ಕೋಲ್ಕತ್ತ; ತೃಣಮೂಲ ಕಾಂಗ್ರೆಸ್ ತೊರೆದ ಪಶ್ಚಿಮ ಬಂಗಾಳದ ಮಾಜಿ ಸಚಿವ ರಜಿಬ್ ಬ್ಯಾನರ್ಜಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿದ ಬಳಿಕ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇವರೊಂದಿಗೆ ನಾಲ್ಕು ಮಂದಿ ಟಿಎಂಸಿ ಮಾಜಿ ಮುಖಂಡರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ.
ಟಿಎಂಸಿ ಮಾಜಿ ಮುಖಂಡರಾದ ರಜಿಬ್ ಬ್ಯಾನರ್ಜಿ, ಬೈಶಾಲಿ ದಾಲ್ಮಿಯಾ, ಪ್ರಬೀರ್ ಘೋಷಾಲ್, ರಥಿನ್ ಚಕ್ರಬೊರ್ಥಿ ಹಾಗೂ ರುದ್ರನಿಲ್ ಘೋಷ್ ಶನಿವಾರ ಬಿಜೆಪಿ ಸೇರ್ಪಡೆಯಾದರು. ಸೋನಾರ್ ಬಾಂಗ್ಲಾಗಾಗಿ ಬಿಜೆಪಿಯ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ರಜಿಬ್ ಬ್ಯಾನರ್ಜಿ, ಬೈಶಾಲಿ ದಾಲ್ಮಿಯಾ, ಪ್ರಬೀರ್ ಘೋಷಾಲ್, ರಥಿನ್ ಚಕ್ರಬೊರ್ಥಿ ಹಾಗೂ ಪಾರ್ಥಸಾರಥಿ ಚಟರ್ಜಿ ಅವರು ಬಿಜೆಪಿಯ ಮುಕುಲ್ ರಾಯ್ ಮತ್ತು ಕೈಲಾಶ್ ವಿಜಯ್ ವಾರ್ಗಿಯಾ ಅವರೊಂದಿಗೆ ಶನಿವಾರ ರಾತ್ರಿ ದೆಹಲಿಗೆ ತೆರಲಿ ಅಮಿತ್ ಶಾ ಅವರನ್ನು ಭೇಟಿಯಾದರು.
Former TMC leaders Mr. Rajib Banerjee, Ms. Baishali Dalmiya, Mr. Prabir Ghoshal, Mr. Rathin Chakraborti and Mr. Rudranil Ghosh joined BJP today in New Delhi. I am sure their induction will further strengthen BJP’s fight for Sonar Bangla. pic.twitter.com/twXrHXWCbY
— Amit Shah (@AmitShah) January 30, 2021
ಇದನ್ನು ಓದಿ: Mamata Banerjee: ಬಂಗಾಳದಲ್ಲಿ ಮುಗಿಯದ ಪಕ್ಷಾಂತರ ಪರ್ವ; ಟಿಎಂಸಿ ಪಕ್ಷದ ಓರ್ವ ಸಚಿವ ಸೇರಿ 4 ಜನ ಶಾಸಕರು ಬಿಜೆಪಿ ಕಡೆಗೆ!
ಯಾವುದೇ ರಾಜ್ಯ ಕೇಂದ್ರ ಸರ್ಕಾರದ ಬೆಂಬಲ ಇಲ್ಲದೆ ಅಭಿವೃದ್ಧಿ ಹೊಂದುವುದು ಅಸಾಧ್ಯ. ಪಶ್ಚಿಮ ಬಂಗಾಳದ ಅಭಿವೃದ್ಧಿಗೂ ಸಹ ಕೇಂದ್ರ ಸರ್ಕಾರದ ಬೆಂಬಲ ಬೇಕು ಎಂದು ರಜಿಬ್ ಬ್ಯಾನರ್ಜಿ ಅವರು ಬಿಜೆಪಿ ಸೇರ್ಪಡೆಗೊಂಡ ಬಳಿಕ ದೆಹಲಿಯಲ್ಲಿ ಹೇಳಿದರು.
ನಾನು ಅಮಿತ್ ಶಾ ಅವರೊಂದಿಗೆ ಎರಡು ವಿಷಯಗಳನ್ನು ಹೇಳಿದ್ದೇನೆ. ಒಂದು ಬಿಜೆಪಿ ಅಧಿಕಾರಕ್ಕೆ ಬರುವುದು ಮತ್ತು ಕಾನೂನು ಸುವ್ಯವಸ್ಥೆ ಸುಧಾರಿಸುವುದು. ಮತ್ತು ಬಂಗಾಳದ ಯುವ ಸಮುದಾಯಕ್ಕೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕೈಗಾರಿಕರಣಕ್ಕೆ ಕೇಂದ್ರದಿಂದ ಬಂಗಾಳಕ್ಕೆ ವಿಶೇಷ ಅನುದಾನ ಘೋಷಿಸಬೇಕು ಎಂದು ರಜಿಬ್ ಬ್ಯಾನರ್ಜಿ ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ