• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Cow Dung: ಮಣ್ಣಿನ ಫಲವತ್ತತೆ ಹೆಚ್ಚಲು ಕೃಷಿಯಲ್ಲಿ ಗೋವಿನ ಗೊಬ್ಬರ, ಗೋಮೂತ್ರ ಬಳಸಬೇಕು: ನೀತಿ ಆಯೋಗ

Cow Dung: ಮಣ್ಣಿನ ಫಲವತ್ತತೆ ಹೆಚ್ಚಲು ಕೃಷಿಯಲ್ಲಿ ಗೋವಿನ ಗೊಬ್ಬರ, ಗೋಮೂತ್ರ ಬಳಸಬೇಕು: ನೀತಿ ಆಯೋಗ

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ 50 ವರ್ಷಗಳಲ್ಲಿ ರಾಸಾಯನಿಕ ರಸಗೊಬ್ಬರಗಳು ಹಾಗೂ ಜಾನುವಾರು ಗೊಬ್ಬರಗಳ ಬಳಕೆಯಲ್ಲಿ ಗಮನಾರ್ಹ ಅಸಮತೋಲನ ಉಂಟಾಗಿದೆ. ಇದು ಮಣ್ಣಿನ ಆರೋಗ್ಯ, ಆಹಾರದ ಗುಣಮಟ್ಟ, ದಕ್ಷತೆ, ಪರಿಸರ ಹಾಗೂ ಮಾನವ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತಿದೆ ಎಂದು ನೀತಿ ಆಯೋಗ ಹೇಳಿದೆ.

  • Local18
  • 3-MIN READ
  • Last Updated :
  • New Delhi, India
  • Share this:

ನವದೆಹಲಿ: ಕಳೆದ 50 ವರ್ಷದಲ್ಲಿ ಅತಿಯಾದ ರಸಗೊಬ್ಬರಗಳ (Fertilizers) ಬಳಕೆಯಿಂದಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ ಮಣ್ಣಿನ ಫಲವತ್ತತೆ ಕುಸಿದಿದೆ. ಇದರಿಂದ ಆಹಾರದ ಗುಣಮಟ್ಟ, ಪರಿಸರದ ಮೇಲೆಯೂ ಪರಿಣಾಮ ಬೀರುತ್ತಿದೆ. ಹಾಗಾಗಿ ಕೃಷಿಯಲ್ಲಿ ಗೋಮೂತ್ರ (Cow Urine) ಹಾಗೂ ಗೋವಿನ ಸಗಣಿಯ (Cow Dung) ಬಳಕೆ ಹೆಚ್ಚಿಸಬೇಕಿದೆ ಎಂದು ನೀತಿ ಆಯೋಗ ಅಭಿಪ್ರಾಯಪಟ್ಟಿದೆ.


ಈ ಬಗ್ಗೆ ಮಾತನಾಡಿರುವ ನೀತಿ ಆಯೋಗದ ಕೃಷಿ ವಿಭಾಗದ ಸದಸ್ಯ ರಮೇಶ್‌ ಚಾಂದ್‌, ಅಧಿಕ ಪ್ರಮಾಣದ ರಸಗೊಬ್ಬರ, ಕ್ರಿಮಿನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ. ಆದರೆ ಗೋಮೂತ್ರ, ಸಗಣಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಲಿದೆ. ಇದಕ್ಕಾಗಿ ಅಧಿಕ ಸಂಖ್ಯೆಯಲ್ಲಿ ಗೋಶಾಲೆಗಳ ಸ್ಥಾಪನೆಯ ಆಗಬೇಕಿದೆ. ನೀತಿ ಆಯೋಗದ ಕಾರ್ಯಪಡೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: BVR Subrahmanyam: ನೀತಿ ಆಯೋಗದ ನೂತನ ಸಿಇಒ ಆಗಿ ನಿವೃತ್ತ ಐಎಎಸ್‌ ಅಧಿಕಾರಿ ಬಿವಿಆರ್‌ ಸುಬ್ರಹ್ಮಣ್ಯಂ ನೇಮಕ


50 ವರ್ಷಗಳಲ್ಲಿ ಗಮನಾರ್ಹ ಅಸಮತೋಲನ


ಕಳೆದ 50 ವರ್ಷಗಳಲ್ಲಿ ರಾಸಾಯನಿಕ ರಸಗೊಬ್ಬರಗಳು ಹಾಗೂ ಜಾನುವಾರು ಗೊಬ್ಬರಗಳ ಬಳಕೆಯಲ್ಲಿ ಗಮನಾರ್ಹ ಅಸಮತೋಲನ ಉಂಟಾಗಿದೆ. ಇದು ಮಣ್ಣಿನ ಆರೋಗ್ಯ, ಆಹಾರದ ಗುಣಮಟ್ಟ, ದಕ್ಷತೆ, ಪರಿಸರ ಹಾಗೂ ಮಾನವ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತಿದೆ ಎಂದಿರುವ ರಮೇಶ್ ಚಾಂದ್, ಇದಕ್ಕಾಗಿಯೇ ಸರಕಾರವು ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯಂತಹ ಸುಸ್ಥಿರ ಕೃಷಿ ಪದ್ಧತಿಗಳಿಗೆ ಉತ್ತೇಜನ ನೀಡುತ್ತಿದೆ. ಗೋಶಾಲೆಗಳು ಜೈವಿಕ ಹಾಗೂ ಸಾವಯವ ಉತ್ಪನ್ನಗಳ ಪೂರೈಕೆಯ ಸಂಪನ್ಮೂಲ ಕೇಂದ್ರಗಳಾಗಿ ನೈಸರ್ಗಿಕ ಮತ್ತು ಸುಸ್ಥಿರ ಕೃಷಿಯನ್ನು ವೃದ್ಧಿಸುವ ಅವಿಭಾಜ್ಯ ಅಂಗವಾಗಬಹುದು ಎಂದು ತಿಳಿಸಿದ್ದಾರೆ.


ನೀತಿ ಆಯೋಗವು 'ಸಾವಯವ ಹಾಗೂ ಜೈವಿಕ ರಸಗೊಬ್ಬರದ ಉತ್ಪಾದನೆ ಹಾಗೂ ಉತ್ತೇಜನದ ಜತೆಗೆ ಆರ್ಥಿಕ ಕಾರ್ಯಸಾಧ್ಯತೆಯ ಹೆಚ್ಚಳಕ್ಕೆ ಗೋಶಾಲೆಗಳ ಮೇಲೆ ಹೆಚ್ಚಿನ ಗಮನ' ಎಂಬ ವರದಿ ಬಿಡುಗಡೆ ಮಾಡಿದ್ದು, ಸಾವಯವ ಕೃಷಿಯ ಪ್ರಾಮುಖ್ಯತೆಗೆ ಒತ್ತು ನೀಡಿದೆ.


ಇದನ್ನೂ ಓದಿ: China Economy: ಜಾಗತಿಕ ಆರ್ಥಿಕತೆಯನ್ನು ಉಳಿಸುವ ಬಗೆ ಹೇಗೆ? ಚೀನಾದ ಧೋರಣೆಗೆ ವಿಶ್ವದ ಇತರ ದೇಶಗಳ ವಿರೋಧ!


ಗೋವುಗಳ ಸಗಣಿಯ ಬಳಕೆ ಹೆಚ್ಚಿಸಬೇಕು


ಜಾನುವಾರು ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಬಳಸುವುದು ಕಸದಿಂದ ರಸ ಪರಿಕಲ್ಪನೆಯನ್ನು ಸಾಕಾರಗೊಳಿಸುವ ವರ್ತುಲ ಆರ್ಥಿಕತೆಗೆ ಯೋಗ್ಯ ಉದಾಹರಣೆ. ಭಾರತದ ಸಾಂಪ್ರದಾಯಿಕ ಕೃಷಿಗೆ ಗೋವುಗಳು ಅವಿಭಾಜ್ಯ ಅಂಗಗಳಾಗಿವೆ. ಗೋಶಾಲೆಗಳು ನೈಸರ್ಗಿಕ ಹಾಗೂ ಸಾವಯವ ಕೃಷಿಗೆ ಪೂರಕವಾಗಿವೆ. ಗೋವುಗಳ ಸಗಣಿಯ ಬಳಕೆ ಹೆಚ್ಚಿಸಬೇಕು ಹಾಗೂ ರಸಗೊಬ್ಬರಗಳ ಬಳಕೆ ತಡೆಯಬೇಕು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವ ಜತೆಗೆ ಜನರ ಆರೋಗ್ಯ, ಪರಿಸರ ರಕ್ಷಣೆ ಹಾಗೂ ಸುಸ್ತಿರತೆ ಕಾಪಾಡಬಹುದಾಗಿದೆ ಎಂದು  ಆಯೋಗದ ಸಲಹೆಗಾರ ಡಾ. ನೀಲಂ ಪಟೇಲ್‌ ತಿಳಿಸಿದ್ದಾರೆ.


ಅಲ್ಲದೇ, ಜಾನುವಾರುಗಳು ಭಾರತದಲ್ಲಿನ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಯ ಅವಿಭಾಜ್ಯ ಭಾಗಗಳಾಗಿವೆ. ನೈಸರ್ಗಿಕ ಕೃಷಿ ಪದ್ಧತಿಯನ್ನು ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸಲು ಗೋಶಾಲೆಗಳು ದೊಡ್ಡ ಮಟ್ಟದ ಸಹಾಯ ಮಾಡಬಲ್ಲವು. ಗೋ ತ್ಯಾಜ್ಯ-ಸಗಣಿ ಮತ್ತು ಗೋಮೂತ್ರದಿಂದ ಅಭಿವೃದ್ಧಿಪಡಿಸುವ ಕೃಷಿ ಉಪ ಉತ್ಪನ್ನಗಳು ಆಗ್ರೋ ಕೆಮಿಕಲ್‌ಗಳ ಬಳಕೆಯನ್ನು ತಗ್ಗಿಸುವ ಅಥವಾ ಸಂಪೂರ್ಣವಾಗಿ ಬದಲಿಸಯವ ಬೆಳೆಗಳ ಪೋಷಕಾಂಶಗಳಾಗಿ ಮತ್ತು ಗಿಡಗಳ ರಕ್ಷಣೆಯಲ್ಲಿ, ಆರ್ಥಿಕತೆಯ ಮೇಲೆ, ಆರೋಗ್ಯ, ಪರಿಸರ ಹಾಗೂ ಸುಸ್ಥಿರತೆಯ ವಿಚಾರಗಳಲ್ಲಿ ಬಳಕೆಯಾಗಬಹುದು ಎಂದು ಪಟೇಲ್ ತಿಳಿಸಿದ್ದಾರೆ.

Published by:Avinash K
First published: