Taliban: ಅಫ್ಘಾನ್​ನಲ್ಲಿ ನಾಳೆ ಸರ್ಕಾರ ರಚನೆ ಮಾಡಲಿರುವ ತಾಲಿಬಾನ್​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಫ್ಘಾನ್​ನಲ್ಲಿ ಭೀಕರ ಬರಗಾಲದ ಜೊತೆಗೆ ಯುದ್ಧದ ವಾತವಾರಣಗಳಿಂದ ಜನರು ಕಂಗೆಟ್ಟಿದ್ದು, ದೇಶ ತೊರೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ

  • Share this:

    ಅಫ್ಘಾನಿಸ್ತಾನದ (Afghanistan) ಅಧಿಕಾರಿ ವಶಪಡಿಸಿಕೊಂಡಿರುವ ತಾಲಿಬಾನ್​ಗಳು (Taliban) ನಾಳೆ ಅಂದರೆ ಶುಕ್ರವಾರ ಸರ್ಕಾರ ರಚನೆಗೆ ತಯಾರಿ ನಡೆಸಿದ್ದಾರೆ. ಶುಕ್ರವಾರದ ಪವಿತ್ರ ಪ್ರಾರ್ಥನೆ ಬಳಿಕ ಅವರು ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ 15 ದಿನಗಳ ಹಿಂದೆ ಕಾಬೂಲ್​ ವಶಪಡಿಸಿಕೊಳ್ಳುವ ಮೂಲಕ ಅವರು 20 ವರ್ಷಗಳ ಬಳಿಕ ದೇಶದ ಆಡಳಿತವನ್ನು ವಶಕ್ಕೆ ಪಡೆದಿದ್ದರು. ಅಮೆರಿಕ ತನ್ನ ಸೇನಾ ನೆಲೆಯನ್ನು ಸ್ಥಳಾಂತರಿಸಲು ಒಪ್ಪಂದ ಮಾಡಿಕೊಂಡಿದ್ದ ತಾಲಿಬಾನ್​ಗಳು ಸುರಕ್ಷಿತ ಸ್ಥಳಾಂತರಕ್ಕೆ ನೆರವು ನೀಡುವ ಭರವಸೆ ನೀಡಿದ್ದರು. ಆಗಸ್ಟ್​​ 31ರವರೆಗೆ ಅವರ ಸ್ಥಳಾಂತ ಕಾರ್ಯ ಮಾಡುವುದಾಗಿ ತಿಳಿಸಿದ್ದರು. ಅಮೆರಿಕಾ ಸಂಪೂರ್ಣ ಸ್ಥಳಾಂತರ ನಡೆಸಿದ ಬಳಿಕ ಈಗ ತಾಲಿಬಾನ್​ಗಳ ಸರ್ಕಾರ ರಚನೆಗೆ ಮುಂದಾಗಿದ್ದಾರೆ.


    ಅಮೆರಿಕ ಪಡೆಗಳ ನಿರ್ಗಮನದ ಬಳಿಕ ದೇಶದಲ್ಲಿ ಉತ್ತರ ಸರ್ಕಾರ ರಚನೆ ಭರವಸೆ ನೀಡಿರುವ ತಾಲಿಬಾನ್​ಗಳು ದೇಶದಲ್ಲಿನ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಈಗ ಸರ್ಕಾರ ರಚನೆಗೆ ಮುಂದಾಗಿರುವ ಅವರು, ಅಂತರರಾಷ್ಟ್ರೀಯ ನೆರವಿನ ಎದುರು ನೋಡುತ್ತಿದ್ದಾರೆ.
    ಅಫ್ಘಾನ್​ನದಲ್ಲಿ ಹೂಡಿಕೆ ಮಾಡಲು ಅಂತರಾಷ್ಟ್ರೀಯ ಹೂಡಿಕೆದಾರರು ಮುಂದಾಗುತ್ತಾರಾ ಎಂಬ ಪ್ರಶ್ನೆ ಕೂಡ ಎದುರಾಗಿದೆ. ಆರ್ಥಿಕ ಕುಸಿತ, ಬರಗಾಲ, ಅಫ್ಘಾನ್​ ಯುದ್ಧಗಳು ಹೂಡಿಕೆ ದಾರರರ ಮುಂದೆ ಸವಾಲ್​ ಆಗಿವೆ.


    ಬೃಹತ್​ ಸ್ಥಳಾಂತರಕ್ಕೆ ಯಾವುದೆ ಅಡ್ಡಿ ಮಾಡುವುದಿಲ್ಲ ಎಂದು ತಾಲಿಬಾನ್​ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ತಿಳಿಸಿತ್ತು. ಆದರೆ, ವಿಮಾನ ನಿಲ್ದಾಣದಲ್ಲಿ ನಡೆದ ದಾಳಿಗಳ ಬಳಿಕ ಸೋಮವಾರ ಕಾಬೂಲ್​ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. ಈ ನಡುವೆ ಜನರು ಗಡಿ ಭಾಗದ ಮೂಲಕ ವಲಸೆ ಹೋಗಲು ಯತ್ನಿಸುತ್ತಿರುವ ಘಟನೆಗಳು ಕಂಡು ಬಂದಿದೆ.


    ಇದನ್ನು ಓದಿ: ಪ್ರವಾಹ ಸಂಕಷ್ಟ ನಡುವೆಯೂ ಲಸಿಕೆ; ದೋಣಿಗಳನ್ನೇ ಲಸಿಕಾ ಕೇಂದ್ರ ಮಾಡಿದ ಆರೋಗ್ಯ ಕಾರ್ಯಕರ್ತರು


    ಅಫ್ಘಾನ್​ನಲ್ಲಿ ಭೀಕರ ಬರಗಾಲದ ಜೊತೆಗೆ ಯುದ್ಧದ ವಾತವಾರಣಗಳಿಂದ ಜನರು ಕಂಗೆಟ್ಟಿದ್ದು, ದೇಶ ತೊರೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ನಡುವೆ ಸರ್ಕಾರ ರಚನೆಗೆ ಮುಂದಾಗಿರುವ ತಾಲಿಬಾನ್​ರಿಗೆ ಹಣದ ಅವಶ್ಯಕತೆ ಎದುರಾಗಿದೆ. ಈ ನಡುವೆ ವಿದೇಶದಲ್ಲಿರುವ ಅಫ್ಘಾನ್​ ಸೆಂಟ್ರಲ್​ ಬ್ಯಾಂಕ್​ನ 10 ಬಿಲಿಯನ್​ ಸ್ವತ್ತು ಕೂಡ ತಾಲಿಬಾನ್​ರಿಗೆ ಕೈ ಸೇರುವ ಸಾಧ್ಯತೆ ತುಂಬಾ ವಿರಳವಾಗಿದೆ.


    ಅಫ್ಘಾನಿಸ್ತಾನದ ಒಟ್ಟು ಆಂತರಿಕ ಉತ್ಪನ್ನವು ಈ ಆರ್ಥಿಕ ವರ್ಷದಲ್ಲಿ 9.7% ನಷ್ಟು ಕುಗ್ಗುವ ನಿರೀಕ್ಷೆಯಿದೆ. ಮುಂದಿನ ವರ್ಷದಲ್ಲಿ 5.2% ನಷ್ಟು ಕುಸಿತ ಕಂಡುಬರಲಿದೆ ಎಂದು ರೇಟಿಂಗ್ ಏಜೆನ್ಸಿ ಫಿಚ್ ಗ್ರೂಪ್‌ನ ಸಂಶೋಧನಾ ವಿಭಾಗವಾದ ಫಿಚ್ ಸೊಲ್ಯೂಷನ್ಸ್‌ನ ವರದಿಯಲ್ಲಿ ವಿಶ್ಲೇಷಕರು ಹೇಳಿದ್ದಾರೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:Seema R
    First published: