದಿನ ಅನೇಕ ಘಟನೆಗಳು ಸಾಕ್ಷಿ ನುಡಿದಿವೆ. ಈ ಸಾಲಿಗೆ ಇಂದು ಮತ್ತೊಂದು ಹೇಸಿಗೆಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಉತ್ತರಪ್ರದೇಶದಲ್ಲಿ ಸ್ಥಳೀಯ ಚುನಾವಣೆಗಳು ನಡೆಯುತ್ತಿದ್ದು, ಇತ್ತೀಚೆಗೆ ಫಲಿತಾಂಶ ಸಹ ಹೊರಬಿದ್ದು, ಸದ್ದು ಮಾಡಿತ್ತು. ಈ ನಡುವೆ ಗುರುವಾರ ಸ್ಥಳೀಯ ಚುಣಾವಣೆಗೆ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದ ಮಹಿಳಾ ಕಾರ್ಯಕರ್ತೆಯು ಆಕ್ರಮಣಕ್ಕೆ ಒಳಗಾಗಿದ್ದು, ಪ್ರತಿಪಕ್ಷದ ಇಬ್ಬರು ಗಂಡಸರು ಆಕೆಯ ಸೀರೆಯನ್ನು ಎಳೆದಿರುವ ಹೇಯ ಘಟನೆ ಬೆಳಕಿಗೆ ಬಂದಿದೆ.
लोकतंत्र लोकलाज से चलता है। मर्यादा और कानून से संचालित होता है। एक महिला क्षेत्र पंचायत सदस्य का लखीमपुर खीरी में चीरहरण का सार्वजनिक सामूहिक प्रयास हुआ। ये लोकतंत्र की मर्यादा को कलंकित करता है। ये घनघोर अपमान है समाज का। ऐसे दुष्कृत्य करने वालों को सार्वजनिक सजा मिलनी चाहिए। pic.twitter.com/RCqyIrdDhv
— Brajesh Misra (@brajeshlive) July 8, 2021
ಇದನ್ನೂ ಓದಿ: Petrol Price Today| ದಿನೇ ದಿನೇ ದುಬಾರಿಯಾಗುತ್ತಿದೆ ಪೆಟ್ರೋಲ್; ರಾಜಸ್ಥಾನದಲ್ಲಿ112ಕ್ಕೇರಿದ ತೈಲ ಬೆಲೆ!
"825 ಬ್ಲಾಕ್ ಪಂಚಾಯತ್ ಮುಖಂಡರನ್ನು ಆಯ್ಕೆ ಮಾಡುವ ಚುನಾವಣೆಯು ಶನಿವಾರ ನಡೆಯಲಿದೆ. ನಾಮಪತ್ರ ಸಲ್ಲಿಸಲು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದಾಗ್ಯೂ 14 ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿದೆ. ಗುಂಪುಗಳ ನಡುವೆ ನಡೆದಿರುವ ಘರ್ಷಣೆಯ ವರದಿಗಳು ನಮ್ಮಲ್ಲಿವೆ. ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯ ಪ್ರದೇಶದಲ್ಲಿ ನಿದ್ದೆ ಮಾಡುವಾಗ ಪತಿಯ ಕೊಲೆ: ಪತ್ನಿಯ ಮೇಲೆ ಪೊಲೀಸರಿಗೆ ಅನುಮಾನ..!
ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಈ ಚುನಾವಣೆಯು ಸಾಕಷ್ಟು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಭಾರಿ ಅಂತರದಲ್ಲಿ ಗೆದ್ದಿತ್ತು. ಬ್ಲಾಕ್ ಪ್ರಮುಖ್ ಚುನಾವಣೆಗಳು ವಿಧಾನಸಭಾ ಚುನಾವಣೆಗೂ ಮುಂಚೆ ನಡೆಲಿರುವ ಕೊನೆಯ ಗ್ರಾಮೀಣ ಚುನಾವಣೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ