• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mumbai Rains: ಮುಂಬೈನಲ್ಲಿ ಮಳೆಯಿಂದ ಆ್ಯಂಬುಲೆನ್ಸ್​ಗೆ​ ಕಾಯುತ್ತಲೇ ಪ್ರಾಣಬಿಟ್ಟ ಕ್ಯಾನ್ಸರ್​ ರೋಗಿ!

Mumbai Rains: ಮುಂಬೈನಲ್ಲಿ ಮಳೆಯಿಂದ ಆ್ಯಂಬುಲೆನ್ಸ್​ಗೆ​ ಕಾಯುತ್ತಲೇ ಪ್ರಾಣಬಿಟ್ಟ ಕ್ಯಾನ್ಸರ್​ ರೋಗಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿತ್ತು. ಈ ವೇಳೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕ್ಯಾನ್ಸರ್ ರೋಗಿ ರಾಮ ಅವತಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್​ಗೆ ಫೋನ್ ಮಾಡಲಾಯಿತು. ಆದರೆ, ಮಳೆಯಿಂದ ಯಾವ ಆ್ಯಂಬುಲೆನ್ಸ್​ನವರೂ ಬರಲು ಒಪ್ಪಲಿಲ್ಲ.

ಮುಂದೆ ಓದಿ ...
  • Share this:

ಮುಂಬೈ (ಸೆ. 25): ಭಾರೀ ಮಳೆಯಿಂದ ಮಹಾರಾಷ್ಟ್ರದ ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಮೂರ್ನಾಲ್ಕು ದಿನಗಳಿಂದ ಮುಂಬೈನಲ್ಲಿ ಎಲ್ಲೆಂದರಲ್ಲಿ ಮಳೆನೀರು ನಿಂತಿದೆ. ಮಳೆ ನೀರಿನಿಂದ ರಸ್ತೆಗಳಲ್ಲಿ ನೀರು ತುಂಬಿ, ವಾಹನಗಳು ಸಂಚರಿಸದಂತೆ ಆಗಿತ್ತು. ಈ ವೇಳೆ 56 ವರ್ಷದ ಕ್ಯಾನ್ಸರ್​ ರೋಗಿಯೊಬ್ಬರಿಗೆ ಆಕ್ಸಿಜನ್ ಸಮಸ್ಯೆಯಿಂದ ಆರೋಗ್ಯಸ್ಥಿತಿ ಗಂಭೀರವಾಗಿತ್ತು. ಈ ವೇಳೆ ಆ್ಯಂಬುಲೆನ್ಸ್​ಗೆ ಫೋನ್ ಮಾಡಿದಾಗ ಭಾರೀ ಮಳೆಯಿಂದ ಆ್ಯಂಬುಲೆನ್ಸ್​ಗೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ಆ ರೋಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿತ್ತು. ವಾಹನಗಳು ಮುಳುಗುವಷ್ಟು ನೀರು ನಿಂತಿದ್ದರಿಂದ ಜನಸಂಚಾರಕ್ಕೆ ಸಮಸ್ಯೆಯಾಗಿತ್ತು. ಇದರಿಂದ ಕ್ಯಾನ್ಸರ್ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಆ್ಯಂಬುಲೆನ್ಸ್​ಗೆ ಕಾಯುತ್ತಾ ಕುಳಿತಿದ್ದ 56 ವರ್ಷದ ಕ್ಯಾನ್ಸರ್ ರೋಗಿ ರಾಮ ಅವತಾರ್ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.  ಸಾವನ್ನಪ್ಪಿ ಹಲವು ಗಂಟೆಗಳ ಬಳಿಕ ಅವರ ದೇಹವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.


ರಾಮ ಅವತಾರ್​ 4ನೇ ಹಂತದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಕಳೆದ ಡಿಸೆಂಬರ್​ನಿಂದ ಅವರು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದರು. ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್​ನಿಂದ ಅವರು ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ಈಗಾಗಲೇ 9 ಕೀಮೋಥೆರಪಿ ಸೆಷನ್​ಗಳನ್ನು ಪಡೆದಿದ್ದ ಅವರು ಸೆಪ್ಟೆಂಬರ್​ 30ರಂದು ಮತ್ತೊಂದು ಸೆಷನ್​ಗೆ ದಾಖಲಾಗಬೇಕಾಗಿತ್ತು. ಆದರೆ, ಬುಧವಾರ ಬೆಳಗಿನ ಜಾವ 2 ಗಂಟೆಗೆ ಅವರಿಗೆ ತೀವ್ರ ಉಸಿರಾಟದ ತೊಂದರೆ ಎದುರಾಗಿತ್ತು.


ವೈದ್ಯರಿಗೆ ಫೋನ್ ಮಾಡಿದಾಗ ಅವರು ತಕ್ಷಣ ರಾಮ ಅವತಾರ್ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ಹೀಗಾಗಿ, ಆ್ಯಂಬುಲೆನ್ಸ್​ ಫೋನ್ ಮಾಡಲಾಗಿತ್ತು. ಆದರೆ, ಯಾವ ಆ್ಯಂಬುಲೆನ್ಸ್​ನವರೂ ಮಳೆಯಲ್ಲಿ ಬರಲು ಒಪ್ಪಲಿಲ್ಲ. ಕೊನೆಗೆ ಒಂದು ಆ್ಯಂಬುಲೆನ್ಸ್​ನವರು ಬರಲು ಒಪ್ಪಿದರೂ ಸಂಜೆಯಿಂದ ಸುರಿದ ಭಾರೀ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿ, ಆ್ಯಂಬುಲೆನ್ಸ್​ ವಾಹನಕ್ಕೆ ಬರಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಉಸಿರಾಟದ ತೊಂದರೆಯಿಂದ ರಾಮ ಅವತಾರ್ ಅವರು ಪ್ರಜ್ಞೆ ತಪ್ಪಿದ್ದರು. ಎರಡು ಗಂಟೆ ಆ್ಯಂಬುಲೆನ್ಸ್​ಗೆ ಕಾದ ರಾಮ ಅವತಾರ್​ ಅವರು ಪ್ರಾಣ ಬಿಟ್ಟರು.


ಬಳಿಕ, ರಾಮ ಅವತಾರ್ ಅವರ ದೇಹವನ್ನು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡುವಂತೆ ಆಸ್ಪತ್ರೆಗೆ, ಪೊಲೀಸ್ ಠಾಣೆಗೆ ಫೋನ್ ಮಾಡಲಾಯಿತು. ಆದರೆ, ಪೊಲೀಸಿನವರಿಗೂ ವಾಹನವನ್ನು ಕಳುಹಿಸಲು ಸಾಧ್ಯವಾಗಲಿಲ್ಲ. ಆ ದಿನ ಮಧ್ಯಾಹ್ನದ ವೇಳೆಗೆ ರಾಮ ಅವತಾರ್ ಅವರ ದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.

top videos
    First published: