ಗ್ರಾಮಾಂತರದಲ್ಲಿ ಲಸಿಕೆ ಹಿಂಜರಿಕೆಯು ಆಳವಾಗಿ ಬೇರೂರಿದೆ, ಇದರ ವಿರುದ್ಧ ಹೋರಾಡಲು, UP ಸರ್ಕಾರವು ಇತ್ತೀಚೆಗೆ Network18 ಮತ್ತು Federal Bank- ನೇತೃತ್ವದ ಲಸಿಕೆ ಜಾಗೃತಿ ಉಪಕ್ರಮ, ಸಂಜೀವನಿ-ಎ ಶಾಟ್ ಆಫ್ ಲೈಫ್ನೊಂದಿಗೆ ಕೈಜೋಡಿಸಿತು. ಭಾರತದ ಅತಿದೊಡ್ಡ ಲಸಿಕೆ ಜಾಗೃತಿ ಅಭಿಯಾನದೊಂದಿಗೆ ಸಹಕರಿಸುವ ಮೂಲಕ, ಯೋಗಿ ಸರ್ಕಾರವು ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ರಾಜ್ಯದಲ್ಲಿ 100% ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಿದೆ.
COVID-19 ಪ್ರಕರಣಗಳು ಹೆಚ್ಚಾಗತೊಡಗಿದಂತೆ ಮತ್ತು ಮೂರನೆಯ ಅಲೆಯ ಭಯವು ಕಾಣದಂತೆ ಎಲ್ಲೆಡೆ ಇದ್ದುದರಿಂದ, ರಾಜ್ಯ ಸರ್ಕಾರಗಳು ಸಾಮೂಹಿಕ ಲಸಿಕೆ ಹಾಕಲು ಸಜ್ಜಾಗಿವೆ. ಲಸಿಕೆ ಹಾಕುವಲ್ಲಿ ಉತ್ತರ ಪ್ರದೇಶವು ಈಗಾಗಲೇ ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ ಮತ್ತು ಇತ್ತೀಚೆಗೆ 5.50 ಕೋಟಿಗಿಂತ ಹೆಚ್ಚು ಡೋಸ್ಗಳನ್ನು ನೀಡುವ ಮೂಲಕ ಮತ್ತು ಇದುವರೆಗೆ 5,51,27,657 ಜನರಿಗೆ ಲಸಿಕೆ ಹಾಕುವ ಮೂಲಕ ಒಂದು ಮೈಲಿಗಲ್ಲನ್ನು ಸಾಧಿಸಿದೆ ಎಂದು ಹೇಳಬಹುದು.
ಲಸಿಕೆ ಪಡೆದವರ ಸಂಖ್ಯೆ ಹೆಚ್ಚಾಗಿದ್ದರೂ , ರಾಜ್ಯದ ಗ್ರಾಮೀಣ ಜನಸಮೂಹದ ಹೆಚ್ಚಿನ ಭಾಗವು ಲಸಿಕೆಯ ಕುರಿತು ಇರುವ ಮೂಢನಂಬಿಕೆಗಳು ಮತ್ತು ತಪ್ಪು ಮಾಹಿತಿಯ ಪ್ರಭಾವದಿಂದ ಲಸಿಕೆ ಪಡೆಯಲು ಇಷ್ಟವಿರುವುದಿಲ್ಲ. ಸಂಜೀವಿನಿಯೊಂದಿಗಿನ ಪಾಲುದಾರಿಕೆಯ ಮೂಲಕ, ರಾಜ್ಯ ಸರ್ಕಾರವು ಜನರನ್ನು ಜಾಗೃತಗೊಳಿಸುವಲ್ಲಿ ಮತ್ತು ಲಸಿಕೆ ಪಡೆಯಲು ಮನವೊಲಿಸುವಲ್ಲಿ ಗ್ರಾಮೀಣ ಪ್ರದೇಶಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.
ಜಾಗೃತಿ ಮೂಡಿಸಲು ಮತ್ತು ಜನರನ್ನು ಲಸಿಕೆ ಪಡೆಯಲು ಪ್ರೋತ್ಸಾಹಿಸಲು ಅಮೃತಸರದ ಅಟ್ಟಾರಿ ಬಾರ್ಡರ್ ನಿಂದ 7 ಏಪ್ರಿಲ್ 2021 ರಂದು ಸಂಜೀವನಿ ಆರಂಭಿಸಲಾಯಿತು. ಮೂಲದಿಂದ ಲಸಿಕೆ ಹಿಂಜರಿಕೆಯ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ, ಆರಂಭವಾದ ಅಭಿಯಾನ, 'ಸಂಜೀವನಿ ಗಾಡಿ' ಐದು COVID-19 ಪೀಡಿತ ಜಿಲ್ಲೆಗಳ ಅನೇಕ ಹಳ್ಳಿಗಳಿಗೆ ಹೋಯಿತು. ರಸ್ತೆಯಲ್ಲಿ ಲಸಿಕೆ ಹಾಕುವ ಅಭಿಯಾನವನ್ನು ಮುಂದುವರೆಸುತ್ತಾ, ಅಟ್ಟಾರಿಯಿಂದ ದಕ್ಷಿಣ ಕನ್ನಡದವರೆಗೆ, ವಾಹನವು 500 ಕ್ಕೂ ಹೆಚ್ಚು ಗ್ರಾಮಗಳನ್ನು ತಲುಪಿದೆ. ಮನೆ ಬಾಗಿಲಿಗೆ ಮಾಹಿತಿ ನೀಡುತ್ತಾ, 24/7 WhatsApp ಮತ್ತು ಚಾಟ್ ಬೆಂಬಲದೊಂದಿಗೆ, ಅಭಿಯಾನವು ಕೊನೆಯ ಮೈಲಿಗೆ ವ್ಯಾಕ್ಸಿನೇಷನ್ ಜಾಗೃತಿಯನ್ನು ಬಹುದೂರ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಜಾಗೃತಿ ಮೂಡಿಸುವ ಮೂಲಕ ಮತ್ತು COVID-19 ಲಸಿಕೆ-ಸಂಬಂಧಿತ ಮೂಢನಂಬಿಕೆಗಳನ್ನು ಹೋಗಲಾಡಿಸುವ ಮೂಲಕ, ಈ ಸಹಕಾರವು UP ಯ ಮುಂದುವರಿದ ಪ್ರಭಾವಶಾಲಿ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಹೆಚ್ಚಿನ ವೇಗವನ್ನು ನೀಡುತ್ತದೆ.
By Shruti Bhatt / AUGUST 13, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ