ಪಂಜಾಬ್ (ಅಕ್ಟೋಬರ್ 20); ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಮೂರು ರೈತ ಮಸೂದೆಗಳನ್ನು ಸಂಸತ್ನಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. ಆದರೆ, ಕೇಂದ್ರ ಸರ್ಕಾರದ ಈ ಮಸೂದೆಗಳ ವಿರುದ್ಧ ದೇಶದಾದ್ಯಂತ ದೊಡ್ಡ ಮಟ್ಟದ ರೈತ ಚಳುವಳಿಯೇ ನಡೆಯುತ್ತಿದೆ. ಇನ್ನೂ ಪಂಜಾಬ್ ರಾಜ್ಯದಲ್ಲೂ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟ ತಾರಕಕ್ಕೇರಿದೆ. ಈ ನಡುವೆ ಕೇಂದ್ರ ಸರ್ಕಾರದ ಮೂರೂ ಮಸೂದೆಗಳನ್ನು ಪಂಜಾಬ್ನಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಅಲ್ಲಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಒಂದು ಹೆಜ್ಜೆ ಮುಂದೆಹೋಗಿ ಪಂಜಾಬ್ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ಹೊಸ ಕೃಷಿ ಕಾನೂನುಗಳನ್ನು ತಿರಸ್ಕರಿಸುವ ನಿರ್ಣಯವನ್ನು ಮಂಡಿಸಿದೆ. ಕೇಂದ್ರದ ಕೃಷಿ ಕಾನೂನುಗಳು ರೈತರು ಮತ್ತು ಭೂಹೀನ ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸ್ಪಷ್ಟನೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, "ಕೃಷಿ ಸುಗ್ರೀವಾಜ್ಞೆಗಳು ಮತ್ತು ವಿದ್ಯುತ್ ಕಾಯ್ದೆಯ ತಿದ್ದುಪಡಿಗಳ ವಿರುದ್ಧದ ನಿರ್ಣಯವು ಮುಗಿದಿದೆ. ಮೂರು ಕೃಷಿ ಶಾಸನಗಳು ಮತ್ತು ಪ್ರಸ್ತಾವಿತ ವಿದ್ಯುತ್ (ತಿದ್ದುಪಡಿ) ಮಸೂದೆ, ರೈತರು ಮತ್ತು ಭೂಹೀನ ಕಾರ್ಮಿಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ" ಎಂದಿದ್ದಾರೆ.
On my way to Vidhan Sabha for one of the most important sessions in the history of Punjab. We have taken feedback of Farmer Unions, Officials and above all, Punjabis and it will be my endeavour today to ensure farmers are duly protected from the Anti-Farmers Laws of Central Govt. pic.twitter.com/x5PLr761as
— Capt.Amarinder Singh (@capt_amarinder) October 20, 2020
ಈ ತಿದ್ದುಪಡಿಗಳಿಗೆ ಭಾರತದ ರಾಷ್ಟ್ರಪತಿಗಳ ಒಪ್ಪಿಗೆಯ ಅಗತ್ಯವಿರುತ್ತದೆ. ಇದಕ್ಕೂ ಮೊದಲು, ಆಗಸ್ಟ್ 28 ರಂದು, ವಿಧಾನಸಭೆಯಲ್ಲಿ ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ತಿರಸ್ಕರಿಸುವ ನಿರ್ಣಯವನ್ನು ಅಂಗೀಕರಿಸಿತ್ತು.
ಮಸೂದೆಯ ಪ್ರತಿಗಾಗಿ ಎಎಪಿ ಹಟ
ವಿರೋಧ ಪಕ್ಷ ಎಎಪಿ ಮಸೂದೆಯ ಪ್ರತಿಗಳನ್ನು ನೀಡುವಂತೆ ಧರಣಿ ಮಾಡುತ್ತಿದೆ. ಸೋಮವಾರ ಮಧ್ಯಾಹ್ನ ಅಧಿವೇಶನವನ್ನು ಮುಂದೂಡಿದ ನಂತರವು ಎಎಪಿ ಶಾಸಕರು ತಮ್ಮ ಧರಣಿಯನ್ನು ಮುಂದುವರೆಸಿ, ಕೇಂದ್ರವು ಜಾರಿಗೆ ತಂದ ಶಾಸನವನ್ನು ಎದುರಿಸುವ ಮಸೂದೆಯ ಪ್ರತಿಗಳನ್ನು ಕೋರಿದ್ದರು.
ಪಂಜಾಬ್ ಹಣಕಾಸು ಮತ್ತು ಕಾರ್ಯಕಾರಿ ಸಂಸದೀಯ ವ್ಯವಹಾರಗಳ ಸಚಿವ ಮನ್ಪ್ರೀತ್ ಸಿಂಗ್ ಬಾದಲ್, ಹೊಸ ಕೃಷಿ ಕಾನೂನುಗಳನ್ನು ಎದುರಿಸಲು ರಾಜ್ಯ ಸರ್ಕಾರ ಸಾಂವಿಧಾನಿಕ ತಜ್ಞರೊಂದಿಗೆ ಸಮಾಲೋಚಿಸುತ್ತಿದೆ ಮತ್ತು ಅಧಿವೇಶನದಲ್ಲಿ ಮಂಡಿಸಬೇಕಾದ ವಿವಿಧ ಮಸೂದೆಗಳ ಪ್ರತಿಗಳನ್ನು ಪ್ರತಿಪಕ್ಷಗಳಿಗೆ ಸಂಜೆಯ ಹೊತ್ತಿಗೆ ನೀಡಲಾಗುವುದು ಎಂದು ನಿನ್ನೆ ಹೇಳಿದ್ದರು.
ಪ್ರತಿಪಕ್ಷದ ನಾಯಕ ಮತ್ತು ಎಎಪಿ ಮುಖಂಡ ಹರ್ಪಾಲ್ ಸಿಂಗ್ ಚೀಮಾ, “ಸದನದಲ್ಲಿ ಮಂಡಿಸಲಾಗುವ ಮಸೂದೆಗಳ ಪ್ರತಿ ಸಿಗುವ ತನಕ ನಾವು ಇಲ್ಲಿ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ” ಎಂದು ನಿನ್ನೆ ತಡರಾತ್ರಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ