ಪಾಟ್ನಾ (ನ.12): ಬಿಹಾರ ಚುನಾವಣೆಯಲ್ಲಿ ಜೆಡಿಯುಗಿಂತ ಬಿಜೆಪಿ ಬಲ ಹೆಚ್ಚಿದ್ದು, ನಿತೀಶ್ ಮುಖ್ಯಮಂತ್ರಿ ಸ್ಥಾನ ಪಡೆಯುವುದು ಸುಲಭವಲ್ಲ ಎಂಬ ಮಾತು ಕೇಳಿಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಕುರ್ಚಿಗೆ ನಾನು ಅಂಟಿಕೊಂಡಿಲ್ಲ. ಮುಖ್ಯಮಂತ್ರಿಯಾಗಬೇಕು ಎಂಬ ಯಾವುದೇ ಹಕ್ಕನ್ನು ನಾನು ಪ್ರತಿಪಾದಿಸುವುದಿಲ್ಲ. ಎನ್ಡಿಎ ಮೈತ್ರಿಗೆ ನಾವು ಒಳಪಟ್ಟಿದ್ದು, ಮಿತ್ರ ಪಕ್ಷಗಳ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ. ಮುಖ್ಯಮಂತ್ರಿ ಸ್ಥಾನವೇ ಬೇಕು ಎಂದು ಕೇಳಿಲ್ಲ. ಜನರು ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ನೀಡಿತ್ತು. ನಾವು ಸರ್ಕಾರ ರಚಿಸುತ್ತೇವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಚುನಾವಣಾ ಫಲಿತಾಂಶದ ಬಳಿಕ ಮೊದಲ ಬಾರಿ ಮಾಧ್ಯಮದ ಮುಂದೆ ಮಾತನಾಡಿದ ಅವರು, ಚಿರಾಗ್ ಪಾಸ್ವಾನ್ ಅವರ ಲೋಕ್ ಜನಶಕ್ತಿ ಪಕ್ಷ ಜೆಡಿಯು ಸ್ಥಾನಗೆಲ್ಲುವ ತಂತ್ರಕ್ಕೆ ಭಾರೀ ಪೆಟ್ಟು ನೀಡಿ, ಪಕ್ಷಕ್ಕೆ ಹಾನಿ ಮಾಡಿತು ಎಂದು ಅವರು ಒಪ್ಪಿಕೊಂಡರು.
I have made no claim, the decision will be taken by NDA: Nitish Kumar, Bihar CM and JD(U) Chief on being asked, "Who will be the CM?" pic.twitter.com/2U3XDIfRUF
— ANI (@ANI) November 12, 2020
It is not decided yet when the oath ceremony will take place, whether after Diwali or Chhath. We are analysing the results of this election. Members of all four parties will meet tomorrow: Bihar CM Nitish Kumar pic.twitter.com/H2MmxnK9zZ
— ANI (@ANI) November 12, 2020
ನಾವು ಚುನಾವಣೆಯಲ್ಲಿ ಎನ್ಡಿಎ ಪರವಾಗಿ ಪ್ರಚಾರ ಮಾಡಿದೆವು. ಕೆಲವು ಕಡೆ ಎಲ್ಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ, ನಮ್ಮ ಮತಗಳನ್ನು ಕಡಿಮೆ ಮಾಡಿದವು. ಎಲ್ಜೆಪಿ ನಮ್ಮನ್ನು ಸೋಲಿಸಲು ನಡೆಸಿದ ಪ್ರಯತ್ನ ಎಂಬುದು ಇದು ಸ್ಪಷ್ಟವಾಗಿದೆ ಎಂದು ಪರೋಕ್ಷವಾಗಿ ತಿಳಿಸಿದರು. ಅಲ್ಲದೇ ಇದೇ ಮಾಧ್ಯಮಗಳು ವಿಶ್ಲೇಷಣೆ ನಡೆಸಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ