Terrorists Encounter: ಪಂಜಾಬ್​ನ ಅತ್ತಾರಿ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ ಇಬ್ಬರು ಉಗ್ರರ ಹತ್ಯೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಿಎಸ್ಎಫ್ ಪಡೆಯ ಎಚ್ಚರಿಕೆಯನ್ನು ಲೆಕ್ಕಿಸದೆ ಭಾರತದ ಗಡಿಯೊಳಗೆ ಅಕ್ರಮವಾಗಿ ನುಗ್ಗಲು ಪ್ರಯತ್ನಿಸಿದ ಉಗ್ರರಿಬ್ಬರನ್ನು ಮಧ್ಯರಾತ್ರಿ 2.30ರ ವೇಳೆಗೆ ಬಿಎಸ್​ಎಫ್​ ಯೋಧರು ಹೊಡೆದುರುಳಿಸಿದ್ದಾರೆ.

  • Share this:

ನವದೆಹಲಿ (ಡಿ. 17): ಪಂಜಾಬ್​ನ ಅತ್ತಾರಿ- ವಾಘಾ ಗಡಿಯಲ್ಲಿ ಭಾರತದೊಳಗೆ ನುಸುಳಲು ಪ್ರಯತ್ನಿಸಿದ ಇಬ್ಬರು ಉಗ್ರರನ್ನು ಇಂದು ಮುಂಜಾನೆ ಬಿಎಸ್​ಎಫ್​ (ಗಡಿ ಭದ್ರತಾ ಪಡೆ) ಸಿಬ್ಬಂದಿ ಹತ್ಯೆ ಮಾಡಿದ್ದಾರೆ. ಅಮೃತಸರದ ಅತ್ತಾರಿ ಗಡಿಯಲ್ಲಿ ನಿನ್ನೆ ರಾತ್ರಿ ಉಗ್ರರು ನುಸುಳಲು ಪ್ರಯತ್ನಿಸುತ್ತಿದ್ದ ವೇಳೆ ಬಿಎಸ್ಎಫ್ ಯೋಧರು ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಬಿಎಸ್ಎಫ್ ಪಡೆಯ ಎಚ್ಚರಿಕೆಯನ್ನು ಲೆಕ್ಕಿಸದೆ ಭಾರತದ ಗಡಿಯೊಳಗೆ ಅಕ್ರಮವಾಗಿ ನುಗ್ಗಲು ಪ್ರಯತ್ನಿಸಿದ ಉಗ್ರರಿಬ್ಬರನ್ನು ಮಧ್ಯರಾತ್ರಿ 2.30ರ ವೇಳೆಗೆ ಬಿಎಸ್​ಎಫ್​ ಯೋಧರು ಹೊಡೆದುರುಳಿಸಿದ್ದಾರೆ.


ಬಿಎಸ್​ಎಫ್​ ಮತ್ತು ಉಗ್ರರ ನಡುವೆ ರಾತ್ರಿಯಿಂದ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈಯುವಲ್ಲಿ ಬಿಎಸ್​ಎಫ್ ಯೋಧರು ಯಶಸ್ವಿಯಾಗಿದ್ದಾರೆ. ಅತ್ತಾರಿ ಗಡಿ ಭಾಗದಲ್ಲಿ ಇಬ್ಬರು ಉಗ್ರರು ಒಳ ನುಸುಳಲು ಹೊಂಚು ಹಾಕುತ್ತಿದ್ದರು. ಆಗ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಗಡಿ ಭದ್ರತಾ ಪಡೆಯ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅದಕ್ಕೆ ಬಗ್ಗದ ಉಗ್ರರು ಗಡಿಯೊಳಗೆ ನುಸುಳಲು ಮುಂದಾದಾಗ ಅವರಿಬ್ಬರನ್ನೂ ಹತ್ಯೆ ಮಾಡಲಾಗಿದೆ.



ಹತ್ಯೆಯ ಬಳಿಕ ಉಗ್ರರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಎಕೆ 56 ರೈಫಲ್, ಎರಡು ಮ್ಯಾಗಜಿನ್ ಒಂದು ಪಿಸ್ತೂಲ್, 2 ಪಿವಿಸಿ ಪೈಪ್, ಅಲ್ಪ ಹಣವನ್ನು ಉಗ್ರರಿಂದ ವಶಕ್ಕೆ ಪಡೆಯಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ಅತ್ತಾರಿ ಗಡಿಯಲ್ಲಿ ಬಿಎಸ್​ಎಫ್​ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆ.




ಪಾಕಿಸ್ತಾನ ಗಡಿಭಾಗದಲ್ಲಿ ಈ ಉಗ್ರರು ಸಕ್ರಿಯವಾಗಿದ್ದರು ಎನ್ನಲಾಗಿದೆ. ಮಂಜು ಮುಸುಕಿದ್ದರಿಂದ ಬೆಳಗ್ಗೆಯಿಂದ ಶೋಧ ಕಾರ್ಯಾಚರಣೆ ನಡೆಸಲು ತೊಡಕುಂಟಾಯಿತು.

First published: