• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Farmers' Protest: ಮತ್ತೊಮ್ಮೆ ವಿಫಲವಾದ ಸಭೆ; ಡಿ.9ಕ್ಕೆ ಮುಂದಿನ ಸಭೆ; ಭಾರತ್​ ಬಂದ್​ ನಡೆಸಲು ರೈತರ ನಿರ್ಧಾರ

Farmers' Protest: ಮತ್ತೊಮ್ಮೆ ವಿಫಲವಾದ ಸಭೆ; ಡಿ.9ಕ್ಕೆ ಮುಂದಿನ ಸಭೆ; ಭಾರತ್​ ಬಂದ್​ ನಡೆಸಲು ರೈತರ ನಿರ್ಧಾರ

ಸಭೆಯಲ್ಲಿ ಫಲಕ ಹಿಡಿದು ಕುಳಿತಿರುವ ರೈತರು

ಸಭೆಯಲ್ಲಿ ಫಲಕ ಹಿಡಿದು ಕುಳಿತಿರುವ ರೈತರು

ಸಭೆಯಲ್ಲಿ ಕೃಷಿ ಕಾಯ್ದೆಯನ್ನು ರದ್ದು ಪಡಿಸುತ್ತೀರಾ ಇಲ್ಲವಾ ಎಂಬ ಫಲಕವನ್ನು ರೈತರು ಹಿಡಿದು ಮೌನ ಪ್ರತಿಭಟನೆ ನಡೆಸಿದರು

  • Share this:

    ನವದೆಹಲಿ (ಡಿ.5): ಪ್ರತಿಭಟನೆ ಕೈ ಬಿಡುವಂತೆ ಸರ್ಕಾರ ರೈತರೊಂದಿಗೆ ನಡೆಸಿದ ಐದನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ. ಕೃಷಿ ಕಾಯ್ದೆ ತಿದ್ದುಪಡಿ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದು, ಈ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂಬ ಬಿಗಿ ಪಟ್ಟನ್ನು ಅವರು ಹೊಂದಿದ್ದಾರೆ. ಈ ಹಿನ್ನಲೆ ಇಂದು ನಡೆದ ಮಾತುಕತೆ ಕೂಡ ಫಲಪ್ರದ ಕಾಣದ ಹಿನ್ನಲೆ ಡಿ. 9ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರದ ಮೂವರು ಸಚಿವರೊಂದಿಗೆ ನಡೆದ ಈ ಮಾತುಕತೆ ವೇಳೆ ತಮ್ಮ ಬೇಡಿಕೆ ಪರಿಗಣಿಸದ ಹಿನ್ನಲೆ ಸಭೆಯಿಂದ ಹೊರನಡೆಯುವ ಬೆದರಿಕೆಯನ್ನು ರೈತರು ಹಾಕಿದ್ದರು. ಸರ್ಕಾರದೊಂದಿಗೆ ಇಂದು 40 ರೈತ ಸಂಘಟನೆ ಮುಖಂಡರು ಭಾಗಿಯಾಗಿ ಮಾತನಾಡಿದ್ದರು. ಈ ವೇಳೆ ಕೃಷಿ ಕಾಯ್ದೆಯನ್ನು ರದ್ದು ಪಡಿಸುತ್ತೀರಾ ಇಲ್ಲವಾ ಎಂಬ ಫಲಕವನ್ನು ರೈತರು ಹಿಡಿದು ಮೌನ ಪ್ರತಿಭಟನೆ ನಡೆಸಿದರು.



    ಸಭೆ ಬಳಿಕ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್​ ಥೋಮರ್​, ಸರ್ಕಾರ ನಡೆಸಿರುವ ಹೊಸ ಪ್ರಸ್ತಾವನೆಯನ್ನು ರೈತರ ಮುಂದೆ ಇಡಲಾಗಿದೆ. ರೈತರ ಪ್ರತಿಭಟನೆಗೆ ಕಾರಣವಾಗಿರುವ ಈ ಕಾಯ್ದೆ ತಿದ್ದುಪಡಿ ಮಾಡಲು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ ಒಳಗೊಂಡ ಕ್ಯಾಬಿನೆಟ್​ ನಿರ್ಧರಿಸಿದೆ ಎಂದರು.


    ಸಭೆ ಬಳಿಕ ಮಾತನಾಡಿದ ಭಾರತೀಯ ಕಿಸಾನ್​ ಯೂನಿಯನ್​ ಸಂಘದ ರಾಕೇಶ್​ ಟಿಕೈಟ್​, ಸರ್ಕಾರ ಕಾಯ್ದೆ ತಿದ್ದುಪಡಿಗೆ ಕರಡು ಸಿದ್ದಪಡಿಸಿ ನಮಗೆ ನೀಡುವುದಾಗಿ ತಿಳಿಸಿದೆ, ಈ ಸಂಬಂಧ ರಾಜ್ಯಗಳನ್ನು ಸಂಪರ್ಕಿಸುವುದಾಗಿ ಹೇಳಿದೆ. ಕನಿಷ್ಠ ಬೆಂಬಲ ಬೆಲೆ ಕುರಿತು ಈ ವೇಳೆ ಚರ್ಚಿಸಲಾಗುವುದು ಎಂದರು. ಈ ಮುಂಚೆ ನಿಗದಿಸಿದಂತೆ ಡಿ. 8 ಭಾರತ್​ ಬಂದ್​ ನಡೆಸಲಾಗುವುದು. ಡಿ. 9ರಂದು ಸರ್ಕಾರ ಪ್ರಸ್ತಾವನೆ ಸಲ್ಲಿಸಲಿದೆ. ಈ ಕುರಿತು ನಾವು ಚರ್ಚಿಸುತ್ತೇವೆ ಎಂದರು.


     ರೈತರು ನಡೆಸುತ್ತಿದ್ದ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆ ಫಲಪ್ರದವಾಗಿಲ್ಲದ ಕಾರಣ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿರುವ ರೈತ ಸಂಘಟನೆಗಳು ಇಂದು ದೇಶಾದ್ಯಂತ ಹೋರಾಟ ಹಮ್ಮಿಕೊಂಡಿವೆ. ದೇಶದ ವಿವಿಧ ಭಾಗಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಕೃತಿ ಸುಡಲು ಮುಂದಾಗಿವೆ

    Published by:Seema R
    First published: