• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Taapsee Pannu:ಛತ್ತೀಸ್​ಗಢ್ ಹೈಕೋರ್ಟ್ ವಿವಾದಾತ್ಮಕ ತೀರ್ಪಿನ ವಿರುದ್ಧ ಅಸಮಾಧಾನ ಹೊರಹಾಕಿದ ತಾಪ್ಸಿ ಪನ್ನು

Taapsee Pannu:ಛತ್ತೀಸ್​ಗಢ್ ಹೈಕೋರ್ಟ್ ವಿವಾದಾತ್ಮಕ ತೀರ್ಪಿನ ವಿರುದ್ಧ ಅಸಮಾಧಾನ ಹೊರಹಾಕಿದ ತಾಪ್ಸಿ ಪನ್ನು

ತಾಪ್ಸಿ ಪನ್ನು

ತಾಪ್ಸಿ ಪನ್ನು

Marital Rape: ಈ ತೀರ್ಪಿನ ವಿರುದ್ಧವಾಗಿ  ತಾಪ್ಸಿ ಮಾತ್ರವಲ್ಲದೆ ಗಾಯಕಿ ಸೋನಾ ಮೊಹಾಪಾತ್ರಾ ಕೂಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

  • Share this:

ಕಾನೂನುಬದ್ಧವಾಗಿ ಮದುವೆಯಾದ ಪುರುಷ ಮತ್ತು ಮಹಿಳೆಯ ನಡುವಿನ ಲೈಂಗಿಕ ಸಂಭೋಗವು  ಅದು ಬಲವಂತವಾಗಿ ಅಥವಾ ಪತ್ನಿಯ ಇಚ್ಛೆಗೆ ವಿರುದ್ಧವಾಗಿದ್ದರೂ ಕೂಡ ಅತ್ಯಾಚಾರವಲ್ಲ ಎಂದು ತೀರ್ಪು ನೀಡುವ ಮೂಲಕ ಛತ್ತೀಸ್‌ಗಢ್ ಹೈಕೋರ್ಟ್ ಇತ್ತೀಚೆಗೆ ವೈವಾಹಿಕ ಅತ್ಯಾಚಾರದ ಆರೋಪಿಯನ್ನು ಖುಲಾಸೆಗೊಳಿಸಿತು. ಇದಕ್ಕೆ ಪ್ರತಿಕ್ರಿಸಿರುವ  ನಟಿ ತಾಪ್ಸಿ ಪನ್ನು ಈ ತೀರ್ಪು ನಾಚಿಕೆಗೇಡಿನ ತೀರ್ಪು ಎಂದಿದ್ದಾರೆ.


ನಮ್ಮ ಟ್ವಿಟ್ಟರ್ ಖಾತೆಯಲ್ಲಿ ಖಾಸಗಿ ವಾಹಿನಿಯೊಂದರ ಈ ತೀರ್ಪಿನ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡಿರುವ ಅವರು, ತೀರ್ಪಿನ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.  ಬಿಲಾಸ್ಪುರ್ ಹೈಕೋರ್ಟ್ ಇತ್ತೀಚಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನಲ್ಲಿ ಕಾನೂನುಬದ್ಧವಾಗಿ ಮದುವೆಯಾದ ಪತ್ನಿಯೊಂದಿಗೆ ಲೈಂಗಿಕ ಸಂಭೋಗ ಅಥವಾ ಯಾವುದೇ ಲೈಂಗಿಕ ಕ್ರಿಯೆಯು ಅತ್ಯಾಚಾರವಲ್ಲ, ಅದು ಬಲವಂತವಾಗಿದ್ದರೂ ಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿದ್ದರೂ ಕೂಡ ಎಂದು ಹೇಳುವ ಮೂಲಕ ವಿವಾದ ಹುಟ್ಟು ಹಾಕಿದೆ.



ಕೋರ್ಟ್ ನೀಡಿರುವ ತೀರ್ಪನ್ನು  ಗಮನಿಸಿದ ತಾಪ್ಸಿ ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್​ನಲ್ಲಿ ಬಸ್ ಅಬ್ ಯೇಹಿ ಸುನ್ನಾ ಬಾಕಿ ಥಾ ಅಂದರೆ ಇದೊಂದು ಕೇಳುವುದು ಬಾಕಿ ಇತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ,. ಇನ್ನು ತಾಪ್ಸಿ ಈ ಟ್ವೀಟ್ ಶೇರ್ ಮಾಡುತ್ತಿದ್ದ ಹಾಗೆ ಹಲವಾರು ನೆಟ್ಟಿಗರು ಈ ತೀರ್ಪಿನ ವಿರುದ್ಧ ಕಾಮೆಂಟ್ ಮಾಡಿದ್ದಾರೆ. ತಾಪ್ಸಿ ಟ್ವೀಟ್​ ಗೆ ಹಲವಾರು ಜನರು ಪ್ರತಿಕ್ರಿಯಿಸಿದ್ದು ಹೈಕೋರ್ಟ್ ನಡೆಯನ್ನು ಖಂಡಿಸಿದ್ದಾರೆ.


ಈ ತೀರ್ಪಿನ ವಿರುದ್ಧವಾಗಿ  ತಾಪ್ಸಿ ಮಾತ್ರವಲ್ಲದೆ ಗಾಯಕಿ ಸೋನಾ ಮೊಹಾಪಾತ್ರಾ ಕೂಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ತಮ್ಮ ಸಾಮಾಜಿಕ ಜಾಲಾತಾಣ ಖಾತೆಯಲ್ಲಿ ಟ್ವೀಟ್ ಮಾಡಿರುವ ಸೋನಾ, ನನಗೆ ಈ ವಿಚಾರವನ್ನು ಓದುವಾಗ ಅಯ್ಯೋ ಅನಿಸುತ್ತದೆ, ಭಾರತದ ಬಗ್ಗೆ ಬರೆಯಲು ಸಾಧ್ಯವಿಲ್ಲ, ಎಲ್ಲವನ್ನುಭಾರತ ಮೀರಿದೆ ಎಂದಿದ್ದಾರೆ.



ಅತ್ಯಾಚಾರ ಆರೋಪವನ್ನು ಎದುರಿಸುತ್ತಿರುವ ವ್ಯಕ್ತಿಯ ವಿರುದ್ಧ ಅತ್ಯಾಚಾರ ಸೇರಿದಂತೆ ಆತನ  ವಿರುದ್ಧದ ಇತರ ಅಪರಾಧಗಳನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಮತ್ತು ಆತನ ಇಬ್ಬರು ಕುಟುಂಬಸ್ಥರು ಸಲ್ಲಿಸಿದ್ದ  ಕ್ರಿಮಿನಲ್ ಪರಿಷ್ಕರಣೆ ಅರ್ಜಿಯಲ್ಲಿ ನ್ಯಾಯಮೂರ್ತಿ ಎನ್ ಕೆ ಚಂದ್ರವಂಶಿ ಆಗಸ್ಟ್ 23 ರಂದು ಈ ತೀರ್ಪು ನೀಡಿದ್ದರು.


ಪ್ರಕರಣದಲ್ಲಿ,  ಆರೋಪಿಯನ್ನು ಖುಲಾಸೆ ಮಾಡಲಾಗಿದೆ.  ಆತನ ಹೆಂಡತಿಯೊಂದಿಗಿನ ಅಸಹಜ ದೈಹಿಕ ಸಂಬಂಧ ಎಂದು ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ಆರೋಪ ಮಾಡಲಾಗಿತ್ತು  ಹೈಕೋರ್ಟ್ ನೀಡಿದ ಈ ತೀರ್ಪು ವಿವಾದ ಸೃಷ್ಟಿ ಮಾಡಿದ್ದು, ಬಾಲಿವುಡ್ ತಾರೆಯರು ಸೇರಿದಂತೆ ನೆಟ್ಟಿಗರು ಇದರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.


 

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು