• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಮಿಷನ್ ಶಕ್ತಿ ಅಮೋಘವೇ; ಆದರೆ ಪ್ರಧಾನಿಯಿಂದ ರಾಜಕೀಯ ಬಣ್ಣ, ನೀತಿ ಸಂಹಿತೆ ಉಲ್ಲಂಘನೆ: ಸಿಪಿಐಎಂ ಆಕ್ಷೇಪ

ಮಿಷನ್ ಶಕ್ತಿ ಅಮೋಘವೇ; ಆದರೆ ಪ್ರಧಾನಿಯಿಂದ ರಾಜಕೀಯ ಬಣ್ಣ, ನೀತಿ ಸಂಹಿತೆ ಉಲ್ಲಂಘನೆ: ಸಿಪಿಐಎಂ ಆಕ್ಷೇಪ

ಸೀತಾರಾಮ್ ಯೆಚೂರಿ

ಸೀತಾರಾಮ್ ಯೆಚೂರಿ

ಚುನಾವಣೆಯ ಹೊಸ್ತಿಲಲ್ಲಿ ಸಾರ್ವಜನಿಕ ಭಾಷಣದಲ್ಲಿ ಮಿಷನ್ ಶಕ್ತಿಯಂತಹ ಯೋಜನೆಯನ್ನು ಪ್ರಧಾನಿ ಘೋಷಿಸಿದ್ದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಸೀತಾರಾಮ್ ಯೆಚೂರಿ ಆರೋಪಿಸಿದ್ದಾರೆ.

  • News18
  • 3-MIN READ
  • Last Updated :
  • Share this:

ನವದೆಹಲಿ(ಮಾ. 27): ಭೂಕಕ್ಷೆಯ ಮೇಲಿರುವ ಸೆಟಿಲೈಟ್​ಗಳನ್ನ ನಾಶ ಮಾಡಬಲ್ಲ ಮಿಷನ್ ಶಕ್ತಿ ಯೋಜನೆಯನ್ನು ಪ್ರಧಾನಿ ಘೋಷಣೆ ಮಾಡಿರುವುದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಮಿಷನ್ ಶಕ್ತಿಯಂಥ ಯೋಜನೆಯನ್ನು ಡಿಆರ್​ಡಿಓದಂಥ ಸಂಬಂಧಿತ ವೈಜ್ಞಾನಿಕ ಸಂಸ್ಥೆಯವರು ಘೋಷಣೆ ಮಾಡುವ ಬದಲು ಪ್ರಧಾನಮಂತ್ರಿ ಅವರು ಸಾರ್ವಜನಿಕ ಸಮಾವೇಶದಲ್ಲಿ ಈ ಕೆಲಸ ಮಾಡಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆರೋಪಿಸಿದ್ದಾರೆ.

ಇದನ್ನೂ ಓದಿ: 'ಮಿಷನ್ ಶಕ್ತಿ' ಯೋಜನೆ ಯಶಸ್ವಿ; ಬಾಹ್ಯಾಕಾಶದಲ್ಲಿ ಭಾರತ ನಾಲ್ಕನೇ ಶಕ್ತಿಶಾಲಿ ರಾಷ್ಟ್ರ; ಪ್ರಧಾನಿ ಮೋದಿ

ದೇಶವನ್ನುದ್ದೇಶಿಸಿ ಮಾತನಾಡುವಾಗ ಈ ವಿಚಾರವನ್ನು ತಿಳಿಸಲು ಪ್ರಧಾನಿ ಅವರು ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದಿದ್ದರೆ? ಪೂರ್ವಾನುಮತಿ ಇದ್ದದ್ದೇ ಆದಲ್ಲಿ ಆಯೋಗವು ಯಾವ ಆಧಾರದ ಮೇಲೆ ಮೋದಿ ಅವರ ಈ ಭಾಷಣಕ್ಕೆ ಅನುಮತಿ ಕೊಡಲಾಗಿದೆ? ಎಂದು ಯೆಚೂರಿ ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಹತ್ವದ ವಿಷಯ ತಿಳಿಸುವುದಾಗಿ ಟ್ವೀಟ್​ ಮಾಡಿದ್ದ ಮೋದಿ ಬಗ್ಗೆ ಜನರ ನಿರೀಕ್ಷೆಗಳೇನಿತ್ತು?

ಇದೇ ವೇಳೆ, ಮಿಷನ್ ಶಕ್ತಿ ಯೋಜನೆಯನ್ನು ಸಾಕಾರ ಮಾಡಿದ್ದಕ್ಕೆ ಯೆಚೂರಿ ಅವರು ಭಾರತೀಯ ವಿಜ್ಞಾನಿಗಳನ್ನು ಕೊಂಡಾಡಿದ್ಧಾರೆ. “ಭೂಕಕ್ಷೆಯಲ್ಲಿರುವ ಸೆಟಿಲೈಟ್​ಗಳನ್ನು ಟಾರ್ಗೆಟ್ ಮಾಡಬಲ್ಲ ಕ್ಷಿಪಣಿ ಸಾಮರ್ಥ್ಯ ತಮ್ಮಲ್ಲಿದೆ ಎಂದು 2012ರಲ್ಲೇ ಡಿಆರ್​ಡಿಓ ಮುಖ್ಯಸ್ಥರು ಘೋಷಿಸಿದ್ದರು. ಖಂಡಾಂತರ ಕ್ಷಿಪಣಿ ಹಾಗೂ ಅಗ್ನಿ ಕ್ಷಿಪಣಿಗಳ ಯಶಸ್ಸಿನ ನಂತರ ಉಪಗ್ರಹ ನಾಶಕ ಕ್ಷಿಪಣಿ ಅಭಿವೃದ್ಧಿಗೆ ಭಾರತ ಮುಂದಾಯಿತು. ಮುಂಬರುವ ದಿನಗಳಲ್ಲಿ ಇನ್ನೂ ಎತ್ತರದ ಕಕ್ಷೆಗಳಲ್ಲಿರುವ ಸೆಟಿಲೈಟ್​ಗಳನ್ನು ಗುರಿ ಮಾಡಬಲ್ಲ ಕ್ಷಿಪಣಿಗಳನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿ ಮಾಡಬಲ್ಲರು,” ಎಂದು ಸಿಪಿಐಎಂ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಏನಿದು 'ಮಿಷನ್​ ಶಕ್ತಿ'?; ಇಲ್ಲಿದೆ ಬಾಹ್ಯಾಕಾಶ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಉತ್ತರ

ಇವತ್ತು, ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಿಷನ್ ಶಕ್ತಿಯ ಪ್ರಯೋಗ ಯಶಸ್ವಿಯಾಗಿರುವುದನ್ನು ಘೋಷಿಸಿದರು. ಭೂಮಿಯ ಕೆಳ ಸ್ತರದ ಕಕ್ಷೆಯಲ್ಲಿದ್ದ ನಿರುಪಯುಕ್ತ ಉಪಗ್ರಹವೊಂದನ್ನು ಗುರಿ ಮಾಡಿ 3 ನಿಮಿಷದಲ್ಲಿ ಹೊಡೆದುರುಳಿಸಲಾಯಿತು. ಭೂಮಿಯಿಂದಲೇ ಲೇಸರ್ ಕಿರಣಗಳ ಮೂಲಕ ಉಪಗ್ರಹವನ್ನು ನಾಶ ಮಾಡಲಾಯಿತು.

ಉಪಗ್ರಹವನ್ನು ನಾಶ ಮಾಡುವ ಸಾಮರ್ಥ್ಯ ಈ ಮೊದಲು ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳಿಗೆ ಮಾತ್ರ ಇದ್ದವು. ಈಗ ಈ ಗುಂಪಿಗೆ ಭಾರತವೂ ಸೇರ್ಪಡೆಯಾಗಿದೆ.

First published: