• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Udaipur Murder: ವ್ಯಕ್ತಿಯ ಶಿರಚ್ಛೇದನ, ಪ್ರಧಾನಿ ಮೋದಿಗೆ ಬೆದರಿಕೆ; ನೂಪುರ್ ಶರ್ಮಾ ಪರ ಪೋಸ್ಟ್​ಗೆ ಹಾಡಹಗಲೆ ಮರ್ಡರ್

Udaipur Murder: ವ್ಯಕ್ತಿಯ ಶಿರಚ್ಛೇದನ, ಪ್ರಧಾನಿ ಮೋದಿಗೆ ಬೆದರಿಕೆ; ನೂಪುರ್ ಶರ್ಮಾ ಪರ ಪೋಸ್ಟ್​ಗೆ ಹಾಡಹಗಲೆ ಮರ್ಡರ್

ನೂಪುರ್ ಶರ್ಮಾ

ನೂಪುರ್ ಶರ್ಮಾ

ವೀಡಿಯೋ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಭೀಕರ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್‌ಸಮಂದ್‌ನ ಹೆದ್ದಾರಿಯೊಂದರ ಬಳಿ ಅವರನ್ನು ಬಂಧಿಸಲಾಗಿದೆ.

  • Share this:

    ರಾಜಸ್ಥಾನ: ಉದಯ್​ಪುರದಲ್ಲಿ ಭೀಕರ ಹತ್ಯೆಯೊಂದು ನಡೆದಿದೆ. ಅಮಾನತುಗೊಂಡಿರುವ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಇಂದು ಉದಯ್‌ಪುರದ (Udaipur) ಮಾಲ್ದಾಸ್ ಪ್ರದೇಶದಲ್ಲಿ ಟೇಲರ್ ಓರ್ವನ ಶಿರಚ್ಛೇದ ಮಾಡಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಗೈ ಬೆದರಿಕೆ ಹಾಕಿದ್ದಾರೆ. ಉದಯಪುರ ಬಸ್ ನಿಲ್ದಾಣದ ಬಳಿ ನಡೆದ ಸಂಪೂರ್ಣ ಘಟನೆಯನ್ನು ಇಬ್ಬರು ದಾಳಿಕೋರರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ (Prophet Mohammed) ಕುರಿತು ಅವರು ಮಾಡಿದ ಹೇಳಿಕೆಗಳು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿದ್ದವು. 


    ವೀಡಿಯೋ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಭೀಕರ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್‌ಸಮಂದ್‌ನ ಹೆದ್ದಾರಿಯೊಂದರ ಬಳಿ ಅವರನ್ನು ಬಂಧಿಸಲಾಗಿದೆ. ಭೀಕರವಾಗಿ ಕೊಲೆಗೀಡಾದವರನ್ನು ಕನ್ನಯ್ಯ ಲಾಲ್ ಎಂದು ಗುರುತಿಸಲಾಗಿದೆ.


    ಅವರು ಚಿತ್ರೀಕರಿಸಿದ ವೀಡಿಯೊದಲ್ಲಿ  ಕನ್ಹಯ್ಯ ಲಾಲ್ ದಾಳಿಗೆ ಒಳಗಾಗುವ ಮೊದಲು ಒಬ್ಬ ವ್ಯಕ್ತಿಯನ್ನು ಬಟ್ಟೆಗಾಗಿ ಅಳೆಯುವುದನ್ನು ತೋರಿಸಲಾಗಿದೆ. ಕೊಲೆಗಾರರು ನಂತರ ಕ್ಯಾಮರಾದಲ್ಲಿ ಕೊಲೆಯ ಬಗ್ಗೆ ಸಂತೋಷಪಟ್ಟರು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಿದ್ದಾರೆ.


    ಪ್ರವಾದಿ ಮೊಹಮ್ಮದ್ ಕುರಿತು ಪ್ರಚೋದನಕಾರಿ ಹೇಳಿಕೆಗಳಿಂದ ಭಾರತದಲ್ಲಿ ಭಾರೀ ವಿವಾದ ಮತ್ತು ಪ್ರತಿಭಟನೆಯನ್ನು ಹುಟ್ಟುಹಾಕಿದ ಮಾಜಿ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರಿಗೆ ಕನ್ಹಯ್ಯಾ ಲಾಲ್ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲ ವ್ಯಕ್ತಪಡಿಸಿದ್ದರು.


    ಇದನ್ನೂ ಓದಿ: Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?


    ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ನಿರ್ದೇಶಕರಾದ ಹಿರಿಯ ಪೊಲೀಸ್ ಅಧಿಕಾರಿ ಹವಾಸಿಂಗ್ ಘುಮಾರಿಯಾ ಅವರು ಈ ಭೀಕರ ಕೊಲೆಯನ್ನು ವೀಡಿಯೊವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಕೇಳಿಕೊಂಡಿದ್ದಾರೆ.  ಇದು ವೀಕ್ಷಿಸಲು ತುಂಬಾ ಭಯಾನಕವಾಗಿದೆ. ನನ್ನ ಸಲಹೆಯೆಂದರೆ ದಯವಿಟ್ಟು ವೀಡಿಯೊವನ್ನು ನೋಡಬೇಡಿ" ಎಂದು ಅಧಿಕಾರಿ ವಿನಂತಿ ಮಾಡಿದ್ದಾರೆ.


    ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿದ್ದೇನು?
    ಕೆಲ ದಿನಗಳ ಹಿಂದಷ್ಟೇ ಪ್ರವಾದಿ ಮಹಮ್ಮದ್ ಬಗ್ಗೆ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆಯಿಂದ ಭಾರೀ ವಿವಾದವೇ ಉಂಟಾಗಿತ್ತು.


    ವಿದೇಶಗಳಲ್ಲೂ ಭಾರೀ ವಿರೋಧ
    ನೂಪುರ್ ಶರ್ಮಾ ಹೇಳಿಕೆ ವಿರುದ್ಧ ಮುಸ್ಲಿಂ ರಾಷ್ಟ್ರಗಳು ತಿರುಗಿ ಬಿದ್ದಿದ್ದವು. ಸೌದಿ ಅರೇಬಿಯಾ, ಬಹರೈನ್‌, ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ಇಂಡೊನೇಷ್ಯಾ, ಜೋರ್ಡನ್‌ ಮತ್ತು ಅಫ್ಗಾನಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವು.


    ಭಾರತದ ವಸ್ತುಗಳಿಗೆ ಬಹಿಷ್ಕಾರ
    ಈ ಬಗ್ಗೆ ಭಾರತ ಕ್ಷಮೆಯಾಚಿಸಬೇಕು ಅಂತ ಮುಸ್ಲಿಂ ರಾಷ್ಟ್ರಗಳು ಪಟ್ಟು ಹಿಡಿದಿದ್ದವು. ಇಸ್ಲಾಂ ಧರ್ಮದ ಸಂಕೇತದ ವಿರುದ್ಧದ ಪೂರ್ವಗ್ರಹವನ್ನು ಶಾಶ್ವತವಾಗಿ ತಿರಸ್ಕರಿಸಲಾಗುವುದು. ಯಾವುದೇ ಧರ್ಮದ ವ್ಯಕ್ತಿ ಮತ್ತು ಸಂಕೇತಗಳ ವಿರುದ್ಧ ಪೂರ್ವಗ್ರಹ ಮೂಡಿಸುವ ಯಾವುದೇ ಕೃತ್ಯವನ್ನು ಶಾಶ್ವತವಾಗಿ ತಿರಸ್ಕರಿಸಲಾಗುವುದು ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯವು ಹೇಳಿತ್ತು.


    ಇದನ್ನೂ ಓದಿ: Assam Flood: 134 ಜನರನ್ನು ಸಾಯಿಸಿದ ಅಸ್ಸಾಂ ಪ್ರವಾಹದ ಭೀಕರ ಫೋಟೊಗಳನ್ನು ನೋಡಿ


    ಕ್ಷಮೆ ಕೇಳಿದ್ದ ನೂಪುರ್ ಶರ್ಮಾ
    ಇಷ್ಟೆಲ್ಲಾ ವಿವಾದವಾಗುತ್ತಿದ್ದಂತೆ ನೂಪುರ್ ಶರ್ಮಾ ಕ್ಷಮೆ ಕೇಳಿದ್ದಾರೆ. ನಾನು ನನ್ನ ಹೇಳಿಕೆ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ಆದರೆ ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸೂಕ್ತ ಭದ್ರತೆ ಒದಗಿಸಿ ಅಂತ ಮನವಿ ಮಾಡಿದ್ದರು.

    Published by:guruganesh bhat
    First published: