• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Narendra Modi: 60 ವರ್ಷದಲ್ಲಿ ಕಾಂಗ್ರೆಸ್ ಎಲ್ಲೆಂದರಲ್ಲಿ ಗುಂಡಿ ತೋಡಿದ್ದು ಬಿಟ್ಟರೆ ಬೇರೆ ಏನೂ ಮಾಡಲೇ ಇಲ್ಲ: ಮೋದಿ

Narendra Modi: 60 ವರ್ಷದಲ್ಲಿ ಕಾಂಗ್ರೆಸ್ ಎಲ್ಲೆಂದರಲ್ಲಿ ಗುಂಡಿ ತೋಡಿದ್ದು ಬಿಟ್ಟರೆ ಬೇರೆ ಏನೂ ಮಾಡಲೇ ಇಲ್ಲ: ಮೋದಿ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್‌ ಸರ್ಕಾರ ಗರೀಬಿ ಹಠಾವೋ ಎಂದು ಘೋಷಣೆ ಮಾಡುತ್ತಿದ್ದರೇ ವಿನಃ ನಾಲ್ಕು ದಶಕಗಳಿಂದ ಆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಏನೂ ಮಾಡಲಿಲ್ಲ. ಆದರೆ ನಾವು ಈ ದೇಶದ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಶ್ರಮ ಪಡುತ್ತಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದರು.

  • News18 Kannada
  • 2-MIN READ
  • Last Updated :
  • New Delhi, India
  • Share this:

ಹೊಸದಿಲ್ಲಿ: ದೇಶದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ಪಕ್ಷ (Congress) ಎಂದಿಗೂ ಪ್ರಯತ್ನ ಮಾಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆರೋಪಿಸಿದ್ದಾರೆ. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿ ಬೇಕೆಂದರಲ್ಲಿ ಗುಂಡಿ ತೋಡಿದ್ದು ಬಿಟ್ಟರೆ ಬೇರೆ ಏನೂ ಮಾಡಲೇ ಇಲ್ಲ. ಕಾಂಗ್ರೆಸ್ ಆರು ದಶಕಗಳನ್ನು ವ್ಯರ್ಥ ಮಾಡಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆ ಸಮಯದಲ್ಲಿ ಸಣ್ಣ ಪುಟ್ಟ ರಾಷ್ಟ್ರಗಳು ಕೂಡ ಯಶಸ್ಸಿನ ಶಿಖರವನ್ನು ಏರಿದ್ದವು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಮೋದಿ ತಿರುಗೇಟು ನೀಡಿದರು.


ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸುಮಾರು 600ಕ್ಕೂ ಹೆಚ್ಚು ಯೋಜನೆಗಳು ಗಾಂಧೀಜಿ ಮತ್ತು ನೆಹರೂ ಕುಟುಂಬದ ಹೆಸರಿನಲ್ಲಿದೆ ಎಂಬ ವರದಿಯನ್ನು ನಾನು ಓದಿದ್ದೇನೆ. ಜವಾಹರ್‌ಲಾಲ್ ನೆಹರೂ ಅವರು ಅಂತಹ ಮಹಾನ್ ವ್ಯಕ್ತಿ ಆಗಿದ್ದಲ್ಲಿ ಅವರ ಸರ್‌ನೇಮ್ ಅನ್ನು ಬಳಸಲು ಗಾಂಧಿ ಮನೆತನ ಏಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರಲ್ಲದೇ, ಸರಕಾರಿ ಯೋಜನೆಗಳ ಹೆಸರುಗಳು ಮತ್ತು ಸಂಸ್ಕೃತ ಪದಗಳ ಬಗ್ಗೆ ಕೆಲವರಿಗೆ ಸಮಸ್ಯೆ ಇದೆ ಎಂದು ಹೇಳಿದರು.


ಇದನ್ನೂ ಓದಿ: Narendra Modi: ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯುವ ವಿಧಾನ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ!


90 ಬಾರಿ ಚುನಾಯಿತ ಸರ್ಕಾರಗಳ ಪತನ!


ಇನ್ನು ಜವಾಹರ್‌ಲಾಲ್ ಅವರಿಗೆ ಇಷ್ಟವಾಗದ ಕಮ್ಯೂನಿಷ್ಟ್‌ ಸರಕಾರ ಆಡಳಿತಕ್ಕೆ ಬಂತು ಎನ್ನುವ ಕಾರಣಕ್ಕೆ ಆ ಸರ್ಕಾರವನ್ನೇ ಉರುಳಿಸಲಾಯಿತು ಎಂದ ಪ್ರಧಾನಿ ಮೋದಿ, ಯಾವ ಪಕ್ಷ ಮತ್ತು ಯಾರು ಅಧಿಕಾರದಲ್ಲಿದ್ದಾಗ ಸಂವಿಧಾನದ 356ನೇ ವಿಧಿಯ್ನು ದುರುಪಯೋಗ ಮಾಡಿಕೊಂಡರು? ದೇಶದಲ್ಲಿ 90 ಬಾರಿ ಚುನಾಯಿತ ಸರ್ಕಾರಗಳು ಪತನಗೊಂಡಿವೆ. ಅದನ್ನು ಮಾಡಿದವರು ಯಾರು? ಇಂದಿರಾ ಗಾಂಧಿ ಎಂಬ ಪ್ರಧಾನಿ ಒಬ್ಬರು 356ನೇ ವಿಧಿಯನ್ನು 50 ಬಾರಿ ಪ್ರಯೋಗ ಮಾಡಿದ್ದರು ಎಂದು ಕಿಡಿಕಾರಿದರು.


ಇನ್ನು,  ಭಾರತದಲ್ಲಿ ಜವಾಹರ್‌ಲಾಲ್‌ ನೆಹರೂ ಮತ್ತು ಗಾಂಧೀಜಿ ಅವರ ಹೆಸರಲ್ಲಿ 600ಕ್ಕೂ ಹೆಚ್ಚು ಯೋಜನೆಗಳಿದ್ದರೂ ಆ ಕುಟುಂಬದ ಯಾರೂ ಕೂಡ ನೆಹರೂ ಅವರ ಸರ್‌ನೇಮ್‌ ಅನ್ನು ಯಾಕೆ ಬಳಸುತ್ತಿಲ್ಲ? ಜವಾಹರ್‌ ಲಾಲ್‌ ನೆಹರೂ ಅವರು ಮಹಾನ್ ವ್ಯಕ್ತಿ ಆಗಿದ್ದಲ್ಲಿ ಅವರ ಉಪನಾಮವನ್ನು ಬಳಸಬೇಕಿತ್ತಲ್ಲವೇ? ಭಯ ಏಕೆ? ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.


ಕಾಂಗ್ರೆಸ್‌ನಿಂದ ಕೇವಲ ಟೋಕನಿಸಂ


ಇನ್ನು, ಭಾರತ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹಾರ ಮಾಡಲು ಕಾಂಗ್ರೆಸ್ ಕೇವಲ ಟೋಕನಿಸಂ ಅನ್ನು ಅಳವಡಿಸಿಕೊಂಡಿದೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಆರೋಪ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಸರ್ಕಾರ ಗರೀಬಿ ಹಠಾವೋ ಎಂದು ಘೋಷಣೆ ಮಾಡುತ್ತಿದ್ದರೇ ವಿನಃ ನಾಲ್ಕು ದಶಕಗಳಿಂದ ಆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಏನೂ ಮಾಡಲಿಲ್ಲ. ಆದರೆ ನಾವು ಈ ದೇಶದ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಶ್ರಮ ಪಡುತ್ತಿದ್ದೇವೆ ಎಂದು ಹೇಳಿದರು. 


ಇದನ್ನೂ ಓದಿ: Narendra Modi: ಜಾಹೀರಾತಿನಲ್ಲಿ ನರೇಂದ್ರ ಮೋದಿಗೆ ಆಯ್ತಾ ಅಪಮಾನ? ಜೋರಾಯ್ತು #BoycottCadbury ಅಭಿಯಾನ!


ನನ್ನ ದೇಶದ ವಿಜ್ಞಾನಿಗಳು ಕೊರೊನಾ ಲಸಿಕೆಯನ್ನು ತಯಾರಿಸಿದ್ದಾರೆ. ಅದು 150 ದೇಶಗಳಿಂದ ಅನುಮೋದನೆಗೊಂಡು ಬಳಕೆ ಆಗಿದೆ. ಆದರೆ ನಿನ್ನೆಯವರೆಗೆ ನಮ್ಮ ವಿಜ್ಞಾನಿಗಳನ್ನು ಅವಮಾನಿಸುವ ಪ್ರಯತ್ನಗಳು ನಡೆದುಕೊಂಡು ಬಂದಿದೆ. ಕೇವಲ ಉದ್ದೇಶವನ್ನು ವ್ಯಕ್ತಪಡಿಸುವುದರಿಂದ ಕೆಲಸ ಮಾಡಲು ಆಗೋದಿಲ್ಲ, ಅದಕ್ಕೆ ಮುಖ್ಯವಾಗಿ ಬೇಕಾಗಿರೋದು ಆ ಕೆಲಸದ ವೇಗ, ದಿಕ್ಕು ಮತ್ತು ಬೆಳವಣಿಗೆ ಎಂದು ಮೋದಿ ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ವಿಪಕ್ಷದ ಸದಸ್ಯರು ಬಾವಿಗಿಳಿದು ಪ್ರತಿಭಟನೆ ಮಾಡಿದರು. ಅಲ್ಲದೇ ಮೋದಿ ಅದಾನಿ ಭಾಯ್ ಭಾಯ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಪ್ರಧಾನಿ ಮೋದಿ ಅವರು ನಾವು ಶಿಸ್ತಿನ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.


ಅದಾನಿ ಸಮೂಹದ ವಿರುದ್ಧ ಪ್ರಕಟ ಆಗಿರುವ ಅಮೆರಿಕ ಮೂಲದ ಹಿಂಡನ್‌ಬರ್ಗ್‌ ವರದಿ ಕೇಂದ್ರ ಬಜೆಟ್‌ ಅಧಿವೇಶನವನ್ನು ಬಲಿ ಪಡೆಯುತ್ತಿದ್ದು, ಪ್ರತಿಪಕ್ಷಗಳು ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ಆಗ್ರಹ ಮಾಡುತ್ತಿವೆ.

Published by:Avinash K
First published: