ಪಂಜಾಬ್ (ನವೆಂಬರ್ 26); ಸಂವಿಧಾನ ದಿನದಂದೇ ತಮ್ಮ ಹಕ್ಕುಗಳಿಗಾಗಿ ಪಂಜಾಬ್ನಿಂದ ದೆಹಲಿಗೆ ಆಗಮಿಸಿದ್ದ ರೈತರನ್ನು ಗಡಿಯಲ್ಲಿಯೇ ತಡೆದು ನಿಲ್ಲಿಸಿರುವ ಕೇಂದ್ರ ಮತ್ತು ಹರಿಯಾಣದ ಬಿಜೆಪಿ ಸರ್ಕಾರದ ನಡೆಯನ್ನು ಸಂವಿಧಾನ ವಿರೋಧಿ ನಡೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ಇಂದು ದೇಶದಾದ್ಯಂತ ರೈತರು "ದೆಹಲಿ ಚಲೋ" ಹೋರಾಟಕ್ಕೆ ಕರೆ ನೀಡಿದ್ದಾರೆ. ಇದರ ಭಾಗವಾಗಿ ಪಂಜಾಬ್ ರೈತರು ಇಂದು ದೆಹಲಿಗೆ ಹೊರಟಿದ್ದಾರೆ. ಆದರೆ, ಅವರನ್ನು ಮಾರ್ಗ ಮಧ್ಯೆಯೇ ಹರಿಯಾಣದ ಬಿಜೆಪಿ ಸರ್ಕಾರ ಪೊಲೀಸರ ಬಲದಿಂದ ತಡೆದು ನಿಲ್ಲಿಸಿದೆ. ಇದನ್ನು ವಿರೋಧಿಸಿರುವ ಪಂಜಾಬ್ ಸಿಎಂ ಅಮರೀಂದರ್ ಸಿಂಗ್, "ಹೀಗೆ ವಿವೇಚನಾರಹಿತ ಶಕ್ತಿ ಬಳಸುವುದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕವಾಗಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.
Chief Minister @capt_amarinder condemns Haryana govt’s forcible attempts to prevent farmers from marching to Delhi. CM asks why @mlkhattar govt was stopping farmers, terms use of force as undemocratic & unconstitutional.https://t.co/i3ZLDbteO2
— CMO Punjab (@CMOPb) November 26, 2020
Urge @BJP4India to direct their state governments not to indulge in such strong-arm tactics against the farmers. The hands that feed the nation deserve to be held, not pushed aside. pic.twitter.com/N7h2V1wrjr
— Capt.Amarinder Singh (@capt_amarinder) November 26, 2020
It’s a sad irony that on #ConstitutionDay2020 the constitutional right of farmers is being oppressed in this manner. Let them pass @mlkhattar ji, don't push them to the brink. Let them take their voice to Delhi peacefully. pic.twitter.com/48P0rvILVU
— Capt.Amarinder Singh (@capt_amarinder) November 26, 2020
ಇದನ್ನೂ ಓದಿ : ದೆಹಲಿ ಚಲೋ; ಗಡಿಯಲ್ಲಿಯೇ ರೈತರನ್ನು ತಡೆದು ಅಶ್ರುವಾಯು ಪ್ರಯೋಗ, ಬ್ಯಾರಿಕೇಡ್ ಮುರಿದು ರೈತರ ಆಕ್ರೋಶ
"ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರವು ರೈತರ ವಿರುದ್ಧ ಬಲವಾದ ತೋಳಿನ ತಂತ್ರಗಳನ್ನು ಮಾಡದಂತೆ ಕೇಂದ್ರ ಬಿಜೆಪಿ ಸರ್ಕಾರ ನಿರ್ದೇಶಿಸಬೇಕು. ಇದಲ್ಲದೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ರೈತರ ಹೋರಾಟವನ್ನು ಧಮನಿಸದಂತೆ ಸೂಚನೆ ನೀಡಬೇಕು. ರಾಷ್ಟ್ರವನ್ನು ಪೋಷಿಸುವ ಕೈಗಳಿಗೆ ಅವರ ಹಕ್ಕನ್ನು ಕೇಳುವ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಿಕೊಡಬೇಕು" ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ