• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Rajinikanth: ನಾನು ರಾಜಕೀಯಕ್ಕೆ ಬರಲೇಬೇಕೆಂಬ ನಿಮ್ಮ ಹೋರಾಟವನ್ನು ನಿಲ್ಲಿಸಿ; ಅಭಿಮಾನಿಗಳಲ್ಲಿ ರಜನೀಕಾಂತ್ ಒತ್ತಾಯ

Rajinikanth: ನಾನು ರಾಜಕೀಯಕ್ಕೆ ಬರಲೇಬೇಕೆಂಬ ನಿಮ್ಮ ಹೋರಾಟವನ್ನು ನಿಲ್ಲಿಸಿ; ಅಭಿಮಾನಿಗಳಲ್ಲಿ ರಜನೀಕಾಂತ್ ಒತ್ತಾಯ

ನಟ ರಜನೀಕಾಂತ್​.

ನಟ ರಜನೀಕಾಂತ್​.

ಕಳೆದ ತಿಂಗಳು ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ವಿವರಿಸಿದರೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಬಗ್ಗೆ ನನಗೆ ಬೇಸರ ಮತ್ತು ಚಿಂತೆ ಇದೆ ಎಂದು ನಟ ರಜನೀಕಾಂತ್ ಹೇಳಿದ್ದಾರೆ.

  • Share this:

ಚೆನ್ನೈ (ಜನವರಿ 11); ನಟ ರಜನಿಕಾಂತ್​ ಡಿಸೆಂಬರ್​ 31 ರಂದು ತಾವು ತಮಿಳುನಾಡು ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಡುತ್ತೇನೆ, ಹೊಸ ಪಕ್ಷವೊಂದನ್ನು ಸ್ಥಾಪಿಸುತ್ತೇನೆ ಎಂದು ತಮ್ಮ ಅಭಿಮಾನಿಗಳಿಗೆ ಹಲವು ದಿನಗಳ ಹಿಂದೆಯೇ ಆಶ್ವಾಸನೆ ನೀಡಿದ್ದರು. ಆದರೆ, ಡಿಸೆಂಬರ್​ ಕೊನೆ ವಾರದಲ್ಲಿ ತಾವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ರಾಜಕೀಯಕ್ಕೆ ಧುಮುಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಸಂಬಂಧ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೋರಿ ಪತ್ರವೊಂದನ್ನು ಬರೆದು ಅದನ್ನು ಟ್ವೀಟ್​ ಸಹ ಮಾಡಿದ್ದರು. ಆದರೆ, ನಟ ರಜನೀಕಾಂತ್ ಅವರ ತೀರ್ಮಾನದಿಂದ ಬೇಸತ್ತಿರುವ ಅವರ ಅಭಿಮಾನಿಗಳು, ರಜಿನಿ ಮಕ್ಕಳ್ ಮಂಡ್ರಮ್ ಸದಸ್ಯರು ಕಳೆದ ಮೂರು ವಾರಗಳಿಂದ ರಜನೀಕಾಂತ್​ ರಾಜಕೀಯಕ್ಕೆ ಪ್ರವೇಶಿಸಲೇಬೇಕು ಎಂದು ಎಲ್ಲೆಡೆ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಇಂದು ಮತ್ತೆ ಟ್ವೀಟ್ ಮಾಡಿರುವ ರಜನೀಕಾಂತ್​, "ನಾನು ಮತ್ತೆ ರಾಜಕೀಯಕ್ಕೆ ಪ್ರವೇಶಿಸುವ ಆಸಕ್ತಿ ಹೊಂದಿಲ್ಲ. ದಯವಿಟ್ಟು ಅಭಿಮಾನಿಗಳು ನನ್ನ ಮೇಲೆ ಒತ್ತಡ ಹೇರಬೇಡಿ" ಎಂದು ಮನವಿ ಮಾಡಿದ್ದಾರೆ. 


"ಪ್ರತಿಭಟನೆಯಲ್ಲಿ ಭಾಗವಹಿಸದಿದ್ದಕ್ಕಾಗಿ ನನ್ನ ಅಭಿಮಾನಿಗಳು, ರಜಿನಿ ಮಕ್ಕಳ್ ಮಂಡ್ರಮ್ ಸದಸ್ಯರನ್ನು ನಾನು ಪ್ರಶಂಸಿಸುತ್ತೇನೆ. ಆದರೆ, ಕಳೆದ ತಿಂಗಳು ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ವಿವರಿಸಿದರೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಬಗ್ಗೆ ನನಗೆ ಬೇಸರ ಮತ್ತು ಚಿಂತೆ ಇದೆ" ಎಂದು ರಜನಿಕಾಂತ್ ಹೇಳಿದ್ದಾರೆ.



ಹೋರಾಟದ ಕುರಿತು ಅಭಿಮಾನಿಗಳಿಗೆ ಸುದೀರ್ಘ ಪತ್ರಬರೆದಿರುವ ರಜನೀಕಾಂತ್​, "ರಾಜಕೀಯಕ್ಕೆ ಮತ್ತೆ ಪ್ರವೇಶಿಸಿ ಎಂದು ಕೇಳುವ ಮೂಲಕ ನನ್ನ ಅಭಿಮಾನಿ ಸಂಘದ ಸದಸ್ಯರು ನನಗೆ ನೋವುಂಟು ಮಾಡುತ್ತಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸದಿರುವ ಕಾರಣಗಳನ್ನು ನಾನು ಈಗಾಗಲೇ ವಿವರವಾಗಿ ವಿವರಿಸಿದ್ದೇನೆ. ಕನಿಷ್ಠ ಇದರ ನಂತರ ಯಾರೂ ರಾಜಕೀಯಕ್ಕೆ ಪ್ರವೇಶಿಸಲು ನನ್ನ ಮೇಲೆ ಒತ್ತಡ ಹೇರಬಾರದು. ಯಾರೂ ಈ ರೀತಿ ಪ್ರತಿಭಟಿಸಬಾರದು. ಏಕೆಂದರೆ ಅದು ನನಗೆ ಹೆಚ್ಚು ನೋವುಂಟು ಮಾಡುತ್ತದೆ" ಎಂದು ತಿಳಿಸದ್ದಾರೆ.


ಇದನ್ನೂ ಓದಿ: ಕೃಷಿ ಕಾಯ್ದೆ ಸ್ಥಗಿತಗೊಳಿಸುತ್ತೀರೋ, ನಾವೇ ಕ್ರಮ ತೆಗೆದುಕೊಳ್ಳಲೋ? ಕೇಂದ್ರಕ್ಕೆ ಸುಪ್ರೀಂ ಚಾಟಿ


ನಟ ರಜನೀಕಾಂತ್​ ರಾಜಕೀಯಕ್ಕೆ ಪ್ರವೇಶಿಸದ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ನೂರಾರು ರಜನೀಕಾಂತ್ ಅಭಿಮಾನಿಗಳು ಭಾನುವಾರ ಚೆನ್ನೈನ ವಲ್ಲುವರ್ ಕೊಟ್ಟಂನಲ್ಲಿ ನೆರೆದಿದ್ದರು. ಆದರೆ, ಇದರಿಂದ ರಜನಿಗೆ ಸಾಕಷ್ಟು ನೋವಾಗಿದೆ ಎಂದು ತಿಳಿದುಬಂದಿದೆ.


ಡಿಸೆಂಬರ್ 29 ರಂದು ರಜಿನಿ ರಾಜಕೀಯ ಪ್ರವೇಶಿಸದ ಕಾರಣಗಳನ್ನು ವಿವರಿಸುವ 3 ಪುಟಗಳ ಹೇಳಿಕೆಯೊಂದಿಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಘಟನೆ ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ರಕ್ತದೊತ್ತಡದ ಕಾರಣಕ್ಕಾಗಿ ಹೈದರ್‌ಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ನಂತರ ರಜನಿ ಇಂತಹ ನಿರ್ಧಾರಕ್ಕೆ ಮುಂದಾಗಿದ್ದರು.

First published: