ನೇಪ್ಯಿಡಾವ್; ಮಯನ್ಮಾರ್ನ ಮಿಲಿಟರಿ ಪಡೆ ಅಲ್ಲಿನ ಆಡಳಿತ ಪಕ್ಷದ ನಾಯಕಿ ಅಂಗ್ ಸಾನ್ ಸೂಕಿ ಮತ್ತು ರಾಷ್ಟ್ರದ ಅಧ್ಯಕ್ಷರನ್ನು ಬಂಧಿಸಿದೆ ಎಂದು ಸೂಕಿ ಪಕ್ಷದ ವಕ್ತಾರ ಸೋಮವಾರ ಹೇಳಿದ್ದಾರೆ. ದೇಶದಲ್ಲಿ ಒಂದು ವರ್ಷ ರಾಜ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಅಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್ಡಿ) ಪಕ್ಷ ಚುನಾವನೆಯಲ್ಲಿ ಸುಲಭವಾಗಿ ಜಯಗಳಿಸಿತ್ತು. ಆದರೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಅಲ್ಲಿನ ಸೇನೆ ಕಳೆದ ವಾರ ಆರೋಪ ಮಾಡಿತ್ತು.
ಅಂಗಸಾನ್ ಸೂಕಿ ಮತ್ತು ಅಧ್ಯಕ್ಷ ವಿನ್ ಮೈಂಟ್ ಅವರನ್ನು ರಾಜಧಾನಿ ನೇಪ್ಯಿಡಾವ್ನಲ್ಲಿ ಬಂಧಿಸಲಾಗಿದೆ ಎಂದು ಎನ್ಎಲ್ಡಿ ಪಕ್ಷದ ವಕ್ತಾರ ಮೈಯೋ ನ್ಯೂಂಟ್ ಅವರು ತಿಳಿಸಿದ್ದಾರೆ.
ಮಿಲಿಟರಿ ದಂಗೆಯ ಆರೋಪವನ್ನು ಅಲ್ಲಿನ ಸೇನೆ ತಳ್ಳಿ ಹಾಕಿದೆ. ಆದರೆ ಆಡಳಿತ ಪಕ್ಷವು ನವೆಂಬರ್ ಚುನಾವಣೆಯಲ್ಲಿ ಭರ್ಜರಿ ಜಯವನ್ನು ಘೋಷಿಸಿದಾಗಿನಿಂದ ದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಅಲ್ಲಿನ ಮಿಲಟರಿ ಆರೋಪಿಸಿದೆ. ಇದೇ ಕಾರಣಕ್ಕೆ ಇದೀಗ ಇಲ್ಲಿನ ಸೇನೆ ಸರಕಾರವನ್ನು ಉರುಳಿಸಲು ಮುಂದಾಗಿದೆ ಎನ್ನಲಾಗಿದೆ.
ಇದನ್ನು ಓದಿ: Budget 2021: ನಿರ್ಮಲಾ ಸೀತಾರಾಮನ್ 3ನೇ ಬಾರಿ ಪೂರ್ಣಾವಧಿ ಬಜೆಟ್ ಮಂಡಿಸುವ ಮುನ್ನ ನೀವು ತಿಳಿದಿರಬೇಕಾದ ಅಂಶ
ಮಯನ್ಮಾರ್ನಲ್ಲಿ ಹೊಸದಾಗಿ ಚುನಾಯಿತವಾದ ಸಂಸತ್ತು ಫೆಬ್ರವರಿ 1 ರಂದು ನಾಯ್ಪಿಟಾವ್ನಲ್ಲಿ ತನ್ನ ಮೊದಲ ಅಧಿವೇಶನಕ್ಕೆ ಸಭೆ ಸೇರುವ ನಿರೀಕ್ಷೆಯಿತ್ತು. ಈ ನಡುವೆ ಈ ಘಟನೆ ನಡೆದಿದೆ. ಅಲ್ಲದೆ ಕಳೆದ ಕೆಲವು ದಿನಗಳಿಂದ ಮಯನ್ಮಾರ್ ರಾಜಧಾನಿ ಸೇರಿ ಪ್ರಮುಖ ನಗರಗಳಲ್ಲಿ ಸೇನೆಯ ಓಡಾಟ ಇತ್ತು, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ