• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Republic Day: ಕೋವಿಡ್​ ಹಿನ್ನಲೆ ಈ ಬಾರಿ ಗಣರಾಜ್ಯೋತ್ಸವಕ್ಕೆ​ ವಿದೇಶಿ ಅತಿಥಿಗಳಿಗಿಲ್ಲ ಆಹ್ವಾನ ; ಕೇಂದ್ರದಿಂದ ಸ್ಪಷ್ಟನೆ

Republic Day: ಕೋವಿಡ್​ ಹಿನ್ನಲೆ ಈ ಬಾರಿ ಗಣರಾಜ್ಯೋತ್ಸವಕ್ಕೆ​ ವಿದೇಶಿ ಅತಿಥಿಗಳಿಗಿಲ್ಲ ಆಹ್ವಾನ ; ಕೇಂದ್ರದಿಂದ ಸ್ಪಷ್ಟನೆ

ಗಣರಾಜ್ಯೋತ್ಸವದ ಸೇನಾ ಪೆರೇಡ್.

ಗಣರಾಜ್ಯೋತ್ಸವದ ಸೇನಾ ಪೆರೇಡ್.

Republic Day: ಎಲ್ಲೆಡೆ ಕೊರೋನಾ ವೈರಸ್​ ಸೋಂಕಿರುವ ಹಿನ್ನಲೆ ಈ ಬಾರಿ ಗಣರಾಜ್ಯೋತ್ಸವಕ್ಕೆ ಯಾವುದೇ ಅತಿಥಿಗಳನ್ನು ಕರೆಯದಿರಲು ನಿರ್ಧರಿಸಲಾಗಿದೆ.

  • Share this:

    ನವದೆಹಲಿ (ಜ. 14): ಪ್ರತಿ ಬಾರಿ ಜ. 26ರಂದು ಗಣರಾಜ್ಯೋತ್ಸವದಂದು ವಿದೇಶಿ ಗಣ್ಯ ಅಥಿತಿಯನ್ನು ಆಹ್ವಾನಿಸುವುದನ್ನು ರೂಢಿಸಿಕೊಂಡು ಬರಲಾಗಿದೆ. ಆದರೆ, ಈ ಬಾರಿ ಗಣರಾಜ್ಯೋತ್ಸವಕ್ಕೆ ಯಾವುದೇ ಅತಿಥಿಯನ್ನು ಆಹ್ವಾನಿಸದಿರಲು ಸರ್ಕಾರ ನಿರ್ಧರಿಸಿದೆ. ಕಾರಣ ಕೋವಿಡ್​ 19. ಕೋರೋನಾ ವೈರಸ್​ಗೆ ಇಡೀ ಜಗತ್ತನ್ನು ನಲುಗಿಸುತ್ತಿದೆ. ಈ ಹಿನ್ನಲೆ ಈ ಬಾರಿ ಯಾವುದೇ ರಾಷ್ಟ್ರದ ಗಣ್ಯರನ್ನು ಕರೆಯದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್​ ಶ್ರೀವಾಸ್ತವ ತಿಳಿಸಿದ್ದಾರೆ. ಈ ಮೊದಲು ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಅವರನ್ನು ಈ ಬಾರಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ, ಇಂಗ್ಲೆಡ್​ನಲ್ಲಿ ರೂಪಾಂತಾರಿ ಕೊರೋನಾ ಹಾವಳಿ ಹೆಚ್ಚಿರುವ ಹಿನ್ನಲೆ ಅವರು ಈ ಪ್ರವಾಸವನ್ನು ರದ್ದು ಮಾಡಿದರು.


    ಬೋರಿಸ್​ ಜಾನ್ಸ್​ ಪ್ರವಾಸ ರದ್ದಾದ ಬಳಿಕ ಸುರಿನಾಮ್​​ ಅಧ್ಯಕ್ಷ ಚಂದ್ರಕಾಪರ್ಸಾದ್​ ಸಂತೋಳಿ ಅವರನ್ನು ಆಹ್ವಾನಿಸಲಾಗಿದೆ ಎಂಬ ಮಾತು ಕೇಳಿ ಬಂದಿತ್ತಾದರೂ ಸರ್ಕಾರ ಈ ಬಗ್ಗೆ ಅಧಿಕೃತ ಪಡಿಸಿರಲಿಲ್ಲ.


    ಎಲ್ಲೆಡೆ ಕೊರೋನಾ ವೈರಸ್​ ಸೋಂಕಿರುವ ಹಿನ್ನಲೆ ಈ ಬಾರಿ ಗಣರಾಜ್ಯೋತ್ಸವಕ್ಕೆ ಯಾವುದೇ ಅತಿಥಿಗಳನ್ನು ಕರೆಯದಿರಲು ನಿರ್ಧರಿಸಲಾಗಿದೆ.


    ಕಳೆದ ಐದು ದಶಕಗಳಿಂದ ಕೆಂಪುಕೋಟೆಯಲ್ಲಿ ಆಚರಿಸುವ ಗಣರಾಜ್ಯೋತ್ಸವ ಪೆರೇಡ್​ನಲ್ಲಿ ಯಾವುದಾದರೂ ಒಂದು ದೇಶದ ಪ್ರಮುಖ ಅಥವಾ ಸರ್ಕಾರದ ವ್ಯಕ್ತಿಗಳನ್ನು ಅತಿಥಿಯಾಗಿ ಅಹ್ವಾನಿಸಲಾಗುತ್ತಿದೆ. ಇದೇ ಈ ಬಾರೊ ಗಣರಾಜ್ಯೋತ್ಸವ ಪೆರೇಡ್​ನಲ್ಲಿ ಯಾವುದೇ ಅತಿಥಿಗಳು ಭಾಗಿಯಾಗುವುದಿಲ್ಲ. ಈ ಹಿಂದೆ 1966ರಲ್ಲಿ ಜ.24ರಂದು ಇಂದಿರಾ ಗಾಂಧಿ ಪ್ರಮಾಣವಚನ ಸ್ವೀಕಾರ ಮಾಡಿದಾಗ ಹಾಗೂ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರ ನಿಧನರಾದ ಎರಡು ವರ್ಷ ಅಂದರೆ 1952 ಮತ್ತು 53ರಲ್ಲಿ ಕೂಡ ಅತಿಥಿಗಳು ಭಾಗಿಯಾಗಿರಲಿಲ್ಲ.


    ಇದನ್ನು ಓದಿ: ಪೊಂಗಲ್​ ಶುಭಾಶಯ ತಿಳಿಸಿ, ಮಧುರೈನಲ್ಲಿ ಜಲ್ಲಿಕಟ್ಟು ವೀಕ್ಷಿಸಿದ ರಾಹುಲ್​ ಗಾಂಧಿ


    ಕೊರೋನಾ ಹರಡದಂತೆ ತಡೆಯಲು ಜನ ದಟ್ಟಣೆಯನ್ನು ನಿಗ್ರಹಿಸುವ ಸಲುವಾಗಿ ಕೇಂದ್ರ ಸರ್ಕಾರ ಮುಂದಿನ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಮಿಲಿಟರಿ ಪಥ ಸಂಚಲನ ಈ ಬಾರಿ ವಿಜಯ್​ ಚೌಕ್​ನಿಂದ ಆರಂಭವಾಗಿ ರಾಷ್ಟ್ರೀಯ ಕ್ರೀಡಾಂಗಣದಲ್ಲೇ ಕೊನೆಗೊಳ್ಳಲಿದೆ. ಮೆರವಣಿಗೆಯ ಅಂತರವನ್ನು ಅರ್ಧಕ್ಕೆ ಇಳಿಸಲಾಗಿದೆ. ಈ ಹಿಂದೆ 8.2 ಕಿಲೋಮೀಟರ್‌ ಮೆರವಣಿಗೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮೆರವಣಿಗೆಯನ್ನು 3.3 ಕಿಲೋಮೀಟರ್‌ಗೆ ಇಳಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.


    ಹೊಸ ಪ್ರೋಟೋಕಾಲ್‌ಗಳ ಭಾಗವಾಗಿ, ಮೆರವಣಿಗೆ ಮಾಡುವವರು ಮತ್ತು ವೀಕ್ಷಕರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್​ ಧರಿಸಿರಬೇಕು ಎಂದು ಸೂಚಿಸಲಾಗಿದೆ. ಪ್ರೇಕ್ಷಕರ ಸಂಖ್ಯೆಯನ್ನು 1,15,000 ದಿಂದ 25,000 ಕ್ಕೆ ಇಳಿಸಲಾಗಿದೆ ಮತ್ತು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆಯನ್ನೂ ಕಡಿತಗೊಳಿಸಲಾಗಿದೆ

    Published by:Seema R
    First published: