• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Afghanistan VS Taliban: ತಾಲಿಬಾನಿಗರ ಮೇಲುಗೈ: ಅಫ್ಘಾನಿಸ್ತಾನದಿಂದ ಭಾರತ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ

Afghanistan VS Taliban: ತಾಲಿಬಾನಿಗರ ಮೇಲುಗೈ: ಅಫ್ಘಾನಿಸ್ತಾನದಿಂದ ಭಾರತ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Afghanistan VS Taliban: ತಾಲಿಬಾನ್‌ಗಳು ಎರಡು ಹೆಲಿಕಾಪ್ಟರ್‌ಗಳೊಂದಿಗೆ ಸುತ್ತುವರಿದು ಸೇನಾಧಿಕಾರಿ ಇಸ್ಮಾಯಿಲ್ ಖಾನ್​ನ ಬಂಧಿಸಿದ್ದಾರೆ. ಜೊತೆಗೆ ಕಾಬೂಲ್ ಆಡಳಿತದ ಇತರ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ

  • Share this:

ಕಾಬೂಲ್​: ಅಫ್ಘಾನಿಸ್ತಾನ ಮತ್ತು ತಾಲಿಬಾನ್​ ನಡುವಿನ ಸಮರ ಮುಂದುವರೆದಿದ್ದು, ತಾಲಿಬಾನ್​ ಮುನ್ನಡೆ ಸಾಧಿಸುವ ಮೂಲಕ, ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನ ಭಾರತ ಧೂತನಿವಾಸದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್​ ಕರೆತರುವ ಯತ್ನಕ್ಕೆ ವಿದೇಶಾಂಗ ಸಚಿವಾಲಯ ಸಿದ್ಧತೆ ಮಾಡಿಕೊಂಡಿದೆ. ಮೂಲಗಳ ಪ್ರಕಾರ, ಅಫ್ಘಾನಿಸ್ತಾನಕ್ಕೆ ಹೆಚ್ಚುವರಿ ಸೇನೆಯನ್ನು ಕಳಿಸಿ, ಅಲ್ಲಿರುವ ಭಾರತದ ಸಿಬ್ಬಂದಿಯನ್ನು ಕರೆತರಲು ರೂಪುರೇಷೆ ಸಿದ್ಧಗೊಳ್ಳುತ್ತಿದೆ.


ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ಇತರೆ ದೇಶಗಳು ಕೂಡ ಈಗಾಗಲೇ ಸಿಬ್ಬಂದಿ ರಕ್ಷಣೆಗಾಗಿ ರಕ್ಷಣಾ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ. ಭಾರತ ವಿದೇಶಾಂಗ ಸಚಿವಾಲಯ ಈ ಬಗ್ಗೆ ಇನ್ನು 24 ಗಂಟೆಗಳ ಒಳಗಾಗಿ ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ಹೇಳಲಾಗಿದೆ. ಈ ಪ್ರಕ್ರಿಯೆಗೆ ಬೇಕಾದ ದಾಖಲೆಗಳು ಮತ್ತಿತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಚಿವಾಲಯ ಆರಂಭಿಸಿದ್ದು, ಸಿಬ್ಬಂದಿ ಸುರಕ್ಷಿತವಾಗಿ ಕಾಬೂಲ್​ನಿಂದ ಹೊರಡಲು ಅನುವಾಗುವಂತೆ ಸಿದ್ಧತೆ ನಡೆದಿದೆ.


ಕಾಬೂಲ್​ನ ಧೂತನಿವಾಸವನ್ನು ಅಲ್ಲಿಯ ಸ್ಥಳೀಯ ಕೆಲಸಗಾರರ ಸುಪರ್ದಿಗೆ ವಹಿಸಿ ಭಾರತದ ನೌಕರರು ಮಾತ್ರ ಅಲ್ಲಿಂದ ಆಚೆ ಬರಲಿದ್ದಾರೆ. ಮೂಲಗಳ ಪ್ರಕಾರ ಭಾರತ ಸರ್ಕಾರ ಈಗಾಗಲೇ ಅವರನ್ನೆಲ್ಲ ಸುರಕ್ಷಿತವಾಗಿ ದೇಶಕ್ಕೆ ಕರೆತರುವ ಬಗ್ಗೆ ಪ್ರಮಾಣ ಮಾಡಿದೆ.


ಅಫ್ಘಾನಿಸ್ತಾನ ಸೇನೆಯನ್ನು ಬಗ್ಗುಬಡಿದು ಭಯೋತ್ಪಾದಕ ಸಂಘಟನೆ ತಾಲಿಬಾನ್​ ರಾಜಧಾನಿ ಕಾಬೂಲನ್ನು ಕಬ್ಜ ಮಾಡುವುದು ಬಹುತೇಕ ಖಚಿತ ಎಂದು ಈ ಹಿಂದೆಯೇ ಸಿಎನ್​ಎನ್​ ನ್ಯೂಸ್​18 ವರದಿ ಮಾಡಿತ್ತು.


ಕಾಬೂಲಿನ ಪೊಲೀಸ್​ ಠಾಣೆಗಳಿಂದ ಸಿಬ್ಬಂದಿ ಓಡಿಹೋಗಿದ್ದಾರೆ. ಆತ್ಮರಕ್ಷಣೆಗಾಗಿ ಠಾಣೆಯ ಎಲ್ಲಾ ಬಂದೂಕು, ಮದ್ದುಗುಂಡುಗಳನ್ನು ಕೂಡ ಅವರ ಜೊತೆ ಕೊಂಡೊಯ್ದಿದ್ದಾರೆ ಎಂದು ಕಾಬೂಲಿನ ಪತ್ರಿಕೆಗಳು ವರದಿ ಮಾಡಿವೆ. ಮೂಲಗಳ ಪ್ರಕಾರ ಇಂದು ರಾತ್ರಿ ಅಥವಾ ನಾಳೆ ಮುಂಜಾನೆ ತಾಲಿಬಾನಿಗಳು ಕಾಬೂಲ್​ಗೆ ಮುತ್ತಿಗೆ ಹಾಕಲಿದ್ದಾರೆ. ಆದರೂ ಪ್ರಧಾನಿ ಕಚೇರಿಯ ಮೇಲೆ ತಾಲಿಬಾನಿಗಳು ದಾಳಿ ಮಾಡುವುದಿಲ್ಲ ಎಂದು ಮೂಲಗಳು ಹೇಳಿವೆ.


ಪಿಟಿಐ ವರದಿಯ ಪ್ರಕಾರ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು, ಮಾಧ್ಯಮ ವರದಿಗಾರರು ಭಾರತ ಧೂತನಿವಾಸದ ಸಹಾಯ ಯಾಚಿಸಿದ್ದಾರೆ. ಪರಿಸ್ಥಿತಿ ಕೈಮೀರಿ ಹೋದರೆ, ಕಾಬೂಲಿನಿಂದ ಆಚೆ ಕರೆದೊಯ್ಯುವಂತೆ ಮನವಿ ಮಾಡಿದ್ದಾರೆ.


ಈಗಾಗಲೇ ಅಮೆರಿಕಾ 3,000 ಟ್ರೂಪ್​ಗಳ ಸೇನೆಯನ್ನು ಅಫ್ಘಾನಿಸ್ತಾನಕ್ಕೆ ಕಳಿಸುತ್ತಿರುವುದಾಗಿ ತಿಳಿಸಿದ್ದು, ಅಮೆರಿಕಾ ವಿದೇಶಾಂಗ ಸಿಬ್ಬಂದಿಯನ್ನು ರಕ್ಷಣೆ ಮಾಡಲು ಮುಂದಾಗಿದೆ. ಇಂಗ್ಲೆಂಡ್​ ಕೂಡ 600 ಟ್ರೂಪ್​ಗಳನ್ನು ಕಳಿಸುವುದಾಗಿ ಅಧಿಕೃತ ಪ್ರಕಟಣೆ ಹೊರಡಿಸಿದೆ.


ಮಝರ್​-ಎ-ಶರೀಫ್​ ಕಾನ್ಸುಲೇಟ್​ನಲ್ಲಿ ಭಾರತದ ಸಿಬ್ಬಂದಿಯನ್ನು ಈಗಾಗಲೇ ವಾಪಸ್​ ಕರೆಸಿಕೊಂಡಿದ್ದು, ಬಲ್ಖ್​ ಪ್ರಾಂತ್ಯದ ರಾಜಧಾನಿಯನ್ನು ತಾಲಿಬಾನ್​ ಮುತ್ತಿಗೆ ಹಾಕಿದೆ.


ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಗ್ಚಿ ಪರಿಸ್ಥಿತಿ ಕುರಿತಾಗಿ ಹೇಳಿಕೆ ನೀಡಿದ್ದು, ನಾವು ಎಲ್ಲಾ ಘಟನೆಗಳನ್ನು ಹತ್ತಿರದಿಂದ ನೋಡುತ್ತಿದ್ದೇವೆ ಮತ್ತು ಇತ್ತೀಚಿನ ಬೆಳವಣಿಗೆ ಕಳವಳಕಾರಿಯಾಗಿದೆ ಎಂದಿದ್ದಾರೆ.


ತಾಲಿಬಾನ್‌ಗಳು ಎರಡು ಹೆಲಿಕಾಪ್ಟರ್‌ಗಳೊಂದಿಗೆ ಸುತ್ತುವರಿದು ಸೇನಾಧಿಕಾರಿ ಇಸ್ಮಾಯಿಲ್ ಖಾನ್​ನ ಬಂಧಿಸಿದ್ದಾರೆ. ಜೊತೆಗೆ ಕಾಬೂಲ್ ಆಡಳಿತದ ಇತರ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ, ಬಂಧಿತ ಅಧಿಕಾರಿಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಬಂಧಿತ 75 ವರ್ಷದ ಅಫ್ಘಾನ್ ಸೇನಾಧಿಪತಿ ಇಸ್ಮಾಯಿಲ್ ಖಾನ್ 2001ರಲ್ಲಿ ತಾಲಿಬಾನ್‌ಗಳನ್ನು ಸೋಲಿಸಲು ಅಮೆರಿಕಕ್ಕೆ ಸಹಾಯ ಮಾಡಿದ್ದರು.


ಮೇ ಆರಂಭದಲ್ಲಿ ಯುಎಸ್ ಪಡೆಗಳು ತಮ್ಮ ಅಂತಿಮ ಹಿಂತೆಗೆತವನ್ನು ಆರಂಭಿಸುತ್ತಿದ್ದಂತೆ ದಂಗೆಕೋರರು ಇರಾನಿನ ಗಡಿಯಿಂದ ಚೀನಾದ ಗಡಿಯವರೆಗೆ ವಿಸ್ತರಿಸಿದ ಪ್ರದೇಶವನ್ನು ವಶಪಡಿಸಿಕೊಂಡರು. ಇರಾನ್, ತಜಕಿಸ್ತಾನ್ ಮತ್ತು ತುರ್ಕಮೆನಿಸ್ತಾನದ ಪ್ರಮುಖ ಗಡಿ ದಾಟುವಿಕೆಗಳನ್ನು ಒಳಗೊಂಡಂತೆ ಅಫ್ಘಾನಿಸ್ತಾನದ 85 ಪ್ರತಿಶತವನ್ನು ಈಗ ನಿಯಂತ್ರಿಸುವುದಾಗಿ ತಾಲಿಬಾನ್ ಹೇಳಿದ್ದರಿಂದ ಮಾಜಿ ರಾಜಕಾರಣಿಗಳ ಟೀಕೆಗಳು ಬಂದವು.


ಬಂಧಿತ ಇಸ್ಮಾಯಿಲ್ ಖಾನ್ ಮಾಜಿ ರಾಷ್ಟ್ರಪತಿ ಹಮೀದ್ ಕರ್ಜಾಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. 1997 ರಲ್ಲಿ ಅವರು ದಂಗೆಯನ್ನು ಸಂಘಟಿಸಲು ಹಿಂದಿರುಗಿದಾಗ ತಾಲಿಬಾನ್ ವಶಕ್ಕೆ ಪಡೆದರು. ಆದರೆ ಎರಡು ವರ್ಷಗಳ ನಂತರ ಕಂದಹಾರ್ನಲ್ಲಿ ಜೈಲಿನಿಂದ ತಪ್ಪಿಸಿಕೊಂಡರು. 2001 ರಲ್ಲಿ ಯುಎಸ್ ಆಕ್ರಮಣದವರೆಗೂ ಮುಕ್ತರಾಗಿದ್ದರು.  ಮೇನಲ್ಲಿ ಹೆಚ್ಚಾದ ಆಕ್ರಮಣವು ಈಗ ದೇಶದಾದ್ಯಂತ  ನಗರಗಳನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದೆ.


ಇದನ್ನೂ ಓದಿ: ಅಫ್ಘಾನಿಸ್ತಾನ V/S ತಾಲಿಬಾನ್: ಅಫ್ಘಾನ್ ಸೇನಾಧಿಕಾರಿ ಇಸ್ಮಾಯಿಲ್ ಖಾನ್ ಸೆರೆ.. ತಾಲಿಬಾನಿಗಳ ಮೇಲುಗೈ


ಇತ್ತೀಚಿಗೆ ತಾಲಿಬಾನ್  ಕಂದಹಾರ್, ಲಷ್ಕರ್ ಗಹ್, ಹೆರಾತ್, ಗಜ್ನಿ ಮತ್ತು ಫರಾಹ್‌ನ ಪ್ರಾಂತ್ಯದ ರಾಜಧಾನಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಅಫ್ಘಾನಿಸ್ತಾನದಿಂದ ಅಂತಾರಾಷ್ಟ್ರೀಯ ಪಡೆಗಳು ಹೊರಬಂದಾಗಲೂ, ತಾಲಿಬಾನ್ ಹಲವಾರು ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈಗ ರಾಷ್ಟ್ರ ರಾಜಧಾನಿ ಕಾಬೂಲ್ ಅನ್ನು ಬಹುತೇಕ ಮುಚ್ಚುತ್ತಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಹಲವಾರು ದೇಶಗಳು ನಾಗರಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿವೆ. ಕಾಬೂಲ್ ಈಗ ಸಂಪೂರ್ಣವಾಗಿ ತಾಲಿಬಾನ್ ನಿಯಂತ್ರಣದಲ್ಲಿದೆ.  ಅಫ್ಘಾನಿಸ್ತಾನ ಸರ್ಕಾರದ ನಿಯಂತ್ರಣದಲ್ಲಿರದ ಪ್ರದೇಶದಿಂದ ಮೂವರು ಎಂಜಿನಿಯರ್‌ಗಳನ್ನು ಗುರುವಾರ ರಕ್ಷಿಸಲಾಗಿದ್ದು, ವಿದೇಶಿ ಪ್ರಜೆಗಳಲ್ಲಿ ಅನೇಕ ಭಾರತೀಯರು ಸೇರಿದ್ದಾರೆ.


ಇದನ್ನೂ ಓದಿ: ಇಂದು ಸಂಜೆಯೊಳಗೆ ಅಫ್ಘಾನಿಸ್ತಾನ ತೊರೆಯುವಂತೆ ಭಾರತೀಯರಿಗೆ ಸೂಚನೆ: ಸ್ವದೇಶಿಯರಿಗೆ ವಿಶೇಷ ವಿಮಾನ ಸೌಲಭ್ಯ


ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆಯೇ, ಅಫ್ಘಾನಿಸ್ತಾನ ಸರ್ಕಾರವು ತಾಲಿಬಾನ್‌ನ ತಡೆಹಿಡಿಯಲು ಯುದ್ಧ ಅಪರಾಧಗಳ ಆರೋಪ ಹೊತ್ತಿರುವ ಸೇನಾಧಿಕಾರಿ ಅಬ್ದುಲ್ ರಶೀದ್ ದೋಸ್ತಮ್ ಅವರ ಸಹಾಯವನ್ನು ತೆಗೆದುಕೊಳ್ಳಬಹುದು ಎಂದು AFP ವರದಿ ಮಾಡಿದೆ. ಅಫ್ಘಾನಿಸ್ತಾನ ಸರ್ಕಾರವು ದೋಸ್ತಮ್‌ನ ಮಿಲಿಟರಿ ಚಾಣಾಕ್ಷತೆ ಮತ್ತು ತಾಲಿಬಾನ್‌ನ ದ್ವೇಷವು ಪ್ರಸ್ತುತ ಬಂಡಾಯದ ದಾಳಿಯನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ ಎಂದು ವರದಿ ಹೇಳಿದೆ.

top videos
    First published: