ಪಾಕಿಸ್ತಾನಕ್ಕೆ ಬೈಸಾಕಿ ಆಚರಣೆಗೆ ಹೋದ ಪಂಜಾಬ್​ನ 100​ ಯಾತ್ರಿಕರಲ್ಲಿ ಸೋಂಕು ಪತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಏ. 12 ರಂದು ಪಾಕಿಸ್ತಾನದಲ್ಲಿ ನಡೆದ ಪಂಜಾಬಿಗರ ಪ್ರಮುಖ ಹಬ್ಬವಾಗಿರುವ ಬೈಸಾಕಿ ಆಚರಣೆಯ ಜಾಥಾದಲ್ಲಿ ಭಾಗಿಯಾಗಲು ಸುಮಾರು 800 ಜನ ಭಾರತದಿಂದ ಹೋಗಿದ್ದರು.

  • Share this:

    ಪಂಜಾಬ್​ (ಏ. 22): ದೇಶದಲ್ಲಿ ಸೋಂಕು ಹೆಚ್ಚುತ್ತಿದ್ದು, ಈ ಬಗ್ಗೆ ಮುನ್ನೆಚ್ಚರಿಕೆವಹಿಸುವಂತೆ ಸರ್ಕಾರ ಜನರಿಗೆ ಎಚ್ಚರಿಸುತ್ತಲೇ ಇದೆ. ಈ ಮುನ್ನೆಚ್ಚರಿಕೆಯ ನಡುವೆಯೂ ಬೈಸಾಕಿ ಆಚರಣೆಗಾಗಿ ಪಂಜಾಬ್​ನ ಭಕ್ತರು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಪಾಕ್​ನಿಂದ ಮರಳಿದ ಈ ಭಕ್ತರಿಗೆಲ್ಲಾ ಸೋಂಕು ದೃಢಗೊಂಡಿದೆ. ಎರಡನೇ ಅಲೆ ಸೋಂಕು ದೇಶದಲ್ಲಿ ಉಲ್ಬಣವಾಗುತ್ತಿದ್ದಂತೆ ಪಂಜಾಬ್​, ಮಹಾರಾಷ್ಟ್ರಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಈ ಹಿನ್ನಲೆ ಇಲ್ಲಿ ಬಿಗಿ ನಿಯಂತ್ರಣ ಕ್ರಮ ಕೂಡ ನಡೆಸಲಾಗಿತ್ತು. ಇಲ್ಲಿನ ಸ್ಥಳೀಯ ಆಡಳಿತ ಕೂಡ ಜನರಿಗೆ ಕಟ್ಟೆಚ್ಚರ ನೀಡಿತ್ತು. ಈ ಸಲಹೆಗಳನ್ನು ಗಾಳಿಗೆ ತೂರಿ ಸುಮಾರು ಜನ ಬೈಸಾಕಿ ಆಚರಣೆಗೆ ದೇಶದ ಗಡಿ ದಾಟಿದ್ದರು.


    ಪಾಕಿಸ್ತಾನದಲ್ಲಿ ವಿವಿಧ ಸಿಖ್​ ಸಂಘಟನೆಗಳು ಆಯೋಜಿಸಿದ್ದ ಬೈಸಾಕಿ ಆಚರಣೆ ಬಳಿಕ ಸ್ವದೇಶಕ್ಕೆ ಭಕ್ತರು ಮರಳಿದ್ದಾರೆ. ಈ ವೇಳೆ ಅವರಿಗೆ ರಾಪಿಡ್ ಆಂಟಿಜೆನ್​​ ಪರೀಕ್ಷೆ ನಡೆಸಲಾಗಿದೆ. ಈ ವೇಳೆ 100ರಲ್ಲಿ 98 ಮಂದಿಗೆ ಕೋವಿಡ್​ ಪಾಸಿಟಿವ್​ ಬಂದಿದೆ. ಇನ್ನು ಪರೀಕ್ಷೆಗಳು ನಡೆಯುತ್ತಿದ್ದು ಅಂತಿಮ ವರದಿ ಸಿಗಲಿದೆ ಎಂದು ಗಡಿಯಲ್ಲಿನ ಸ್ಥಳೀಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಇದುವರೆಗೂ 300 ಜನರನ್ನು ಪರೀಕ್ಷಿಸಲಾಗಿದೆ. ಕೋವಿಡ್​ ದೃಢಪಟ್ಟವನ್ನು ಆಸ್ಪತ್ರೆ ಅಥವಾ ಮನೆಯಲ್ಲಿ ಕ್ವಾರಂಟೈನ್​ ಮಾಡುವುದರ ಬಗ್ಗೆ ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.


    ಏ. 12 ರಂದು ಪಾಕಿಸ್ತಾನದಲ್ಲಿ ನಡೆದ ಪಂಜಾಬಿಗರ ಪ್ರಮುಖ ಹಬ್ಬವಾಗಿರುವ ಬೈಸಾಕಿ ಆಚರಣೆಯ ಜಾಥಾದಲ್ಲಿ ಭಾಗಿಯಾಗಲು ಸುಮಾರು 800 ಜನ ಭಾರತದಿಂದ ಹೋಗಿದ್ದರು. ಇಲ್ಲಿಂದ ಹೋಗುವ ಮೊದಲು ಅವರನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೋವಿಡ್​ ನೆಗಟಿವ್​ ವರದಿ ಬಂದ ಬಳಿಕವೇ ಅವರಿಗೆ ಅನುಮತಿ ನೀಡಲಾಗಿತ್ತು. ಇವರಿಗೆ ಪಾಕಿಸ್ತಾನದ ಹೈ ಕಮಿಷನ್​ ಕೂಡ 10 ದಿನಗಳ ವೀಸಾ ನೀಡಿತ್ತು. ಇವರೆಲ್ಲಾ ಪಾಕಿಸ್ತಾನದ ಹಸನ್​ ಅಬ್ದಾಲ್​ನ ಗುರುದ್ವಾರ ಪಂಜಾ ಸಾಹಿಬ್​ ಸೇರಿದಂತೆ ವಿವಿಧ ಸಿಖ್​ ದೇವಾಲಯಕ್ಕೆ ಭೇಟಿ ನೀಡಿದ್ದರು. ಈಗ ಇವರಲ್ಲಿ ಸೋಂಕು ಕಾಣಿಸಿಕೊಂಡಿದೆ.


    ಇದನ್ನು ಓದಿ: ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಕೊರತೆ : ಟಿಂಡರ್ ಡೇಟಿಂಗ್ ಆ್ಯಪ್‌ನಲ್ಲಿ ಪ್ಲಾಸ್ಮಾ ಡೋನರ್‌ ಹುಡುಕಿದ ಮಹಿಳೆ


    ಇತನ್ಮಧ್ಯೆ, ಭಾರತದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಪಾಕಿಸ್ತಾನ ಭಾರತೀಯ ಪ್ರಯಾಣಿಕರನ್ನು ಎರಡು ವಾರಗಳ ಕಾಲ ನಿಷೇಧಿಸಿದೆ. ಪಾಕ್​ನ ರಾಷ್ಟ್ರೀಯ ಕಮಾಂಡ್​ ಮತ್ತು ಆಪರೇಷನ್​ ಸೆಂಟರ್​ ಮುಖ್ಯಸ್ಥ ಅಸಾದ್​ ಉಮರ್​ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾರತದ ಪ್ರವಾಸವನ್ನು ಎರಡು ವಾರಗಳ ಕಾಲ ನಿಷೇಧಿಸಲಾಗಿದೆ.


    ಪಾಕಿಸ್ತಾನ ಮಾತ್ರವಲ್ಲದೇ, ಅಮೆರಿಕ, ಬ್ರಿಟನ್​, ಹಾಕಾಂಗ್​ ಮತ್ತು ಸಿಂಗಾಪೂರ ಕೂಡ ಭಾರತಕ್ಕೆ ಪ್ರಯಾಣ ಕೈಗೊಳ್ಳದಂತೆ ತಮ್ಮ ದೇಶದ ಜನರಿಗೆ ತಿಳಿಸಿದೆ. ಕೋವಿಡ್​ ಎರಡನೇ ಅಲೆಯಲ್ಲಿ ಭಾರತ ಸಿಲುಕಿದ್ದು, ಅತಿಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಈ ಹಿನ್ನಲೆ ಸುರಕ್ಷಾ ದೃಷ್ಟಿಯಿಂದ ಈ ಕ್ರಮಕ್ಕೆ ವಿವಿಧ ದೇಶಗಳು ಮುಂದಾಗಿವೆ.

    Published by:Seema R
    First published: