• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Ukraine: ಸಹಾಯ ಮಾಡಿದ್ದ ಭಾರತದ ವಿರುದ್ಧವೇ ಉಕ್ರೇನ್ ಕಿಡಿಗೇಡಿ ಕೃತ್ಯ; ಕಾಳಿ ಮಾತೆ ಫೋಟೋಗೆ ಅಪಮಾನ, ಆಕ್ರೋಶದ ಬೆನ್ನಲ್ಲೇ ಡಿಲೀಟ್!

Ukraine: ಸಹಾಯ ಮಾಡಿದ್ದ ಭಾರತದ ವಿರುದ್ಧವೇ ಉಕ್ರೇನ್ ಕಿಡಿಗೇಡಿ ಕೃತ್ಯ; ಕಾಳಿ ಮಾತೆ ಫೋಟೋಗೆ ಅಪಮಾನ, ಆಕ್ರೋಶದ ಬೆನ್ನಲ್ಲೇ ಡಿಲೀಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉಕ್ರೇನ್‌ ರಕ್ಷಣಾ ಸಚಿವಾಲಯವು ತಮ್ಮ ಅಧಿಕೃತ ಟ್ವೀಟ್‌ನಲ್ಲಿ ಹಿಂದೂ ದೇವತೆ ಕಾಳಿಯನ್ನು ವಿಚಿತ್ರ ಭಂಗಿಯಲ್ಲಿ ಚಿತ್ರಿಸಿ ಪೋಸ್ಟ್‌ ಮಾಡಿದೆ. ಇದನ್ನು ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • Share this:

ಹಿಂದೂಗಳ (Hindu) ಭಾವನೆಗೆ ಧಕ್ಕೆ ತರುವಂತಹ, ಹಿಂದೂಗಳ ದೇವರುಗಳನ್ನು ಅಪಮಾನಿಸುವಂಥ ಘಟನೆಗಳು ಜಗತ್ತಿನಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ ಅನ್ನೋದು ಕಹಿ ಸತ್ಯ . ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ )Social Media Post) ಮಾಡುವ ಮೂಲಕ ಉಕ್ರೇನ್‌ ರಕ್ಷಣಾ ಸಚಿವಾಲಯವು (Ministry of Defense of Ukraine) ಇಂಥದ್ದೇ ಒಂದು ನಾಚಿಕೆಗೇಡಿನ ಕೆಲಸವನ್ನು ಮಾಡಿದೆ. ಹೌದು, ಉಕ್ರೇನ್‌ ರಕ್ಷಣಾ ಸಚಿವಾಲಯವು ತಮ್ಮ ಅಧಿಕೃತ ಟ್ವೀಟ್‌ನಲ್ಲಿ ಹಿಂದೂ ದೇವತೆ ಕಾಳಿಯನ್ನು (Hindu goddess Kali) ವಿಚಿತ್ರ ಭಂಗಿಯಲ್ಲಿ ಚಿತ್ರಿಸಿ ಪೋಸ್ಟ್‌ ಮಾಡಿದೆ.


ಆಕ್ಷೇಪಾರ್ಹ ಟ್ವೀಟ್‌ನಲ್ಲಿ ಏನಿತ್ತು?


ಉಕ್ರೇನ್ ರಕ್ಷಣಾ ಸಚಿವಾಲಯವು ಮಾಡಿದ್ದ ಟ್ವೀಟ್‌ನಲ್ಲಿ ಹಿಂದೂ ದೇವತೆ ಕಾಳಿಯನ್ನು ರಷ್ಯಾದ ಸ್ಫೋಟದ ಹೊಗೆಯ ಮೇಲೆ ವಿಚಿತ್ರವಾದ ಭಂಗಿಯಲ್ಲಿ ಚಿತ್ರಿಸಲಾಗಿತ್ತು. "ವರ್ಕ್ ಆಫ್ ಆರ್ಟ್” ಎಂಬ ಶೀರ್ಷಿಕೆ ನೀಡಿ, ಭಾರತೀಯ ದೇವತೆ ಕಾಳಿಯನ್ನು ಹಾಲಿವುಡ್ ನಟಿ ಮರ್ಲಿನ್ ಮನ್ರೋಗೆ ಹೋಲುವಂಥ ಚಿತ್ರವನ್ನು ಪೋಸ್ಟ್ ಮಾಡಿತ್ತು.


ಚಿತ್ರವು ಅದು ಪೂಜ್ಯ ಹಿಂದೂ ದೇವತೆ ಕಾಳಿಯ ನೀಲಿ ಚರ್ಮದ ಬಣ್ಣ, ನಾಲಿಗೆ ಚಾಚಿಕೊಂಡಿರುವ ಭಂಗಿ ಮತ್ತು ಕುತ್ತಿಗೆಗೆ ತಲೆಬುರುಡೆಯ ಮಾಲೆಯನ್ನು ಹೋಲುತ್ತದೆ.


ಇದನ್ನೂ ಓದಿ: ಈ ಸೀಟ್​ನಿಂದ ನನ್ನ ಹಿಂಭಾಗಕ್ಕೆ​ ಡ್ಯಾಮೇಜ್ ಆಯ್ತು ಎಂದ ಪ್ರಯಾಣಿಕ!


ತರಾಟೆಗೆ ತೆಗೆದುಕೊಂಡ ನೆಟ್ಟಿಗರಿಂದ ಡಿಲೀಟ್‌ ಮಾಡಲು ಒತ್ತಾಯ


ಸ್ಫೋಟದ ಹೊಗೆಯ ಮೇಲಿರುವ ಸ್ತ್ರೀ ಆಕೃತಿಯ ಮಾರ್ಫ್ ಮಾಡಿದ ಚಿತ್ರವು ಸೋಶಿಯಲ್‌ ಮೀಡಿಯಾದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯ್ತು. ಹಿಂದೂಗಳ ಭಾವನೆಯನ್ನು ಕೆಣಕುವಂಥ ಇಂಥ ಚಿತ್ರವನ್ನು ಪೋಸ್ಟ್‌ ಮಾಡಿದ ಬೆನ್ನಲ್ಲೇ ಉಕ್ರೇನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಭುಗಿಲೆದ್ದಿತು.


ವ್ಯಂಗ್ಯಚಿತ್ರವನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ, ಟ್ವೀಟ್ ಭಾರೀ ಹಿನ್ನಡೆಯನ್ನು ಪಡೆಯಿತು. ರಕ್ಷಣಾ ಸಚಿವಾಲಯವು ಟ್ವಿಟ್ಟರ್‌ ಪೋಸ್ಟ್ ಅನ್ನು ಅಳಿಸಲು ತೀವ್ರ ಒತ್ತಾಯ ಕೇಳಿಬಂತು. ಉಕ್ರೇನ್‌ ಪೋಸ್ಟ್‌ ಮಾಡಿದ್ದ ಚಿತ್ರ ಹಿಂದೂ ದೇವತೆ ಕಾಳಿಯನ್ನು ಹೋಲುತ್ತದೆ. ಅದು ಹಿಂದೂಗಳಿಗೆ ತೋರಿದ ಅಗೌರವ ಎಂದು ನೆಟಿಜನ್‌ಗಳು ಆರೋಪಿಸಿದ್ದಾರೆ.


ಸಾಂದರ್ಭಿಕ ಚಿತ್ರ


ಭಾರತದಲ್ಲಿ ಅನೇಕ ಟ್ವಿಟ್ಟರ್ ಬಳಕೆದಾರರು ಸಾಮಾಜಿಕ ವೇದಿಕೆಯ ಸಿಇಒ ಎಲೋನ್ ಮಸ್ಕ್ ಮತ್ತು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಟ್ಯಾಗ್ ಮಾಡಲು ಪ್ರಾರಂಭಿಸಿದರು. ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.


ಒಬ್ಬ ಬಳಕೆದಾರರು, " "ಪೂಜ್ಯ ಹಿಂದೂ ದೇವತೆಯಾದ ಮಹಾಕಾಳಿಯನ್ನು ಅಪಹಾಸ್ಯ ಮಾಡುವುದನ್ನು ಉಕ್ರೇನಿಯನ್ ರಕ್ಷಣಾ ಹ್ಯಾಂಡಲ್ ಅನ್ನು ನೋಡಿ ನಾನು ಸಂಪೂರ್ಣವಾಗಿ ದಿಗ್ಭ್ರಮೆಗೊಂಡಿದ್ದೇನೆ. ಇದು ಸಂವೇದನಾಶೀಲತೆ ಮತ್ತು ಅಜ್ಞಾನದ ಪ್ರದರ್ಶನವಾಗಿದೆ. ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಲು ಮತ್ತು ಕ್ಷಮೆಯಾಚಿಸಲು ನಾನು ಆಗ್ರಹಿಸುತ್ತೇನೆ” ಎಂದು ಹೇಳಿದ್ದಾರೆ.


“ಇಂತಹ ಕಾರ್ಟೂನ್‌ಗಳನ್ನು ಮಾಡಿ ನಮ್ಮ ನಂಬಿಕೆಗೆ ಅಪಮಾನ ಮಾಡಿದ್ದಕ್ಕಾಗಿ ನಾಚಿಕೆಯಾಗಬೇಕು! ಸಂಪೂರ್ಣ ಅಸಹ್ಯಕರ ಪ್ರಯತ್ನ” ಎಂದು ಮತ್ತೊಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ. ಕೆಲವರು ತಮ್ಮ "ರಷ್ಯಾ ಬೆಂಬಲಕ್ಕಾಗಿ" ಉಕ್ರೇನ್ ಸಚಿವಾಲಯ "ಭಾರತೀಯರ ಭಾವನೆಗಳನ್ನು ನೋಯಿಸುವ" ಪೋಸ್ಟ್ ಮಾಡಿದೆ ಎಂದು ಬರೆದಿದ್ದಾರೆ.


ಆಕ್ರೋಶದ ಬೆನ್ನಲ್ಲೇ ಟ್ವೀಟ್‌ ಡಿಲೀಟ್!‌


ಇನ್ನು, ಅನೇಕರು ಪೋಸ್ಟ್‌ಗಳನ್ನು ಖಂಡಿಸಿದರೆ, ಇದು ಅನಗತ್ಯ ವಿವಾದ ಎಂದು ಹೇಳುವ ಕೆಲವು ಬಳಕೆದಾರರೂ ಇದ್ದರು. "ನಿಮ್ಮಷ್ಟಕ್ಕೇ ಎಚ್ಚರಗೊಳ್ಳಿ, ಇದು ಕೇವಲ ಕಾರ್ಟೂನ್ ಮತ್ತು ತಮಾಷೆಯಾಗಿದೆ. ನೀವು ತುಂಬಾ ಎತ್ತರದಲ್ಲಿರುವಿರಿ ಎಂದು ಕೆಲ ಬಳಕೆದಾರರು ಟ್ವೀಟ್ ಮಾಡಿದ್ದಾರೆ.




ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ಎದುರಾದ ಬೆನ್ನಲ್ಲೇ ಉಕ್ರೇನ್ ರಕ್ಷಣಾ ಸಚಿವಾಲಯ ಟ್ವೀಟ್‌ಅನ್ನು ಡಿಲೀಟ್‌ ಮಾಡಿದೆ. ಇನ್ನು, ಉಕ್ರೇನ್ ರಕ್ಷಣಾ ಸಚಿವಾಲಯವು ಈ ವಿವಾದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

top videos


    ಒಟ್ಟಾರೆ, ಇಂಥ ಹಿಂದೂ ದೇವರನ್ನು ಅಪಮಾನಿಸುವಂತಹ ಆಕ್ಷೇಪಾಯ ಸಂಗತಿಗಳು ಜಗತ್ತಿನ ವಿವಿಧ ಮೂಲೆಗಳಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಇಂದು ಸಾಮಾಜಿಕ ಮಾದ್ಯಮದ ಕಾಲದಲ್ಲಿ ಜನಸಾಮಾನ್ಯರು ಕೂಡ ಅದನ್ನು ತೀವ್ರವಾಗಿ ವಿರೋಧಿಸಲು ಹಾಗೂ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಅವಕಾಶವಿದೆ. ಇದರಿಂದ ಹಿಂದೂ ಧರ್ಮದ ದೇವತೆಗಳ ವಿರುದ್ಧ ವ್ಯಂಗ್ಯವಾಡುವ ಜನರಿಗೆ ಬುದ್ಧಿ ಕಲಿಸಿದಂತಾಗುತ್ತದೆ.

    First published: