• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Farm bills: ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧಾರಿಸಿದ ಪಂಜಾಬ್ ಸಿಎಂ

Farm bills: ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧಾರಿಸಿದ ಪಂಜಾಬ್ ಸಿಎಂ

ಪ್ರತಿಭಟನೆಯಲ್ಲಿ ನಿರತರಾದ ಪಂಜಾಬ್​ ಸಿಎಂ

ಪ್ರತಿಭಟನೆಯಲ್ಲಿ ನಿರತರಾದ ಪಂಜಾಬ್​ ಸಿಎಂ

ರೈತರ ಪ್ರತಿಭಟನೆಯ ಸಂಪೂರ್ಣ ಲಾಭಾವನ್ನು ಪಾಕಿಸ್ತಾನದ ಐಎಸ್​ಐ ಸಂಘಟನೆ ಪಡೆಯಬಹುದು. ಪ್ರತಿಭಟನಾನಿರತ ರೈತರಿಗೆ ಬೆದರಿಕೆ ಒಡ್ಡುವ ಮೂಲಕ ಅವರನ್ನು ಸುಲಭವಾಗಿ ಗುರಿಯಾಗಿಸಿಕೊಳ್ಳಬಹುದು.

  • Share this:

    ಪಂಜಾಬ್​ (ಸೆ.28):  ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಮಸೂದೆ ವಿರೋಧಿಸಿ ದೇಶಾದ್ಯಾಂತ ಪ್ರತಿಭಟನೆ ಕೂಗು ಕೇಳಿ ಬರುತ್ತಿದೆ. ಕರ್ನಾಟಕ, ಪಂಜಾಬ್​, ಹರಿಯಾಣ ಸೇರಿದಂತೆ ಅನೇಕ ರಾಜ್ಯದ ರೈತರು ರಾಜ್ಯ ಬಂದ್​ ನಡೆಸಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಸೂದೆಗೆ ಮೊದಲಿನಿಂದಲೂ ಆಕ್ರೋಶವ್ಯಕ್ತಪಡಿಸಿರುವ ಶಿರೋಮಣಿ ಅಕಾಲಿದಳದ ಸಚಿವೆ ಹರ್ಸಿಮ್ರತ್​ ಕೌರ್​ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಪಕ್ಷ  ಬಿಜೆಪಿ ಸಖ್ಯ ತೊರೆಯುವುದರ ಜೊತೆ ಎನ್​ಡಿಎ ಮೈತ್ರಿಯಿಂದ ಹೊರಬಂದಿದೆ. ಈಗ ಈ ಮಸೂದೆ  ವಿರುದ್ಧ ಸುಪ್ರೀಂಕೋರ್ಟ್​ಗೆ ಹೋಗಲು ನಿರ್ಧರಿಸಿದೆ. ಈ ಕುರಿತು ಮಾತನಾಡಿರುವ ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​, ಈ ಮಸೂದೆ ರೈತ ವಿರೋಧಿಯಾಗಿದ್ದು, ಇದನ್ನು ಕಾನೂನಾಗಿ ಜಾರಿಗೆ ತರುವ ಯಾವ ಅಧಿಕಾರ ಕೂಡ ಕೇಂದ್ರ ಸರ್ಕಾರಕ್ಕಿಲ್ಲ. ಇದು ರಾಜ್ಯದ ರೈತರಿಗೆ ಸಂಬಂಧಪಟ್ಟ ವಿಷಯವಾಗಿದೆ. ಈ ಹಿನ್ನಲೆ ಈ ಮಸೂದೆ ವಿರೋಧಿಸಿ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ ಎಂದರು.


    ಪಂಜಾಬ್​ನಲ್ಲಿ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ರೈತರು  ಸೇರಿದಂತೆ ರಾಜ್ಯ ಸರ್ಕಾರ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಮಹತ್ತರ ಆರೋಪ ಮಾಡಿರುವ ಪಂಜಾಬ್​ ಸಿಎಂ, ಈ ಪ್ರತಿಭಟನೆಯ ಸಂಪೂರ್ಣ ಲಾಭಾವನ್ನು ಪಾಕಿಸ್ತಾನದ ಐಎಸ್​ಐ ಸಂಘಟನೆ ಪಡೆಯಬಹುದು. ಪ್ರತಿಭಟನಾನಿರತ ರೈತರಿಗೆ ಬೆದರಿಕೆ ಒಡ್ಡುವ ಮೂಲಕ ಅವರನ್ನು ಸುಲಭವಾಗಿ ಗುರಿಯಾಗಿಸಿಕೊಳ್ಳಬಹುದು ಎಂಬ ಆತಂಕ ಹೊರಹಾಕಿದ್ದಾರೆ.


    ಕೇಂದ್ರ ಸರ್ಕಾರಕ್ಕೆ ಕೃಷಿ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ, ಇದರಿಂದಲೇ ಅವರಿಗೆ ರೈತರು ಯಾಕೆ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಪಂಜಾಬ್​ನ ಬಡ ರೈತರು ದೇಶವನ್ನು ಸಲಹು ಕಾರ್ಯ ಮಾಡುತ್ತಿದ್ದಾರೆ. ರೈತರ ಬದಲು ಕೇಂದ್ರ ಎಲ್ಲರಿಗೂ ಅನ್ನ ನೀಡಲು ಸಾಧ್ಯವೇ ಎಂದು ಇದೇ ವೇಳೆ ಪ್ರಶ್ನಿಸಿದರು.


    ಈ ಹೊಸ ಮಸೂದೆಯಿಂದಾಗಿ ರೈತರು, ತಮ್ಮ ಬೆಳೆಗಳಿಗೆ ಖಾತರಿ ಖರೀದಿ ಕಬೆಲೆಗಳನ್ನು ಕಳೆದುಕೊಳ್ಳುತ್ತಾರೆ. ಇದರ ಲಾಭಾ ಕಾರ್ಪೋರೇಟ್​ ಸಂಸ್ಥೆಗಳು ಪಡೆಯಲಿವೆ ಎಂದು ವಿಮರ್ಶಕರು ತಿಳಿಸುತ್ತಾರೆ. ಈ ಮಸೂದೆಗೆ ಬಹುತೇಕ ಎಲ್ಲಾ ವಿಪಕ್ಷಗಳು ಕೂಡ ದೇಶಾದ್ಯಂತ ವಿರೋಧ ವ್ಯಕ್ತಪಡಿಸಿದೆ ಎಂದರು.


    ಇದನ್ನು ಓದಿ: ರೈತರಿಗೆ ಅನ್ಯಾಯ ಆಗುವುದಿಲ್ಲ; ರೈತರ ದಾರಿ ತಪ್ಪಿಸದಿರಿ: ರೈತ ಸಂಘಟನೆಗಳಿಗೆ ಯಡಿಯೂರಪ್ಪ ಮನವಿ


    ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಎನ್​ಡಿಎ ತನ್ನ ಸಂಸದರಿಗೆ ವಿಪ್​ ಜಾರಿ ಮಾಡುವ ಮೂಲಕ ಮಸೂದೆಗೆ ಸಹಿ ಹಾಕುವಂತೆ ತಿಳಿಸಿದೆ. ಇದನ್ನು ವಿರೋಧಿಸಿ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಮಧ್ಯೆ ವಿಪಕ್ಷಗಳು ಮಸೂದೆಯನ್ನು ಚರ್ಚೆಗೆ ಹಿಂದಿರುಗಿಸುವಂತೆ ಕೋರಿಕೊಂಡರೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಮಸೂದೆಗೆ ಅನುಮತಿ ನೀಡಿದ್ದಾರೆ.


    ರಾಜ್ಯದಲ್ಲಿಯೂ ಇಂದು ಕೃಷಿ ಮಸೂದೆ ವಿರೋಧಿಸಿ ಬಂದ್​ಗೆ ಕರೆ ನೀಡಲಾಗಿದೆ. ರೈತರು ಕರೆ ನೀಡಿರುವ ಈ ಬಂದ್​ಗೆ ಕಾಂಗ್ರೆಸ್​ ಕೂಡ ಬೆಂಬಲ ನೀಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಮಾತನಾಡಿರುವ ರಾಜ್ಯ ಸಿಎಂ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ನಾವು ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ.  ಈ ತಿದ್ದುಪಡಿ ಕಾಯ್ದೆಗಳು ಐತಿಹಾಸಿಕ ಎನಿಸಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಹಳಷ್ಟು ಚರ್ಚೆ ಮಾಡಿದ ನಂತರ ತಿದ್ದುಪಡಿ ತರಲಾಗಿದೆ. ರೈತ ಸಂಘಟನೆಗಳು ಈ ಕಾಯ್ದೆಗಳನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    Published by:Seema R
    First published: