ಸದಾ ಒಂದಿಲ್ಲೊಂದು ವಿವಾದಗಳಲ್ಲಿ (Dispute) ಮುಖ್ಯವಾಗಿ ಕಾಣಿಸಿಕೊಳ್ಳುವ ನವದೆಹಲಿಯ (New Delhi) ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಹಲವು ವಿವಾದಾತ್ಮಕ ಸಂಗತಿಗಳಿಗೂ ಕಾರಣವಾಗಿರುವ ಜೆಎನ್ ಯು ಈಗ ಮತ್ತೆ ಸುದ್ದಿಯಲ್ಲಿದೆ (News). ಈ ಬಾರಿ ಜೆಎನ್ ಯು ಉಪಕುಲಪತಿ (Vice Chancellor) ಶಾಂತಿಶ್ರೀ ಧೂಳಿಪುಡಿ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜೆಎನ್ ಯು ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಅವರು, ‘ಹಿಂದೂ ದೇವರು ಮತ್ತು ದೇವತೆಗಳು ಮೇಲ್ಜಾತಿಗೆ ಸೇರಿದವರಲ್ಲ. ಭಗವಂತ ಶಿವನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವನು ಆಗಿರಬಹುದು’ ಎಂದು ಹೇಳಿಕೆ ನೀಡಿದ್ದಾರೆ.
ಜೆಎನ್ ಯು ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ವಿವಾದಾತ್ಮಕ ಹೇಳಿಕೆ
ಈಗಾಗಲೇ ದೇಶದಲ್ಲಿ ಜಾತಿ ಮತ್ತು ಧರ್ಮ ಕುರಿತ ಹಲವು ಹೇಳಿಕೆಗಳಿಂದ ಸಮಾಜದ ಸ್ಥಿತಿಗತಿ ಹದಗೆಟ್ಟಿದೆ. ಎಲ್ಲೆಡೆ ಕೋಮುವಾದ ಹೆಚ್ಚುತ್ತಿದೆ. ಇಂತಹ ವೇಳೆ ಜೆಎನ್ ಯು ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಅವರ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮನುಕುಲದ ವಿಜ್ಞಾನದ ಪ್ರಕಾರ ದೇವರುಗಳು ಉನ್ನತ ಜಾತಿಗೆ ಸೇರಿದವರಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದೆಹಲಿಯಲ್ಲಿ ಸೋಮವಾರ ವಿಚಾರ ಸಂಕಿರಣವನ್ನು ಆಯೋಜನೆ ಮಾಡಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಲಿಂಗ ನ್ಯಾಯದ ಕುರಿತು ಚಿಂತನೆ: ಏಕರೂಪ ನಾಗರಿಕ ಸಂಹಿತೆಯ ಡಿಕೋಡಿಂಗ್ ಎಂಬ ವಿಚಾರವಾಗಿ ಮಾತನಾಡಿದ ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಅವರು, ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಶೂದ್ರರ ಸ್ಥಾನಮಾನ ನೀಡಲಾಗಿದೆ.
ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ, ಶಾಸಕ ಟಿ. ರಾಜಾ ಬಿಜೆಪಿಯಿಂದ ಅಮಾನತು!
ಭಗವಂತ ಶಿವನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವನಾಗಿರಬೇಕು
‘ಮನುಸ್ಮೃತಿ ಪ್ರಕಾರ ಎಲ್ಲಾ ಮಹಿಳೆಯರು ಶೂದ್ರರು. ಮಹಿಳೆಯರು ತಮ್ಮ ತಂದೆ ಅಥವಾ ಪತಿಯಿಂದ ಜಾತಿ ಸ್ಥಾನ ಪಡೆಯುತ್ತಾರೆ. ನಿಮ್ಮಲ್ಲಿ ಹೆಚ್ಚಿನವರು ಮನುಕುಲದ ವಿಜ್ಞಾನದ ಪ್ರಕಾರ ನಮ್ಮ ದೇವರುಗಳ ಮೂಲವನ್ನು ತಿಳಿದಿರಬೇಕು. ಯಾವ ದೇವರು ಬ್ರಾಹ್ಮಣನಲ್ಲ. ಅತ್ಯುನ್ನತ ಸ್ಥಾನಮಾನ ಹೊಂದಿರುವ ಜಾತಿಯೆಂದರೆ ಕ್ಷತ್ರಿಯ.
ಭಗವಂತ ಶಿವನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವನಾಗಿರಬೇಕು.’ ಏಕೆಂದರೆ ಅವನು ಸ್ಮಶಾನದಲ್ಲಿ ಕುಳಿತುಕೊಳ್ಳುತ್ತಾನೆ. ಹಾವುಗಳು ಅವನೊಟ್ಟಿಗೆ ವಾಸಿಸುತ್ತವೆ. ಕಡಿಮೆ ಬಟ್ಟೆ ಧರಿಸುತ್ತಾನೆ. ಸ್ಮಶಾನದಲ್ಲಿ ಬ್ರಾಹ್ಮಣರು ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ದೇವಾನುದೇವತೆಗಳಲ್ಲಿ ಯಾರೂ ಕೂಡ ಮೇಲ್ಜಾತಿಯಿಂದ ಬಂದವರಲ್ಲ
ಇದೆಲ್ಲವನ್ನು ನೋಡಿದರೆ ದೇವಾನುದೇವತೆಗಳಲ್ಲಿ ಯಾರೂ ಕೂಡ ಮೇಲ್ಜಾತಿಯಿಂದ ಬಂದವರಲ್ಲ. ಹಾಗೇ ನೋಡಿದರೆ ಲಕ್ಷ್ಮಿ, ಶಕ್ತಿ ಮತ್ತು ಜಗನ್ನಾಥ ಎಲ್ಲಾ ದೇವತೆಗಳು ಬುಡಕಟ್ಟು ಜನಾಂಗದಿಂದ ಬಂದವರು. ಆದರೆ ಈಗಲೂ ನಾವು ಜಾತಿ ವ್ಯವಸ್ಥೆ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಇದು ನಿಜಕ್ಕೂ ಅಮಾನವೀಯ ಎಂದು ಹೇಳಿದ್ದಾರೆ.
ಅತ್ಯಂತ ಅಮಾನವೀಯವಾದ ಈ ತಾರತಮ್ಯವನ್ನು ಇನ್ನೂ ಏಕೆ ಮುಂದುವರಿಸುತ್ತಿದ್ದೇವೆ. ಬಾಬಾಸಾಹೇಬರ ಅಭಿಪ್ರಾಯವನ್ನು ನಾವು ಮರುಪರಿಶೀಲನೆ ಮಾಡಬೇಕಿದೆ. ಅಂತಹ ಶ್ರೇಷ್ಠ ಚಿಂತಕರು ಆಧುನಿಕ ಭಾರತದಲ್ಲಿ ಯಾವ ನಾಯಕರೂ ಇಲ್ಲ ಎಂದರು. ಹಿಂದೂ ಧರ್ಮ ಒಂದು ಧರ್ಮವಲ್ಲ. ಅದು ಜೀವನ ವಿಧಾನ. ಹೀಗಿದ್ದಾಗಲೂ ನಾವು ಟೀಕೆಗಳಿಗೆ ಯಾಕೆ ಹೆದರುತ್ತೇವೆ ಎಂದು ಪ್ರಶ್ನಿಸಿದರು.
ಜಲೋರ್ ಘಟನೆ ಬಗ್ಗೆ ಬೇಸರ
ಉಪಕುಲಪತಿ ಶಾಂತಿಶ್ರೀ ಅವರು ತಮ್ಮ ಭಾಷಣದಲ್ಲಿ ರಾಜಸ್ಥಾನದಲ್ಲಿ ಒಂಬತ್ತು ವರ್ಷದ ದಲಿತ ಬಾಲಕನ ಸಾವಿನ ಬಗ್ಗೆ ಪ್ರಸ್ತಾಪಿಸಿದರು. ಆ ಹುಡುಗ ಮೇಲ್ಜಾತಿಯ ಶಿಕ್ಷಕನಿಂದ ಹಲ್ಲೆಗೆ ತುತ್ತಾದ. ದುರದೃಷ್ಟವಶಾತ್ ಇಂದು ಜಾತಿ ಹುಟ್ಟಿನ ಮೇಲೆ ಆಧಾರಿತವಾಗಿದೆ. ಯಾರಾದರೂ ಬ್ರಾಹ್ಮಣ ಅಥವಾ ಚಮ್ಮಾರರಾಗಿದ್ದರೆ, ಅವನು ಹುಟ್ಟಿದ ತಕ್ಷಣ ದಲಿತನಾಗುತ್ತಾನೆಯೇ?
ಇದನ್ನೂ ಓದಿ: ಬೇನಾಮಿ ಆಸ್ತಿ ಪ್ರಕರಣದಲ್ಲಿ ಇನ್ನು ಜೈಲು ಶಿಕ್ಷೆ ಇಲ್ಲ, ಸುಪ್ರೀಂ ಮಹತ್ವದ ತೀರ್ಪು!
ರಾಜಸ್ಥಾನದಲ್ಲಿ ಇತ್ತೀಚೆಗೆ ಮೇಲ್ಜಾತಿಯವರಿಗೆ ಸೇರಿದ ನೀರನ್ನು ಕೇವಲ ಮುಟ್ಟಿದರು ಎಂಬ ಕಾರಣಕ್ಕೆ ಹೊಡೆದು ಸಾಯಿಸಲಾಗಿದೆ. ಇದು ಮಾನವ ಹಕ್ಕುಗಳ ಪ್ರಶ್ನೆಯಾಗಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ