ಎರಡನೇ ಅಲೆ ಸೋಂಕಿಗೆ ತುತ್ತಾಗಿರುವ ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಮುಂದುವರೆದಿದೆ. ಅದರಲ್ಲಿಯೂ ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಗಳಲ್ಲಿ ವೈದ್ಯಕೀಯ ಬಿಕ್ಕಟ್ಟು ಎದುರಾಗಿದೆ. ಬೆಡ್, ಆಕ್ಸಿಜನ್ ಹಾಗೂ ಔಷಧಗಳ ಕೊರತೆಯಿಂದಾಗಿ ಸೋಂಕಿತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ರಿಲಾಯನ್ಸ್ ಫೌಂಡೇಶನ್ ಸೋಂಕಿತರ ನೆರವಿಗೆ ಆಗಮಿಸಿದೆ. ಇದೇ ಹಿನ್ನಲೆ ಮುಂಬೈನಲ್ಲಿ ಕೋವಿಡ್ ಸೋಂಕಿತರಿಗಾಗಿ 875 ಬೆಡ್ ವ್ಯವಸ್ಥೆ ಮಾಡಿದೆ. ಈ ಮೂಲಕ ಬೆಡ್ ಸಿಗದೇ ಪರದಾಡುತ್ತಿರುವವರಿಗೆ ಆಸರೆಯಾಗಿದೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರ ಮತ್ತು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಜೊತೆಗೆ ರಿಲಯನ್ಸ್ ಮಹತ್ವದ ಹೆಜ್ಜೆ ಇರಿಸಿದೆ.
ಸರ್ ಎಚ್ಎಬ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ
ರಿಲಯನ್ಸ್ ಪೌಂಡೇಶನ್ 100 ತೀವ್ರ ನಿಗಾ ಘಟಕ ಬೆಡ್ ವ್ಯವಸ್ಥೆ ಮಾಡಿದ್ದು, ಇದು ಮೇ 15ರಿಂದ ಹಂತ ಹಂತವಾಗಿ ಕಾರ್ಯರೂಪಕ್ಕೆ ಬರಲಿದೆ. ಸರ್ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮೇ 1 ರಿಂದಕಾರ್ಯ ನಿರ್ವಹಣೆ ಮಾಡಲಿದ್ದು, ಪ್ರಸ್ತುತ550 ಬೆಡ್ಗಳಿವೆ. ಈ ಆಸ್ಪತ್ರೆ 650 ಬೆಡ್ ಹೊಂದಲಿದ್ದು, ಕೋವಿಡ್ ರೋಗಿಗಳ ಚಿಕಿತ್ಸೆಗೆ ಕಾರ್ಯ ನಿರ್ವಹಿಸಲಿದೆ. 500ಕ್ಕೂ ಹೆಚ್ಚು ಮುಂಚೂಣಿ ಆರೋಗ್ಯ ಕಾರ್ಯಕರ್ತರಾದ ವೈದ್ಯರು, ನರ್ಸ್ಗಳು ವೈದ್ಯಯೇತರ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. 650 ಬೆಡ್ಗಳ ಈ ಆಸ್ಪತ್ರೆಯ ವೆಚ್ಚವನ್ನು ರಿಲಯನ್ಸ್ ಫೌಂಡೇಶನ್ ನಿರ್ವಹಿಸಲಿದೆ, ಎನ್ಎಸ್ಸಿಐ ಮತ್ತು ಸೆವೆನ್ ಹಿಲ್ಸ್ ಆಸ್ಪತ್ರೆಯ ಎಲ್ಲಾ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ದಿ ಟ್ರೈಡೆಂಟ್ ಹೋಟೆಲ್ನಲ್ಲಿ ಚಿಕಿತ್ಸೆಗಾಗಿ 100 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಕೋವಿಡ್ ಸೋಂಕಿನ ಸಾಧಾರಣ ಲಕ್ಷಣ ಹಾಗೂ ಲಕ್ಷಣ ರಹಿತ ರೋಗಿಗಳಿಗೆ ಮಾರ್ಗಸೂಚಿ ಅನುಸಾರವಾಗಿ ಚಿಕಿತ್ಸೆ ನಡೆಸಲಾಗುವುದು. ಸ್ಟೆಪ್ಡೌನ್ ವ್ಯವಸ್ಥೆಯನ್ನು ಸರ್ ಎನ್ಎನ್ ರಿಲಯನ್ಸ್ ಫೌಂಡೇಶನ್ ನಿರ್ವಹಿಸಲಿದೆ.
ಈ ವ್ಯವಸ್ಥೆಗಳ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ, ಪ್ರವಾಸೋದ್ಯಮ ಮತ್ತು ಪರಿಸರ ಅಧಿಕಾರಿಗಳೊಂದಿಗೆ ರಿಲಾಯನ್ಸ್ ಪೌಂಡೇಶನ್ ಮತ್ತು ಎಚ್ಎನ್ ರಿಲಯನ್ಸ್ ಫೌಂಡೇಶನ್ ಸಭೆಯಲ್ಲಿ ತೀರ್ಮಾನಿಸಿದೆ. ಈ ಮೂಲಕ ರಿಲಯನಸ್ ಕೋವಿಡ್ ಬಿಕ್ಕಟ್ಟಿನ ಈ ಪರಿಸ್ಥಿತಿಯಲ್ಲಿ ಸಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದೆ.
ಇನ್ನು ಈ ಕುರಿತು ಮಾತನಾಡಿರುವ ರಿಲಯನ್ಸ್ ಪೌಂಡೇಶನ್ ಸಂಸ್ಥಾಪಕರೂ, ಮುಖ್ಯಸ್ಥರಾದ ನೀತಾ ಅಂಬಾನಿ, ರಿಲಯನ್ಸ್ ದೇಶ ಸೇವೆಗಾಗಿ ಸಾದಾ ಮುಂಚೂಣಿಯಲ್ಲಿದೆ. ಸೋಂಕಿನ ಬಿಕ್ಕಟ್ಟಿನ ಇಂತಹ ಸಂದರ್ಭದಲ್ಲಿ ದೇಶದ ಜೊತೆ ನಿಲ್ಲುವುದು ಅಗತ್ಯವಾಗಿದೆ. ಸರ್ ಎಚ್ಎನ್ ರಿಲಯನ್ಸ್ ಫೌಂಡೆಶನ್ ಮುಂಬೈನಲ್ಲಿ 875 ಬೆಡ್ಗಳ ಮೂಲಕ ಕಾರ್ಯನಿರ್ವಹಿಸಲಿದೆ. ನಾವು ಈಗಾಗಲೇ ಮಹಾರಾಷ್ಟ್ರ, ಗುಜರಾತ್, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಡಿಯೂ, ಡಮನ್ ಮತ್ತು ನಗರ್ ಹವೇಲಿಗೆ ಉಚಿತವಾಗಿ ಆಕ್ಸಿಜನ್ ಪೂರೈಸುತ್ತಿದ್ದೇವೆ. ಇದನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ. ಈ ಮೂಲಕ ಜನರ ಸೇವೆಗೆ ಏನೂ ಬೇಕಾದರೂ ನೀವು ಬದ್ಧತೆಯನ್ನು ನಿರ್ವಹಿಸಿದ್ದೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ