ಬಂಗಾಳ, ಕೇರಳದಿಂದ ದಾಳಿಗೆ ಸಂಚು ರೂಪಿಸುತ್ತಿದ್ದ 9 ಶಂಕಿತ ಅಲ್-ಖೈದಾ ಉಗ್ರರ ಬಂಧನ

ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎ

ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎ

ದೇಶದಲ್ಲಿ ಚಟುವಟಿಕೆ ನಡೆಸುತ್ತಿದ್ದ ಅಂತರರಾಜ್ಯ ಟೆರರ್ ಮಾಡ್ಯೂಲ್ವೊಂದನ್ನ ಎನ್ಐಎ ಭೇದಿಸಿದ್ದು, ಬಂಗಾಳ ಮತ್ತು ಕೇರಳದ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ 9 ಶಂಕಿತ ಉಗ್ರರನ್ನ ಬಂಧಿಸಿದೆ.

  • News18
  • 4-MIN READ
  • Last Updated :
  • Share this:

ನವದೆಹಲಿ(ಸೆ. 19): ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಶಂಕೆಯ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ 9 ಮಂದಿಯನ್ನು ಇಂದು ಶನಿವಾರ ಬೆಳಗ್ಗೆ ಬಂಧಿಸಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ಕೇರಳದ ಎರ್ನಾಕುಲಂನಲ್ಲಿ ಎನ್​ಐಎ ತಂಡಗಳು ನಡೆಸಿದ ದಾಳಿಯಲ್ಲಿ ಸೆರೆಸಿಕ್ಕಿರುವ 9 ಮಂದಿ ಅಲ್-ಖೈದಾ ಆಪರೇಟಿವ್​ಗಳೆಂದು ಶಂಕಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 6 ಮಂದಿ ಮತ್ತು ಕೇರಳದಲ್ಲಿ 3 ಮಂದಿ ಅರೆಸ್ಟ್ ಆಗಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಅಂತರರಾಜ್ಯ ಅಲ್-ಖೈದಾ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಮೇರೆಗೆ ಎರ್ನಾಕುಲಂ ಮತ್ತು ಮುರ್ಷಿದಾಬಾದ್​ನ ಹಲವು ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಯಿತು. ದೇಶದ ಪ್ರಮುಖ ನೆಲೆಗಳ ಮೇಲೆ ಉಗ್ರ ದಾಳಿ ನಡೆಸಲು ಇವರು ಸಂಚು ರೂಪಿಸುತ್ತಿದ್ದರು ಎಂದು ಎನ್​ಐಎ ವಕ್ತಾರರು ಮಾಹಿತಿ ನೀಡಿದ್ದಾರೆ.


ಕೇರಳದ ಎರ್ನಾಕುಲಂನಲ್ಲಿ ಬಂಧಿತರಾದವರನ್ನು ಮುರ್ಷಿದ್ ಹಸನ್, ಇಲಾಕುಕ್ ಬಿಸ್ವಾಸ್ ಮತ್ತು ಮುಸರಫ್ ಹುಸೇನ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಲ್ಲಿ ಬಂಧಿತರಾದವರನ್ನು ನಜ್ಮುಸ್ ಸಾಕಿಬ್, ಅಬು ಸುಫಿಯಾನ್, ಮೈಮುಲ್ ಮೊಂಡಲ್, ಲ್ಯೂ ಯೀನ್ ಅಹ್ಮದ್, ಅಲ್ ಮಾಮುಮ್ ಕಮಲ್, ಅತೀತುರ್ ರೆಹ್ಮಾನ್ ಎಂದೆನ್ನಲಾಗಿದೆ.


“ಭಾರತದ ಪ್ರಮುಖ ನೆಲೆಗಳ ಮೇಲೆ ಭಯೋತ್ಪಾದಕ ದಾಳಿಗಳನ್ನ ನಡೆಸಲು ಈ ಗುಂಪು ಯೋಜಿಸಿತ್ತು. ಅಮಾಯನಕ ಜನರನ್ನು ಕೊಂದು ಜನರ ಮನಸಲ್ಲಿ ಭಯ ಹುಟ್ಟಿಸುವ ಗುರಿ ಹೊಂದಿತ್ತು” ಎಂದು ಎನ್​ಐಎ ವಕ್ತಾರರು ಹೇಳಿದ್ದಾರೆ.


ಇದನ್ನೂ ಓದಿ: ಶೋಪಿಯಾನ್ ಎನ್​ಕೌಂಟರ್ ನಕಲಿ; ಎಎಫ್ಎಸ್​ಪಿ ಕಾಯ್ದೆ ಉಲ್ಲಂಘನೆ; ಶಿಸ್ತಿನ ಕ್ರಮಕ್ಕೆ ಸೇನೆ ಮುಂದು


ರೇಡ್ ಮಾಡಿದ ಸ್ಥಳದಲ್ಲಿ ಮಾರಕ ಆಯುಧಗಳು, ನಾಡಬಂದೂಕುಗಳು, ಜಿಹಾದಿ ಪುಸ್ತಕಗಳು, ಡಿಜಿಟಲ್ ಸಾಧನಗಳು, ದೇಹ ರಕ್ಷಾ ಕವಚಗಳು, ಸ್ಫೋಟಕ ಸಾಧನಗಳು ಪತ್ತೆಯಾಗಿದ್ದು ವಶಪಡಿಸಿಕೊಳ್ಳಲಾಗಿದೆ.


“ಪಾಕ್ ಮೂಲದ ಅಲ್ ಖೈದಾ ಉಗ್ರರು ಈ ವ್ಯಕ್ತಿಗಳನ್ನ ಸೋಷಿಯಲ್ ಮೀಡಿಯಾ ಮುಖಾಂತರ ಸೆಳೆದುಕೊಂಡು ದೆಹಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿಗಳನ್ನ ನಡೆಸಲು ಪ್ರಚೋದನೆ ನೀಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.


ಈ ಅಲ್ ಖೈದಾ ಟೆರರ್ ಮಾಡ್ಯೂಲ್ ಹಣ ಸಂಗ್ರಹಣೆಯಲ್ಲಿ ನಿರತವಾಗಿತ್ತು. ಈ ಗುಂಪಿನ ಕೆಲ ಸದಸ್ಯರು ದೆಹಲಿಗೆ ಹೋಗಿ ಮದ್ದು ಗುಂಡುಗಳನ್ನ ಪಡೆಯಲು ಯೋಜಿಸಿದ್ದರು.


ಈಗ ಬಂಧಿತ ಮಂದಿಯನ್ನು ಸ್ಥಳೀಯ ನ್ಯಾಯಾಲಯಗಳಲ್ಲಿ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಇನ್ನಷ್ಟು ವಿಚಾರಣೆ ನಡೆಸುವ ಸಾಧ್ಯತೆ ಇದೆ.

First published: