Shivasena: ಖೇಲ್​ ರತ್ನ ಹೆಸರು ಮರುನಾಮಕರಣ ಜನರ ಇಚ್ಛೆಯಲ್ಲ, ಇದು ರಾಜಕೀಯ ಆಟ; ಶಿವಸೇನಾ

ಶಿವಸೇನೆ ನಾಯಕ ಸಂಜಯ್ ರಾವತ್.

ಶಿವಸೇನೆ ನಾಯಕ ಸಂಜಯ್ ರಾವತ್.

ರಾಜೀವ್​ ಗಾಂಧಿ ಅವರ ಹೆಸರಿಗೆ ಅಪಮಾನ ಮಾಡದಂತೆ ಮೇಜರ್​ ಧ್ಯಾನ್​ ಚಂದ್​ ಅವರ ಹೆಸರಿಗೆ ಗೌರವ ಸಲ್ಲಿಸಬಹುದಿತ್ತು. ಆದರೆ, ದೇಶ ಅಂತಹ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಕಳೆದುಕೊಂಡಿದೆ. ಸ್ವರ್ಗದಲ್ಲಿರುವ ಧ್ಯಾನ್​ ಚಂದ್​ ಅವರಿಗೂ ಈ ನಡೆ ಬೇಸರ ತರಿಸಿದೆ.

  • Share this:

    ಮುಂಬೈ (ಆ. 9): ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿ ಹೆಸರನ್ನು ಮರುನಾಮಕರಣ ಮಾಡಬೇಕೆಂಬುದು ಜನರ ಆಸೆಯಾಗಿರಲಿಲ್ಲ. ಅದು ರಾಜಕೀಯ ಆಟವಾಗಿದೆ ಎಂದು ಶಿವಸೇನೆ ಕೇಂದ್ರದ ವಿರುದ್ಧ ಟೀಕಿಸಿದೆ. ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಈ ಕುರಿತು ಅಭಿಪ್ರಾಯ ತಿಳಿಸಿದೆ. ಧ್ಯಾನಚಂದ್​ ಅವರು ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಿನ್ನಲೆ ಈ ಹೆಸರನ್ನು ನಾಮಕರಣ ಮಾಡಿರುವುದಾಗಿ ಕೇಂದ್ರ ಹೇಳಿದೆ. ಹಾಗಾದ್ರೆ ಅಹ್ಮದಾಬಾದ್​ನಲ್ಲಿರುವ ಕ್ರಿಕೆಟ್​ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಅವರ ಹೆಸರನ್ನು ಇಡಲಾಗಿದೆ. ಹಾಗಾದ್ರೆ ಕ್ರೀಡಾ ಕ್ಷೇತ್ರಕ್ಕೆ ನರೇಂದ್ರ ಮೋದಿ ಕೊಡುಗೆ ಏನು ಎಂದು ಇದೇ ವೇಳೆ ಪ್ರಶ್ನಿಸಿದೆ.
    ಭಾರತದ ಅತ್ಯುನ್ನತ್ತ ಕ್ರೀಡಾ ಪುರಸ್ಕಾರವಾದ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಯನ್ನ ಕಳೆದೆರಡು ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ಮರು ನಾಮಕರಣ ಮಾಡಿದ್ದರು. ಇದೇ ವೇಳೇ ಟೋಕಿಯೋ ಒಲಂಪಿಕ್ಸ್​ನಲ್ಲಿ ಭಾರತದ ಮಹಿಳಾ ಮತ್ತು ಪುರಷರ ಹಾಕಿ ತಂಡದ ಪ್ರದರ್ಶನದ ಬಗ್ಗೆ ಕೂಡ ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದರು.


    ಇದೇ ಸಂದರ್ಭದಲ್ಲಿ ಅವರು ಭಾರತದ ಅನೇಕ ನಾಗರೀಕರು ಖೇಲ್​ ರತ್ನ ಪ್ರಶಸ್ತಿಗೆ ಮರು ನಾಮಕರಣ ಮಾಡುವಂತೆ ಮನವಿ ಮಾಡಿದ್ದರು. ಜನರ ಆಸೆಯಂತೆ ಮೇಜರ್​ ಧ್ಯಾನ್​​ ಚಂದ್​ ಅವರ ಹೆಸರನ್ನು ಇಡಲಾಗಿದೆ ಎಂದು ತಿಳಿಸಿದ್ದರು.


    ಈ ಕುರಿತು ಇಂದು ತಮ್ಮ ಮುಖವಾಣಿಯಲ್ಲಿ ಸುದೀರ್ಘ ಲೇಖನ ಬರೆದಿರುವ ಶಿವಸೇನಾ, ದಿವಂಗತ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್​ ಗಾಂಧಿ ಭಯೋತ್ಪಾದಕರ ಕಾರ್ಯಕ್ಕೆ ಬಲಿಯಾದವರು. ಅವರ ರಾಜಕೀಯ ನಡೆ ಕುರಿತು ಭಿನ್ನಾಭಿಪ್ರಾಯಗಳಿರಬಹುದು. ಆದರೆ ದೇಶಕ್ಕಾಗಿ ಅವರು ಮಾಡಿದ ತ್ಯಾಗ ಮತ್ತು ಅಭಿವೃದ್ಧಿಯನ್ನು ಅಲ್ಲಗಳೆಯುವಂತೆ ಎಂದು ತಿಳಿಸಿದೆ.


    ರಾಜೀವ್​ ಗಾಂಧಿ ಅವರ ಹೆಸರಿಗೆ ಅಪಮಾನ ಮಾಡದಂತೆ ಮೇಜರ್​ ಧ್ಯಾನ್​ ಚಂದ್​ ಅವರ ಹೆಸರಿಗೆ ಗೌರವ ಸಲ್ಲಿಸಬಹುದಿತ್ತು. ಆದರೆ, ದೇಶ ಅಂತಹ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಕಳೆದುಕೊಂಡಿದೆ. ಸ್ವರ್ಗದಲ್ಲಿರುವ ಧ್ಯಾನ್​ ಚಂದ್​ ಅವರಿಗೂ ಈ ನಡೆ ಬೇಸರ ತರಿಸಿದೆ.


    ಇದನ್ನು ಓದಿ: ಎಸ್​ಎಸ್​​ಎಲ್​ಸಿ ಫಲಿತಾಂಶ ಪ್ರಕಟ: ರಿಸಲ್ಟ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ


    ಮೋದಿ ಸರ್ಕಾರ ಹೆಸರು ಮರು ನಾಮಕರಣ ಮಾಡಿದ ಮಾತ್ರಕ್ಕೆ ಈ ಹಿಂದಿನ ಸರ್ಕಾರಗಳು ಧ್ಯಾನ್​ ಚಂದ್​ ಅವರನ್ನು ಮರೆತಿದ್ದವು ಎಂದಲ್ಲ ಎಂದು ಕೂಡ ತೀಕ್ಷ್ಣವಾಗಿ ಟೀಕಿಸಿದೆ.
    ದೇಶಕ್ಕಾಗಿ ಮಹಾ ತ್ಯಾಗ ಮಾಡಿದ ರಾಜೀವ್​ ಗಾಂಧಿ ಹೆಸರು ಬದಲಾವಣೆ ಮಾಡಿರುವುದು ರಾಜಕೀಯ ದ್ವೇಷದಿಂದ ಎಂದು ಇದೇ ವೇಳೆ ಆರೋಪಿಸಿದೆ.


    ರಾಜೀವ್​ ಗಾಂಧಿ ಎಂದಾದರೂ ಹಾಕಿ ಸ್ಟೀಕ್​ ಹಿಡಿದಿದ್ದರಾ ಎಂದು ಬಿಜೆಪಿ ನಾಯಕರು ಪ್ರಶ್ನಿಸಿಸಿರುವುದು ಒಪ್ಪಿಕೊಳ್ಳುವ ವಿಷಯ. ಇದೇ ವೇಳೆ ಈ ಹಿಂದೆ ಇದ್ದ ಸರ್ದರ್​ ಪಟೇಲ್​ ಹೆಸರನ್ನು ಬದಲಾಯಿಸಿ ಅಹ್ಮದಾಬಾದ್​ ಕ್ರಿಕೆಟ್​ ಸ್ಟೇಡಿಯಂಗೆ ನರೇಂದ್ರ ಮೋದಿ ಹೆಸರು ಮರು ನಾಮಕರಿಸಿದ ಕುರಿತು ಜನರು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಇದೇ ಪ್ರಶ್ನೆ ಫೀರಜ್​ ಶಾ ಕೋಟ್ಲಾ ಮೈದಾನದ ಹೆಸರನ್ನು ಬದಲಾಯಿಸಿ ಅರುಣ್​ ಜೇಟ್ಲಿ ಎಂದು ಮರು ನಾಮಕರಿಸಿದ ಕುರಿತು ಏಳುತ್ತಿದೆ.


    ಮೋದಿ ಸರ್ಕಾರ ಟೋಕಿಯೋ ಒಲಂಪಿಕ್​ನಲ್ಲಿ ಭಾರತದ ಗೆಲುವಿನ ಕುರಿತು ಹರ್ಷ ವ್ಯಕ್ತಪಡಿಸುತ್ತಿದೆ. ಆದರೆ ಮೋದಿ ಸರ್ಕಾರ ಕ್ರೀಡಾ ಬಜೆಟ್​ ಅನ್ನು 300 ಕೋಟಿ ಕಡಿಮೆ ಗೊಳಿಸಿದೆ. ಸಹಾರಾ ಗ್ರೂಪ್ ಪುರುಷರು ಮತ್ತು ಮಹಿಳೆಯರ ಹಾಕಿ ತಂಡಗಳ ಪ್ರಾಯೋಜಕತ್ವವನ್ನು ಹಿಂತೆಗೆದುಕೊಂಡಿತು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಪೋಷಕತ್ವವನ್ನು ಸ್ವೀಕರಿಸಿದರು. ಆದ ಕಾರಣ ಒಲಂಪಿಕ್​ನಲ್ಲಿ ಹಾಕಿ ತಂಡ ಗೆಲುವಿನಷ್ಟೇ ಒಡಿಶಾ ಸರ್ಕಾರದ ಕೊಡಗೆ ಮುಖ್ಯವಾಗಿದೆ.


    ಖಾಶಬ ಜಾಧವ್ ದೇಶಕ್ಕೆ ಮೊದಲ ಬಾರಿ ವೈಯಕ್ತಿಕ ಒಲಿಂಪಿಕ್​ನಲ್ಲಿ ಕಂಚಿನ  ಪದಕ  ಗೆದ್ದಾಗ, ಅವರ ಹೆಸರಿನಲ್ಲಿ ಯಾಕೆ ಯಾರು ಖೇಲ್ ರತ್ನ ಪ್ರಶಸ್ತಿ ಸ್ಥಾಪಿಸಲು ಯೋಚಿಸಲಿಲ್ಲ ಎಂದು ಇದೇ ವೇಳೆ ಸೇನೆ ಪ್ರಶ್ನಿಸಿದೆ.

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು