• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Crime: ಬ್ಯಾಂಕ್​ ಮ್ಯಾನೇಜರ್​ಗೆ ಬೆಂಕಿಯಿಟ್ಟ ಸೆಕ್ಯುರಿಟಿ ಗಾರ್ಡ್​! ಸಿಲ್ಲಿ ಕಾರಣಕ್ಕೆ ನಡೆಯಿತು ಘೋರ ದುರಂತ

Crime: ಬ್ಯಾಂಕ್​ ಮ್ಯಾನೇಜರ್​ಗೆ ಬೆಂಕಿಯಿಟ್ಟ ಸೆಕ್ಯುರಿಟಿ ಗಾರ್ಡ್​! ಸಿಲ್ಲಿ ಕಾರಣಕ್ಕೆ ನಡೆಯಿತು ಘೋರ ದುರಂತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರೋಪಿ- ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಕ್ಷಣ ಮ್ಯಾನೇಜರ್ ಕಿರುಚಾಡಿದ್ದನ್ನು ಕೇಳಿಸಿಕೊಂಡ ಇತರೆ ನೌಕರರು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

  • Share this:

ಡೆಹ್ರಾಡೂನ್: ಉತ್ತರಾಖಂಡದ (Uttarakhand) ಪಿಥೋರಗಢ ಜಿಲ್ಲೆಯ ಧಾರ್ಚುಲಾದಲ್ಲಿ ಭದ್ರತಾ ಸಿಬ್ಬಂದಿಯೊಬ್ಬ (Security Guard) ಸ್ಟೇಟ್​ ಬ್ಯಾಂಕ್‌ ಆಫ್ ಇಂಡಿಯಾ ಬ್ಯಾಂಕ್​ನ ( State Bank of India) ಮ್ಯಾನೇಜರ್‌ಗೆ (Manager) ಬೆಂಕಿ ಹಚ್ಚಿದ ಘಟನೆ ಶನಿವಾರ ನಡೆದಿದೆ. ರಜೆ ನೀಡದ ಕಾರಣಕ್ಕೆ ಬ್ಯಾಂಕ್ ಮ್ಯಾನೇಜರ್​ಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ತಿಳಿಸಿರುವ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಉತ್ತರಾಖಂಡದ ಧಾರ್ಚುಲಾದಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಬ್ಯಾಂಕ್ ಮ್ಯಾನೇಜರ್​ಗೆ ಶೇಕಡಾ 36 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮ್ಯಾನೇಜರ್ ಮೊಹಮ್ಮದ್ ಓವೈಸ್ ಅವರಿಗೆ ಶೇಕಡಾ 36 ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ರಿಷಿಕೇಶದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ದಾಖಲಿಸಲಾಗಿದೆ ಎಂದು ಅವರು ಪೊಲೀಸರು ಮಾಹಿತಿ ನೀಡಿದ್ದಾರೆ.


ಆಬ್ಸೆಂಟ್​ ಮಾರ್ಕ್​ ಹಾಕಿದ್ದಕ್ಕೆ ಜಗಳ


ಆರೋಪಿ ದೀಪಕ್ ಕ್ಷೇತ್ರಿ ಎರಡು ವರ್ಷಗಳಿಂದ ಧಾರ್ಚುಲಾ ಶಾಖೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ಬ್ಯಾಂಕ್​ಗೆ ಬಂದಿರದ ಕಾರಣ ಮ್ಯಾನೇಜರ್ ದೀಪಕ್​ಗೆ ಆಬ್ಸೆಂಟ್ ಮಾರ್ಕ್​ ಮಾಡಿದ್ದರು. ಈ ಕ್ರಮದ ನಂತರ ಕ್ಷೇತ್ರಿ  ಮ್ಯಾನೇಜರ್​ ಕ್ಯಾಬಿನ್​ಗೆ ತೆರಳಿ ವಾಗ್ವಾದ ನಡೆಸಿದ್ದಾನೆ. ಈ ಜಗಳ ಅತಿರೇಕಕ್ಕೆ ತಿರುಗಿದಾಗ ದೀಪಕ್ ಮ್ಯಾನೇಜರ್​ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.


ಇದನ್ನೂ ಓದಿ:  Theft: ಪ್ಲಾಸ್ಟಿಕ್ ಗನ್​ ತೋರಿಸಿ ಜ್ಯುವೆಲರಿ ಶಾಪ್ ದರೋಡೆ ಮಾಡಿದ 16ರ ಬಾಲಕ! ಆತನ ಪ್ಲಾನ್ ಕೇಳಿ ಪೊಲೀಸರೇ ಶಾಕ್


ಇತರೆ ಸಿಬ್ಬಂದಿಯಿಂದ ರಕ್ಷಣೆ


ಆರೋಪಿ- ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಕ್ಷಣ ಮ್ಯಾನೇಜರ್ ಕಿರುಚಾಡಿದ್ದು,  ಬೆಂಕಿ ವ್ಯಾಪಿಸುತ್ತಿರುವುದನ್ನು ಕಂಡ ಇತರೆ ನೌಕರರು ಓವೈಸ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದೀಪಕ್​ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




ಸೆಕ್ಯುರಿಟಿ ಗಾರ್ಡ್ ಮಾಜಿ ಯೋಧ


ಡೆಹ್ರಾಡೂನ್ ನಿವಾಸಿಯಾಗಿರುವ ಕ್ಷೇತ್ರಿ ಮಾಜಿ ಯೋಧರಾಗಿದ್ದು, ಅವರು ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಅವರು ಕಳೆದ ಎರಡು ವರ್ಷಗಳಿಂದ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮ್ಯಾನೇಜರ್ ರಜೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದು, ತಮಗೆ ರಜೆ ನಿರಾಕರಿಸಿದ್ದರಿಂದ ತಾನು ಈ ಕೇತ್ಯ ಎಸಗಿರುವುದಾಗಿ ಆರೋಪಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ: Manipur Updates: ಮಣಿಪುರ ಹಿಂಸಾಚಾರಕ್ಕೆ 54 ಮಂದಿ ಬಲಿ; ಸಹಜ ಸ್ಥಿತಿಯತ್ತ ಮರಳಿದ ಬಳಿಕ ಕರ್ಫ್ಯೂ ಸಡಿಲಿಕೆ


ವಿಜಯಪುರದಲ್ಲಿ ಹಾಡಹಗಲೇ ರೈಡಿ ಶೀಟೆರ್​ ಕೊಲೆ


ಚುನಾವಣೆ ಕಾವಿನ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಹಾಡ ಹಗಲೇ ರೌಡಿಶೀಟರ್ ಒಬ್ಬನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ನಗರದ ಚಂದಾಪುರ ಕಾಲೋನಿಯಲ್ಲಿ ಶನಿವಾರ ಬೆಳಗ್ಗೆ 10.30 ರ ಸಮಯದಲ್ಲಿ ಈ ಘಟನೆ ನಡೆದಿದೆ. ಚಂದಾಪುರ ಕಾಲೋನಿ ನಿವಾಸಿ ಹೈದರ್​ಅಲಿ ನದಾಫ್ ಗುಂಡಿನ ದಾಳಿಗೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಅಲಿ ಮನೆಯಿಂದ ಹೊರಗೆ ಬಂದು ಕಾರು ಹತ್ತುವ ವೇಳೆ ಬೈಕ್ ಹಾಗೂ ಕಾರ್​ನಲ್ಲಿ ಬಂದ ದುಷ್ಕರ್ಮಿಗಳು ದೇಸಿ ಪಿಸ್ತೂಲ್​ನಿಂದ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಅಲಿ ಈ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಹ ಅವರನ್ನ ಬೆನ್ನಟ್ಟಿ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.


ಕಾರ್ಪೊರೇಟರ್ ಪತಿ


ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 19ನೇ ವಾರ್ಡ್​ನಿಂದ ಅಲಿ ಪತ್ನಿ ನಿಶಾತ್ ನದಾಫ್​ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಪಾಲಿಕೆ ಚುನಾವಣೆಯ ವೈಷ್ಯಮ್ಯದಿಂದಲೇ ಹೈದರಅಲಿಯನ್ನ ಕೊಲೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

top videos
    First published: