Five Burnt Alive: ಅಳಿಲಿನಿಂದಾಗಿ ಹೋಯ್ತು 5 ಜೀವ, ಸ್ಥಳದಲ್ಲೇ ಸಜೀವ ದಹನ!

ಘಟನಾ ಸ್ಥಳ

ಘಟನಾ ಸ್ಥಳ

ಚಿಲ್ಲಕೊಂಡಯ್ಯಪಲ್ಲಿಯಲ್ಲಿ ಐವರು ಸಜೀವ ದಹನವಾಗಿರುವ ಭೀಕರ ಅಪಘಾತಕ್ಕೆ ಅಳಿಲು ಕಾರಣ ಎಂದು ಆಂಧ್ರ ಪ್ರದೇಶ ದಕ್ಷಿಣ ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್ (ಎಪಿಎಸ್‌ಪಿಡಿಸಿಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಹರನಾಥರಾವ್ ಆರೋಪಿಸಿದ್ದಾರೆ.

  • Share this:

    ಆಂಧ್ರಪ್ರದೇಶ(ಜು.02): ಆಂಧ್ರಪ್ರದೇಶದ (Andhra Pradesh) ಶ್ರೀ ಸತ್ಯಸಾಯಿ ಜಿಲ್ಲೆಯ ತಾಡಿಮರ್ರಿ ಮಂಡಲದ ಗುಡ್ಡಂಪಲ್ಲಿಯ ಐವರು ಕೃಷಿ ಕಾರ್ಮಿಕರು ಸಜೀವ ದಹನಗೊಂಡ (Burnt Alive) ಘಟನೆ ಆಂಧ್ರಪ್ರದೇಶವನ್ನು ಬೆಚ್ಚಿಬೀಳಿಸಿದೆ. ವಿದ್ಯುತ್ ಕುರಿತು ಮತ್ತಷ್ಟು ಕೇರ್​ಫುಲ್ ಆಗಿರಬೇಕಾಗಿರುವುದರ ಅಗತ್ಯವನ್ನೂ ತಿಳಿಸಿಕೊಟ್ಟಿದೆ. ಮೂವರು ಗಂಭೀರ ಗಾಯಗಳೊಂದಿಗೆ ಅನಂತಪುರದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. 11 ಕೆವಿ ಹೈಟೆನ್ಷನ್ ವಿದ್ಯುತ್ ತಂತಿಯು ಕಂಬದ ಬಳಿಯ ಇನ್ಸುಲೇಟರ್‌ಗೆ ತಾಗಿ ತುಂಡಾಗಿ ಬಿದ್ದಿದೆ. ಗುರುವಾರ ಬೆಳಿಗ್ಗೆ 10 ಪ್ರಯಾಣಿಕರು ಮತ್ತು ಚಾಲಕನನ್ನು ಹೊತ್ತ ವಾಹನ ಈ ದಾರುಣ ಅಪಘಾತಕ್ಕೆ ಸಿಲುಕಿದೆ. ಆಂಧ್ರಪ್ರದೇಶದ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ (APTRANSCO) ಅಧಿಕಾರಿಗಳು ತಂತಿಯ ಮೇಲೆ ಅಳಿಲು (Squirrel) ಬಿದ್ದಿದ್ದು, ಶಾರ್ಟ್ ಸರ್ಕ್ಯೂಟ್ ಮತ್ತು ತಂತಿ (Wire) ತುಂಡಾಗಲು ಕಾರಣವಾಯಿತು ಎಂದು ಹೇಳಿದರೆ, ಸ್ಥಳೀಯರು ತಂತಿಗೆ ಮೂರು ಕೀಲುಗಳು ಇದ್ದು ಇವುಗಳು 50 ವರ್ಷ ಹಳೆಯದು ಎಂದು ಆರೋಪಿಸಿದ್ದಾರೆ.


    ಚಿಲ್ಲಕೊಂಡಯ್ಯಪಲ್ಲಿಯಲ್ಲಿ ಐವರು ಸಜೀವ ದಹನವಾಗಿರುವ ಭೀಕರ ಅಪಘಾತಕ್ಕೆ ಅಳಿಲು ಕಾರಣ ಎಂದು ಆಂಧ್ರ ಪ್ರದೇಶ ದಕ್ಷಿಣ ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್ (ಎಪಿಎಸ್‌ಪಿಡಿಸಿಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಹರನಾಥರಾವ್ ಆರೋಪಿಸಿದ್ದಾರೆ.


    ಕಬ್ಬಿಣದ ಕ್ಲಾಂಪ್​ಗೆ ಜಿಗಿದಿತ್ತಂತೆ ಅಳಿಲು


    ಹೈ ಟೆನ್ಶನ್ ತಂತಿಗಳು ತುಂಡಾಗಿ ಆಟೋ ರಿಕ್ಷಾ ಮೇಲೆ ಬಿದ್ದಿವೆ. ಅದರಂತೆ ಅಳಿಲು ಹೈಟೆನ್ಷನ್ ವಿದ್ಯುತ್ ತಂತಿಯಿಂದ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಕಬ್ಬಿಣದ ಕ್ಲಾಂಪ್ ಗೆ ಜಿಗಿದಿದೆ. ಅಳಿಲಿಗೆ ಉಂಟಾದ ಗಲಿಬಿಲಿಯಲ್ಲಿ ಹೈ ಟೆನ್ಷನ್ ವೈರ್‌ಗಳು ಸಂಪರ್ಕಕ್ಕೆ ಬಂದು ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ತಂತಿಗಳು ತುಂಡಾಗಿ ಆಟೋ ರಿಕ್ಷಾ ಮೇಲೆ ಬಿದ್ದಿವೆ ಎಂದು ಸಿಎಂಡಿ ಹೇಳಿದ್ದಾರೆ.


    ಘಟನೆ ಸುತ್ತ ಅನುಮಾನದ ಹುತ್ತ


    ಗುರುವಾರ ನಡೆದ ಈ ಘಟನೆಯು ಬಳಕೆಯಲ್ಲಿರುವ ಹೈಟೆನ್ಷನ್ ವಿದ್ಯುತ್ ತಂತಿಗಳು ಮತ್ತು ಇನ್ಸುಲೇಟರ್‌ಗಳ ಗುಣಮಟ್ಟದ ಬಗ್ಗೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ವಿದ್ಯುತ್ ಕ್ಷೇತ್ರದ ತಜ್ಞರ ಪ್ರಕಾರ, ಪಕ್ಷಿಗಳು ಮತ್ತು ಅಳಿಲುಗಳು ವಿದ್ಯುತ್ ಕಂಬಗಳ ಮೇಲೆ ಕುಳಿತು ಚಲಿಸುವುದು ಸಹಜ. ವಿದ್ಯುತ್ ತಂತಿಗಳ ಮೇಲೆ ಅಳಿಲುಗಳ ಉಪಸ್ಥಿತಿಯಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದರೆ, ಸಂಬಂಧಿಸಿದ ಸಬ್ ಸ್ಟೇಷನ್ ಟ್ರಿಪ್ ಆಗುತ್ತದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ವಿದ್ಯುತ್ ಸರಬರಾಜು ನಿಲ್ಲಿಸಲಾಗುವುದು ಎಂದು ತಜ್ಞರು ಹೇಳಿದ್ದಾರೆ.


    ಇದನ್ನೂ ಓದಿ: Scorpion Sting: ಸರ್ಕಾರಿ ಶಾಲೆಯುಲ್ಲಿ ಚೇಳು ಕುಟುಕಿ ವಿದ್ಯಾರ್ಥಿನಿ ಸಾವು


    ವಿದ್ಯುತ್ ತಂತಿಗಳು ಬೀಳುವ ಸಂದರ್ಭದಲ್ಲಿಯೂ ಸಬ್ ಸ್ಟೇಷನ್ ಟ್ರಿಪ್ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ಫೀಡರ್‌ನಲ್ಲಿ ಬ್ರೇಕರ್‌ಗಳು ಇರುತ್ತವೆ. ಚಿಲ್ಲಕೊಂಡಯ್ಯಪಲ್ಲಿ ಘಟನೆಯ ವಿಚಾರಕ್ಕೆ ಬಂದರೆ, ಅಳಿಲಿಂದ ಶಾರ್ಟ್ ಸರ್ಕ್ಯೂಟ್ ಮತ್ತು ತಂತಿಗಳು ತೀವ್ರವಾಗಿವೆ ಎಂದು ಅವರು ಹೇಳಿದರು. ಆದರೆ ಸಬ್ ಸ್ಟೇಷನ್ ಟ್ರಿಪ್ ಆಗಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿಲ್ಲ . ಇದು ಜನರ ಸಂಶಯಕ್ಕೆ ಕಾರಣ.


    ವಿಚಾರಣೆಗೆ ಆದೇಶ


    ಆಂಧ್ರಪ್ರದೇಶದ ದಕ್ಷಿಣ ವಿದ್ಯುತ್ ವಿತರಣಾ ನಿಗಮದ (ಎಪಿಎಸ್‌ಪಿಡಿಸಿಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್.ಹರಿನಾಧ್ ರಾವ್ ಅವರು ಸಂಪೂರ್ಣ ಘಟನೆ ಮತ್ತು ತಂತಿ ತುಂಡಾಗಿರುವ ಕಾರಣಗಳ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ ₹ 5 ಲಕ್ಷ ಹಾಗೂ ಗಾಯಗೊಂಡವರಿಗೆ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅವರು ಅನಂತಪುರ ಎಸ್‌ಇ ಅವರನ್ನು ಕೋರಿದ್ದಾರೆ.


    ಇದನ್ನೂ ಓದಿ: Jagannath Puri Rath Yatra: ಜಗನ್ನಾಥ ಪುರಿ ರಥಯಾತ್ರೆ ವೈಭವ! ಇಲ್ಲಿವೆ ಫೋಟೋಗಳು


    APTRANSCO ಸಬ್ ಇನ್ಸ್‌ಪೆಕ್ಟರ್ ಕೆ.ಜನಾರ್ದನ್ ಪ್ರಕಾರ, ಮೃತರನ್ನು ಕೊಂಕ ರಾಮುಲಮ್ಮ, 30, ಕೊಂಕ ರತ್ನಮ್ಮ, 45, ಕೊಂಕ ಪೆದ್ದ ಕಾಂತಮ್ಮ, 50, ಕೊಂಕ ಲಕ್ಷ್ಮಿ ದೇವಿ, 45, ಮತ್ತು ಜಿ.ಕುಮಾರಿ, 35 ಎಂದು ಗುರುತಿಸಲಾಗಿದೆ. ಇದೇ ಮಂಡಲದ ಚಿಲ್ಲಕೊಂಡಯ್ಯಪಲ್ಲಿಗೆ ಬೆಳಗ್ಗೆ 6 ಗಂಟೆಗೆ ನಿತ್ಯದ ಕೃಷಿ ಕೆಲಸಕ್ಕೆ ಹೋಗುತ್ತಿದ್ದಾಗ ತಂತಿ ತುಂಡಾಗಿ ಆಟೋ ಮೇಲೆ ಬಿದ್ದಿದೆ. ವಾಹನದ ಮೇಲ್ಛಾವಣಿಯ ಮೇಲೆ ಕಬ್ಬಿಣದ ಚೌಕಟ್ಟು ಹೊತ್ತಿದ್ದು, ಬೆಂಕಿ ಹೊತ್ತಿಕೊಂಡಿದೆ.

    Published by:Divya D
    First published: