ಸಾಮಾನ್ಯವಾಗಿ ಜನರು ಯಾವುದಾದರೂ ದೂರದ ಊರಿಗೆ ಹೋಗಬೇಕಾದರೆ ರೈಲಿನಲ್ಲಿ (Train) ಪ್ರಯಾಣಿಸಲು (Travel) ಹೆಚ್ಚು ಇಷ್ಟ ಪಡುತ್ತಾರೆ. ಏಕೆಂದರೆ ಅವರು ರಾತ್ರಿ ಪ್ರಯಾಣದಲ್ಲಿ (Night journey) ಚೆನ್ನಾಗಿ ನಿದ್ರಿಸುವುದರಿಂದ ಕಡಿಮೆ ಆಯಾಸವಾಗುತ್ತದೆ ಮತ್ತು ಅವರಿಗೆ ಮನೆಯ ರೀತಿಯ ಬಹುತೇಕ ಸೌಲಭ್ಯಗಳು ರೈಲಿನಲ್ಲಿ ದೊರೆಯುತ್ತವೆ ಎಂಬ ಕಾರಣಕ್ಕೆ (Reason) ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹಾಗೆಯೇ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸೌಲಭ್ಯಗಳನ್ನು (Facility) ಭಾರತೀಯ ರೈಲ್ವೆ ನಿರಂತರವಾಗಿ ಸುಧಾರಿಸುತ್ತಿದೆ ಅಂತಾನೆ ಹೇಳಬಹುದು.
ಮುಂದಿನ ಎರಡು ವರ್ಷಗಳಲ್ಲಿ 400 ಸೆಂ.ಮೀ ಹೈಸ್ಪೀಡ್ ರೈಲುಗಳನ್ನು ಓಡಿಸುವುದು ಭಾರತೀಯ ರೈಲ್ವೆಯ ಯೋಜನೆಯಾಗಿದೆ. ಆಗಸ್ಟ್ 15, 2023 ರ ವೇಳೆಗೆ, 75 ನಗರಗಳನ್ನು ವಂದೇ ಭಾರತ್ ರೈಲುಗಳೊಂದಿಗೆ ಸಂಪರ್ಕಿಸಲು ಸಿದ್ಧತೆಗಳು ನಡೆಯುತ್ತಿವೆ.
ರಾತ್ರಿ ಮಲಗಿದ್ದಾಗ ಇಳಿಯಬೇಕಾದ ನಿಲ್ದಾಣ ತಪ್ಪಿಹೋಗುವ ಭಯವಿಲ್ಲ
ಈಗಾಗಲೇ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಪ್ರಾರಂಭಿಸಿದೆ. ರೈಲ್ವೆಯ ಮತ್ತೊಂದು ಹೊಸ ಸೇವೆಯಿಂದ, ನೀವು ರಾತ್ರಿಯಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗುತ್ತದೆ ನೋಡಿ.
ಯಾವುದೇ ಪರಿಸ್ಥಿತಿಯಲ್ಲಿ ನೀವು ಇಳಿದುಕೊಳ್ಳುವ ನಿಲ್ದಾಣವನ್ನು ಕಳೆದುಕೊಳ್ಳುವ ಭಯ ನಿಮ್ಮನ್ನು ಈಗ ಕಾಡುವುದಿಲ್ಲ ಅಂತ ಹೇಳಬಹುದು. ಆದರೆ ಇದಕ್ಕಾಗಿ ನೀವು ರೈಲ್ವೆಯ ಈ ಹೊಸ ಸೇವೆಗೆ ಚಂದಾದಾರರಾಗಬೇಕು ಮತ್ತು ಅದಕ್ಕಾಗಿ ನಿಗದಿತ ಶುಲ್ಕವನ್ನು ಸಹ ನೀವು ಪಾವತಿಸಬೇಕಾಗುತ್ತದೆ.
ನೀವು ಇಳಿಯಬೇಕಾದ ನಿಲ್ದಾಣ ಬರುವ ಮುಂಚೆಯೇ ಎಚ್ಚರಗೊಳಿಸುತ್ತೆ
ರಾತ್ರಿ ಹೊತ್ತಿನಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಈ ಸೇವೆಯನ್ನು ಪ್ರಾರಂಭಿಸಿದೆ, ಅವರು ಪ್ರಯಾಣದ ಸಮಯದಲ್ಲಿ ಶಾಂತಿಯುತವಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ಈ ಸೌಲಭ್ಯದ ಅಡಿಯಲ್ಲಿ, ನೀವು ಇಳಿಯಬೇಕಾದ ನಿಲ್ದಾಣದ ಆಗಮನಕ್ಕೆ 20 ನಿಮಿಷಗಳ ಮೊದಲು ನಿಮ್ಮನ್ನು ಎಚ್ಚರಗೊಳಿಸಲಾಗುತ್ತದೆ.
ಇದರೊಂದಿಗೆ, ನೀವು ಪ್ರಯಾಣದಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗುತ್ತದೆ ಮತ್ತು ನಿಲ್ದಾಣವನ್ನು ಕಳೆದುಕೊಳ್ಳುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಈ ರೈಲ್ವೆ ಸೇವೆಯ ಹೆಸರು 'ಡೆಸ್ಟಿನೇಷನ್ ಅಲರ್ಟ್ ವೇಕ್ ಅಪ್ ಅಲಾರಾಂ' ಅಂತ ಹೇಳಲಾಗುತ್ತಿದೆ.
ಅನೇಕ ದೂರುಗಳ ನಂತರ ರೈಲ್ವೆ ಈ ಸೌಲಭ್ಯವನ್ನು ಪ್ರಾರಂಭಿಸಿದೆ..
ವಾಸ್ತವವಾಗಿ ರೈಲು ರಾತ್ರಿ ಹೊತ್ತಿನಲ್ಲಿ ತಡವಾಗಿದೆಯೇ ಅಥವಾ ಸರಿಯಾದ ಸಮಯವನ್ನು ಅನುಸರಿಸುತ್ತಿದೆ ಅಂತ ನಿದ್ರೆಯಲ್ಲಿ ಅನೇಕರಿಗೆ ಗೊತ್ತಾಗುವುದಿಲ್ಲ. ಎಷ್ಟೋ ಬಾರಿ ರೈಲು ತಡವಾಗಿದ್ದಾಗ, ಪ್ರಯಾಣಿಕರು ರೈಲಿನಲ್ಲಿ ನಿದ್ರಿಸುತ್ತಿದ್ದಾಗ ಮಧ್ಯೆ ಮಧ್ಯೆ ಎಚ್ಚರಗೊಂಡು ನಿಲ್ದಾಣ ಬಂತಾ ಅಂತ ನೋಡಬೇಕಾಗುತ್ತದೆ.
ಇಳಿಯಬೇಕಾದ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ ಎಂದು ಸಹ ರೈಲ್ವೆ ಮಂಡಳಿಗೆ ಅಂತಹ ಅನೇಕ ದೂರುಗಳು ಬಂದವು. ಅಂತಹ ಯಾವುದೇ ಸಮಸ್ಯೆಯನ್ನು ಇನ್ಮುಂದೆ ಪ್ರಯಾಣಿಕರು ಎದುರಿಸಬಾರದು ಅಂತ ರೈಲ್ವೆ ಈ ಸೌಲಭ್ಯವನ್ನು ಪ್ರಾರಂಭಿಸಿದೆ.
ಈ ಸೇವೆಯ ಪ್ರಯೋಜನವನ್ನು 139 ಸಂಖ್ಯೆಯ ವಿಚಾರಣಾ ಸೇವೆಯ ಮೂಲಕ ತೆಗೆದುಕೊಳ್ಳಬಹುದು.
ನೀವು 20 ನಿಮಿಷಗಳ ಮೊದಲೇ ಎಚ್ಚರಗೊಳ್ಳುತ್ತೀರಿ
ನೀವೂ ಸಹ ಈ ಸೇವೆಯನ್ನು ಪಡೆಯಲು ಬಯಸಿದರೆ, ನೀವು 139 ಸಂಖ್ಯೆ ವಿಚಾರಣಾ ವ್ಯವಸ್ಥೆಗೆ ಕರೆ ಮಾಡುವ ಮೂಲಕ ಎಚ್ಚರಿಕೆಯ ಸೌಲಭ್ಯವನ್ನು ಕೇಳಬಹುದು. ಈ ಸೌಲಭ್ಯವು ರಾತ್ರಿ 11 ರಿಂದ ಬೆಳಿಗ್ಗೆ 7 ರವರೆಗೆ ಲಭ್ಯವಿರುತ್ತದೆ.
ಇದರ ಲಾಭವನ್ನು ಯಾರು ಬೇಕಾದರೂ ಪಡೆದುಕೊಳ್ಳಬಹುದು. ಇದರಲ್ಲಿ, ನೀವು ಇಳಿದುಕೊಳ್ಳುವ ರೈಲು ನಿಲ್ದಾಣ ತಲುಪುವ 20 ನಿಮಿಷಗಳ ಮೊದಲೇ ನಿಮ್ಮನ್ನು ಎಚ್ಚರಿಸಲಾಗುತ್ತದೆ.
ಈ ಸೇವೆಯನ್ನು ಪಡೆಯುವುದು ಹೇಗೆ?
'ಡೆಸ್ಟಿನೇಷನ್ ಅಲರ್ಟ್ ವೇಕಪ್ ಅಲಾರಂ' ಸೌಲಭ್ಯವನ್ನು ಪ್ರಾರಂಭಿಸಲು, ಐಆರ್ಸಿಟಿಸಿ ಸಹಾಯವಾಣಿ 139 ಗೆ ಕರೆ ಮಾಡಬೇಕು. ಭಾಷೆಯನ್ನು ಆಯ್ಕೆ ಮಾಡಿದ ನಂತರ ನೀವು ಗಮ್ಯಸ್ಥಾನದ ಎಚ್ಚರಿಕೆಗಾಗಿ 7 ಮತ್ತು ನಂತರ 2 ಅನ್ನು ಒತ್ತಬೇಕು. ಕೇಳಿದಾಗ 10 ಅಂಕಿಯ ಪಿಎನ್ಆರ್ ಅನ್ನು ನಮೂದಿಸಿ. ಅದನ್ನು ದೃಢೀಕರಿಸಲು 1 ಅನ್ನು ಡಯಲ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ