SBI ಗ್ರಾಹಕರೇ ಎಚ್ಚರ..! ಬ್ಯಾಂಕ್​ನಿಂದ ಬಂದ ಹೊಸ ವಾರ್ನಿಂಗ್​ ಬಗ್ಗೆ ನೀವು ತಿಳಿಯಲೇಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

State Bank of India: ತನ್ನ ಟ್ವಿಟರ್​ ಖಾತೆಯ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡಿರುವ ಎಸ್​ಬಿಐ. ನಿಮಗೆ ಬರುವ ಕೆವೈಸಿ ಅಪ್​ಡೇಟ್​ ಲಿಂಕ್​ಗಳ ಬಗ್ಗೆ ಎಚ್ಚರದಿಂದ ಇರಿ ಎಂದು ಹೇಳಿದೆ.

  • Share this:



    ದೇಶದ ಅತಿದೊಡ್ಡ ಬ್ಯಾಂಕ್​ ಜಾಲ ಎಸ್​ಬಿಐ (ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ) ತನ್ನ ಗ್ರಾಹಕರಿಗೆ ಸೋಮವಾರ ಬೆಳಿಗ್ಗೆಯೇ ಅತ್ಯಂತ ಜರೂರಾದ ಎಚ್ಚರಿಕೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನ್​ಲೈನ್​​ ವಂಚನೆ, ಸೈಬರ್​ ಕ್ರೈಂ ನಂತಹ ಘಟನೆಗಳು ಬ್ಯಾಂಕಿಂಗ್​ ಕ್ಷೇತ್ರವನ್ನು ಅಲುಗಾಡಿಸಿದ್ದು, ಅಮಾಯಕ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಗ್ರಾಹಕರ ಬಗ್ಗೆ ತಿಳಿಯಿರಿ (ಕೆವೈಸಿ) ಮೂಲಕ ಅನೇಕ ಜನರನ್ನು ಮೋಸಗೊಳಿಸಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ.





    ತನ್ನ ಟ್ವಿಟರ್​ ಖಾತೆಯ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡಿರುವ ಎಸ್​ಬಿಐ. ನಿಮಗೆ ಬರುವ ಕೆವೈಸಿ ಅಪ್​ಡೇಟ್​ ಲಿಂಕ್​ಗಳ ಬಗ್ಗೆ ಎಚ್ಚರದಿಂದ ಇರಿ ಎಂದು ಹೇಳಿದೆ.


    ಎಸ್​ಬಿಐ ಹೇಳಿದೆ ’’ಮೋಸಗಾರರು ನಿಮ್ಮ ಮೊಬೈಲ್​ ಸಂಖ್ಯೆಗೆ  ಒಂದು ಸಣ್ಣ ಸಂದೇಶ ಕಳುಹಿಸುತ್ತಾರೆ, ನಾವು ಬ್ಯಾಂಕಿನ ಉದ್ಯೋಗಿಗಳು ಅಥವಾ ಬ್ಯಾಂಕಿಗೆ ಸಂಬಂಧಪಟ್ಟವರು ಎಂದು ಹೇಳಿ ನಿಮ್ಮ ಎಲ್ಲಾ ಮಾಹಿತಿಯನ್ನು ಪಡೆಯುತ್ತಾರೆ. ಈ ರೀತಿ ನಿಮ್ಮನ್ನು ಮೋಸಗೊಳಿಸುತ್ತಾರೆ.


    https://twitter.com/TheOfficialSBI/status/1414489922241658883


    ಕೆವೈಸಿ ಮೂಲಕ ಮೋಸ ಮಾಡುತ್ತಿರುವುದು ನಿಜವಾದ ಸಂಗತಿಯಾಗಿದೆ. ವಂಚಕರು ನಿಮ್ಮ ಮೊಬೈಲ್​ ಸಂಖ್ಯೆಗೆ ಸಂದೇಶ ಕಳುಹಿಸಿ ನಿಮ್ಮ ಮಾಹಿತಿ ತೆಗೆದುಕೊಂಡು, ನಿಮ್ಮ ಹಣ ಲಪಟಾಯಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಟ್ವಿಟರ್​ನಲ್ಲಿ ಎಸ್​ಬಿಐ ಬರೆದುಕೊಂಡಿದೆ.


    ಅಲ್ಲದೇ ಬ್ಯಾಂಕ್​ ತನ್ನ ಗ್ರಾಹಕರಲ್ಲಿ ಮನವಿ ಮಾಡಿದ್ದು, ದಯವಿಟ್ಟು ಇಂತಹ ಯಾವುದೇ ಘಟನೆಗಳನ್ನು ನೀವು ಎದುರಿಸಿದ್ದರೇ ಕೂಡಲೇ ಬ್ಯಾಂಕಿನ ಗಮನಕ್ಕೆ ತನ್ನಿ ಮತ್ತು ಸೈಬರ್​​ ಕ್ರೈಮ್​ ವಿಭಾಗಕ್ಕೆ ಕೂಡಲೇ ಮಾಹಿತಿ ನೀಡಿ.  https://www.cybercrime.gov.in/ಗೆ ಲಾಗಿನ್​ ಆಗಿ ದೂರು ಸಲ್ಲಿಸಿ. ಈ ವಿಭಾಗವು ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆ ಎಂದು ಸಹ ಮಾಹಿತಿ ನೀಡಿದೆ.


    ಅಲ್ಲದೇ ಬ್ಯಾಂಕ್​ ಮೂರು ರೀತಿಯ ಭದ್ರತಾ ಸಂಗತಿಗಳನ್ನು ತನ್ನ ಗ್ರಾಹಕರಿಗೆ ತಿಳಿಸಿದೆ. ಇದು ನಿಮ್ಮ ಖಾತೆಯನ್ನು, ನಿಮ್ಮ ದುಡಿಮೆಯನ್ನು ಭದ್ರವಾಗಿರಿಸುತ್ತದೆ ಎಂದು ಸಹ ಹೇಳಿದೆ.


    ಯಾವುದೇ ಲಿಂಕ್​ ಅನ್ನು ಕ್ಲಿಕ್​ ಮಾಡುವ ಮುಂಚೆ ಕೊಂಚ ಯೋಚಿಸಿ


    ಬ್ಯಾಂಕ್​ ಎಂದಿಗೂ ಸಹ ತನ್ನ ಗ್ರಾಹಕರನ್ನು ಕೇಳಿಕೊಂಡು ಅವರ ಮಾಹಿತಿ ಕೇಳಿಕೊಂಡು (ಕೆವೈಸಿ) ಕರೆ ಮಾಡುವುದಿಲ್ಲ.


    ನಿಮ್ಮ ಮೊಬೈಲ್​ ಸಂಖ್ಯೆಯನ್ನು ಹಾಗೂ ಗೌಪ್ಯವಾದ ಸಂಗತಿಗಳನ್ನು  ಯಾರ ಬಳಿಯೂ ಹಂಚಿಕೊಳ್ಳಬೇಡಿ ಎಂದು ಎಚ್ಚರಿಕೆ  ನೀಡಿದೆ.


    ಇದನ್ನೂ ಓದಿ: ಯಾರಿದು ಅರುಣ್​ ಕುಮಾರ್​? ಹೊಸ ವ್ಯಕ್ತಿಯನ್ನು ಮುನ್ನೆಲೆಗೆ ತಂದ ಆರ್​ಎಸ್​ಎಸ್​!


    ವರದಿಗಳ ಪ್ರಕಾರ ಚೀನಾ ದೇಶದ ಹ್ಯಾಕರ್​ಗಳು ಎಸ್​ಬಿಐ ಗ್ರಾಹಕರನ್ನೇ ಗುರಿಯಾಗಿಸಿಕೊಂಡಿದ್ದು, ನಿಮ್ಮ ಕೆವೈಸಿ ಅಪ್​ಡೇಟ್​ ಮಾಡಿದರೆ ನಿಮಗೆ 50 ಲಕ್ಷ ಬಹುಮಾನ ಸಿಗುತ್ತದೆ ಎಂದು ಆಮಿಷ ತೋರಿಸಿ ಹಣ ದೋಚಲಾಗುತ್ತಿದೆ. ಇತ್ತೀಚೆಗೆ 67 ವರ್ಷ ವಯಸ್ಸಿನ ವೃದ್ದರೊಬ್ಬರು ಸುಮಾರು 3 ಲಕ್ಷ ಹಣವನ್ನು ಕಳೆದುಕೊಂಡಿದ್ದು ಸುದ್ದಿಯಾಗಿತ್ತು. ಕೆವೈಸಿ ಮಾಹಿತಿ ಪಡೆಯುವುದಾಗಿ ಹೇಳಿ ಅತ್ಯಂತ ಅಗತ್ಯ ಮಾಹಿತಿಗಳನ್ನು ಪಡೆದು ಈ ಕೃತ್ಯ ಎಸಗಿದ್ದರು ಎಂದು ಹೇಳಲಾಗಿದೆ. ಆದ ಕಾರಣ ಈ ಎಚ್ಚರಿಕೆಯನ್ನು ಬ್ಯಾಂಕ್​ ನೀಡಿದೆ.







    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ. ಗುಂಪುಗೂಡುವುದನ್ನು ನಿಯಂತ್ರಿಸಿ.


    Published by:HR Ramesh
    First published: