• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಜೈಲಿನಲ್ಲಿ ಕನ್ನಡ ಕಲಿತ ತಮಿಳುನಾಡಿನ ಚಿನ್ನಮ್ಮ; ಗುದ್ದಲಿ ಹಿಡಿದು ಹಣ್ಣು-ತರಕಾರಿ ಬೆಳೆದ ಶಶಿಕಲಾ!

ಜೈಲಿನಲ್ಲಿ ಕನ್ನಡ ಕಲಿತ ತಮಿಳುನಾಡಿನ ಚಿನ್ನಮ್ಮ; ಗುದ್ದಲಿ ಹಿಡಿದು ಹಣ್ಣು-ತರಕಾರಿ ಬೆಳೆದ ಶಶಿಕಲಾ!

ಶಶಿಕಲಾ

ಶಶಿಕಲಾ

ಶಶಿಕಲಾ ವಿರುದ್ಧ 1997 ರಲ್ಲಿ ಅಕ್ರಮ ಹಣ ಸಂಪಾದನೆ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಶಶಿಕಲಾ ಎರಡು ಬಾರಿ ಅರೆಸ್ಟ್  ಆಗಿದ್ದರು. ಮೊದಲು ಜನವರಿ 31, 1997 ರಲ್ಲಿ ಅರೆಸ್ಟ್ ಆಗಿದ್ದು, ಆದಾದ ನಂತರ ಪುನಃ 2014 ರಲ್ಲಿ ಮತ್ತೆ ಬಂಧಿಸಲಾಗಿತ್ತು. ಕೊನೆಗೆ ಕೇಸ್ ಟ್ರಾಯಲ್ ನಡೆದು ಕೋರ್ಟ್ ಶಿಕ್ಷೆಯನ್ನು ಘೋಷಿಸಿತ್ತು. ಆ ಬಳಿಕ ಶಶಿಕಲಾಗೆ 4 ವರ್ಷ ಜೈಲು 10 ಕೋಟಿ ದಂಡವನ್ನ ನ್ಯಾಯಾಲಯ ವಿಧಿಸಿತ್ತು.‌ 15ನೇ ತಾರೀಕ್ ಫೆಬ್ರವರಿ 2017 ರಂದು ಶಶಿಕಲಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.

ಮುಂದೆ ಓದಿ ...
  • Share this:

ಬೆಂಗಳೂರು: ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಚಿನಮ್ಮ ಈಗ ಕನ್ನಡ ಭಾಷೆ ಪ್ರಿಯೆ. ಹೌದು, ಶಶಿಕಲಾ ಕನ್ನಡ ಮಾತಾಡುವುದು, ಬರೆಯುವುದು, ಓದುವುದನ್ನು ಕಲಿತಿದ್ದಾರೆ. ಮೊದ ಮೊದಲು ಭಾಷಾ ಸಮಸ್ಯೆಯಿಂದ ಜೈಲಿನ ಸಿಬ್ಬಂದಿಗೂ ಸಮಸ್ಯೆಯಾಗಿತ್ತು. ಆದರೆ ಈಗ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಹ ಕೈದಿಗಳ ಜೊತೆ ಶಶಿಕಲಾ ಅವರು ಕನ್ನಡದಲ್ಲೇ ಮಾತನಾಡುತ್ತಾರಂತೆ.


ಜೊತೆಗೆ ಕೃಷಿ ಬಗ್ಗೆ ತುಂಬಾ ಆಸಕ್ತಿ ಹೊಂದಿರುವ ಶಶಿಕಲಾ ಜೈಲಲ್ಲಿ ಅರ್ಧ ಎಕರೆ ಜಮೀನಿನಲ್ಲಿ ಬೇಸಾಯ ಮಾಡಿದ್ದು, ಅರ್ಧ ಎಕರೆ ಜಮೀನಿನಲ್ಲಿ ಒಂದು ಟನ್ ಪಪ್ಪಾಯ ಬೆಳೆದಿದ್ದಾರೆ. ಸ್ವತಃ ಗುದ್ದಲಿ ಹಿಡಿದು ಪಪ್ಪಾಯ ನೆಟ್ಟು ಮಿಶ್ರ ಬೆಳೆ ಪದ್ದತಿಯಲ್ಲಿ ಬೆಳೆ ತೆಗೆದಿದ್ದಾರೆ. ಪಪ್ಪಾಯ, ತೊಗರಿ, ಬೀನ್ಸ್, ಬದನೆಕಾಯಿ, ನುಗ್ಗೆಕಾಯಿ ಬೆಳೆದಿದ್ದಾರೆ.


ಇದಷ್ಟೇ ಅಲ್ಲದೇ ಸ್ಯಾರಿ ಡಿಸೈನ್ಸ್ , ಬಳೆ, ಸರದ ತಯಾರಿಕೆಯಲ್ಲೂ ಶಶಿಕಲಾ ಎತ್ತಿದ ಕೈ. ಸರದ ಮಣಿ ಜೋಡಿಕೆಯ ವಿವಿಧ ಡಿಸೈನ್ಸ್ ಸಹ ಮಾಡಿದ್ದಾರೆ‌ .ಬೆಳಗ್ಗೆ ತೋಟದ ಕೆಲಸ, ಮಧ್ಯಾಹ್ನ ಡಿಸೈನ್ಸ್, ಸಂಜೆ ಪೂಜೆ ಧ್ಯಾನ ಮಾಡುವುದು ಶಶಿಕಲಾ ಅವರ ದಿನಚರಿಯಾಗಿದೆ. ಮಹಿಳಾ ಬ್ಯಾರಕ್ ಹೋಗುವ ದಾರಿಯುದ್ದಕ್ಕೂ ಕೆಂಪು ಗುಲಾಬಿ ಗಿಡ ಹಾಕಿಸಿದ್ದಾರೆ‌. 150 ಕೆಂಪು ಗುಪಾಬಿ ಗಿಡ ನೆಟ್ಟಿದ್ದು, ಬ್ಯಾರಕ್ ಎಲ್ಲವೂ ಸ್ವಚ್ಚತೆಗೆ ಶಶಿಕಲಾ ಆದ್ಯತೆ ನೀಡಿದ್ದಾರೆ. ಸದ್ಯ ಇನ್ನೊಂದು ತಿಂಗಳಲ್ಲಿ ಶಶಿಕಲಾ ಜೈಲಿಂದ ಬಿಡುಗಡೆ ಆಗುತ್ತಿದ್ದಾರೆ. ಈ ನಡುವೆ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಬಳಿ ಸಂಯಮದಿಂದ ವರ್ತಿಸಿರುವುದುಎಲ್ಲರ ಮೆಚ್ಚುಗೆಗೆ ಪಾತ್ರರಾಗಿದೆ.


ಇದನ್ನು ಓದಿ: ತಮಿಳುನಾಡಿನ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಶಶಿಕಲಾ ಬಿಡುಗಡೆಗೆ ಸಿದ್ದತೆ


ಶಶಿಕಲಾ ವಿರುದ್ಧ 1997 ರಲ್ಲಿ ಅಕ್ರಮ ಹಣ ಸಂಪಾದನೆ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಶಶಿಕಲಾ ಎರಡು ಬಾರಿ ಅರೆಸ್ಟ್  ಆಗಿದ್ದರು. ಮೊದಲು ಜನವರಿ 31, 1997 ರಲ್ಲಿ ಅರೆಸ್ಟ್ ಆಗಿದ್ದು, ಆದಾದ ನಂತರ ಪುನಃ 2014 ರಲ್ಲಿ ಮತ್ತೆ ಬಂಧಿಸಲಾಗಿತ್ತು. ಕೊನೆಗೆ ಕೇಸ್ ಟ್ರಾಯಲ್ ನಡೆದು ಕೋರ್ಟ್ ಶಿಕ್ಷೆಯನ್ನು ಘೋಷಿಸಿತ್ತು. ಆ ಬಳಿಕ ಶಶಿಕಲಾಗೆ 4 ವರ್ಷ ಜೈಲು 10 ಕೋಟಿ ದಂಡವನ್ನ ನ್ಯಾಯಾಲಯ ವಿಧಿಸಿತ್ತು.‌ 15ನೇ ತಾರೀಕ್ ಫೆಬ್ರವರಿ 2017 ರಂದು ಶಶಿಕಲಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.

First published: