• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Narendra Modi: ಎಂಎಸ್​ಪಿ ಇತ್ತು, ಇದೆ, ಮುಂದೆಯೂ ಇರಲಿದೆ; ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ

Narendra Modi: ಎಂಎಸ್​ಪಿ ಇತ್ತು, ಇದೆ, ಮುಂದೆಯೂ ಇರಲಿದೆ; ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ

ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ

ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ

MSP ಈ ಹಿಂದೆ ಇತ್ತು. ಇಂದೂ ಇದೆ ಭವಿಷ್ಯದಲ್ಲೂ ಇರಲಿದೆ ಎಂದು ಹೇಳುವ ಮೂಲಕ ನಿರ್ದಿಷ್ಟ ಬೆಳೆಗಳಿಗೆ ಮಾರುಕಟ್ಟೆ ದರಗಳಿಂದ ನಿಗದಿಪಡಿಸಿದ ಪೂರ್ವ ನಿರ್ಧರಿತ ಬೆಲೆಯನ್ನು ರೈತರಿಗೆ ಖಾತರಿಪಡಿಸುವ ಯೋಜನೆಯ ಭವಿಷ್ಯದ ಬಗ್ಗೆ ಎಲ್ಲಾ ಅನುಮಾನಗಳನ್ನು ಪ್ರಧಾನಿ ಮೋದಿ ನೀಗಿಸಿದರು.

  • Share this:

ನವ ದೆಹಲಿ (ಫೆಬ್ರವರಿ 08); "ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯಿಂದಾಗಿ MSP ಕನಿಷ್ಠ ಬೆಂಬಲ ಬೆಲೆ ಕಾನೂನು ತೆರೆಮರೆಯ ಸರಿಯಲಿದೆ. ಕೃಷಿಯಲ್ಲಿನ ಹೊಸ ಸುಧಾರಣೆಗಳು ರೈತರ ಅಂತ್ಯಕ್ಕೆ ಕಾರಣವಾಗಬಹು ಎಂಬ ಆತಂಕ ರೈತರಲ್ಲಿದೆ. ಆದರೆ, ಈ ಆತಂಕವನ್ನು ಬಗೆಹರಿಸಬೇಕಾದ ಕರ್ತವ್ಯ ನಮ್ಮ ಮೇಲಿದೆ. ಈ ಮೂಲಕ ನಾನು ಒಂದು ವಿಚಾರವನ್ನು ರೈತರಿಗೆ ತಿಳಿಯಪಡಿಸಲು ಇಚ್ಚಿಸುತ್ತೇನೆ. ಕನಿಷ್ಟ ಬೆಂಬಲ ಬೆಲೆ ಈ ಹಿಂದೆ ಇತ್ತು. ಈಗಲೂ ಇದೆ, ಅಲ್ಲದೆ ಮುಂದೆಯೂ ಇರಲಿದೆ" ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಇಂದು ರೈತರಿಗೆ ಭರವಸೆ ನೀಡಿದ್ದಾರೆ.  


ಈ ಕುರಿತು ಇಂದು ಸಂಸತ್​ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "MSP ಈ ಹಿಂದೆ ಇತ್ತು. ಇಂದೂ ಇದೆ ಭವಿಷ್ಯದಲ್ಲೂ ಇರಲಿದೆ ಎಂದು ಹೇಳುವ ಮೂಲಕ ನಿರ್ದಿಷ್ಟ ಬೆಳೆಗಳಿಗೆ ಮಾರುಕಟ್ಟೆ ದರಗಳಿಂದ ನಿಗದಿಪಡಿಸಿದ ಪೂರ್ವ ನಿರ್ಧರಿತ ಬೆಲೆಯನ್ನು ರೈತರಿಗೆ ಖಾತರಿಪಡಿಸುವ ಯೋಜನೆಯ ಭವಿಷ್ಯದ ಬಗ್ಗೆ ಎಲ್ಲಾ ಅನುಮಾನಗಳನ್ನು ತೆಗೆದುಹಾಕಲು ಯತ್ನಿಸಿದ್ದಾರೆ.


ತಮ್ಮ ಒಂದು ಗಂಟೆ ಅವಧಿಯ ಭಾಷಣದಲ್ಲಿ, ಪ್ರಧಾನಮಂತ್ರಿ ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳ ಅಗತ್ಯತೆಯ ಬಗ್ಗೆ ದೀರ್ಘವಾಗಿ ಮಾತನಾಡುತ್ತಾ, "ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಮತ್ತು ಮೂರು ಶಾಸನಗಳನ್ನು ರದ್ದುಗೊಳಿಸಲು ಒಪ್ಪುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ : Narendra Modi: ಕೃಷಿ ಕಾಯ್ದೆ ಬಗ್ಗೆ ಮನಮೋಹನ್ ಸಿಂಗ್ ಹೇಳಿದ್ದನ್ನೇ ನಾವು ಮಾಡಿದ್ದೇವೆ; ಕಾಂಗ್ರೆಸ್​ಗೆ ಪ್ರಧಾನಿ ಮೋದಿ ಚಾಟಿ

top videos


    ಅಲ್ಲದೆ, "ಹೊಸ ಕೃಷಿ ಕಾನೂನಿಗೆ ಸಂಬಂಧಿಸಿದಂತೆ ಚರ್ಚೆ, ಸಂವಾದ ಮತ್ತು ಸಲಹೆಗಳನ್ನು ಆಲಿಸಲು ಕೇಂದ್ರ ಸರ್ಕಾರ ಯಾವಾಗಲೂ ಮುಕ್ತವಾಗಿದೆ. ಹೀಗಾಗಿ ದೆಹಲಿ ಗಡಿಯಲ್ಲಿನ ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆ ಬನ್ನಿ" ಎಂದು ರೈತರ ಬಳಿ ಪ್ರಧಾನಿ ಮೋದಿ ಮತ್ತೊಮ್ಮೆ ಮನವಿ ಮಾಡಿದ್ದಾರೆ.


    "ರೈತರ ಜೀವನವನ್ನು ಸುಧಾರಿಸುವುದಕ್ಕಾಗಿಯೇ ಈ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಹಿಂದಿನ ಸರ್ಕಾರವೇ ಈ ಕಾನೂನನ್ನು ಜಾರಿಗೆ ತರಲು ಮುಂದಾಗಿತ್ತು. ಆದರೆ, ಈಗ ಪ್ರತಿಪಕ್ಷದಲ್ಲಿ ಕುಳಿತ ತಕ್ಷಣ ಅವರು ವಿರೋಧಿಸುತ್ತಿದ್ದಾರೆ. ಈ ಹಿಂದಿನ ಸರ್ಕಾರಗಳು ಕೈಗೊಂಡ ವಿವಿಧ ಕ್ರಮಗಳು ರೈತರ ಜೀವನವನ್ನು ಸುಧಾರಿಸುವಲ್ಲಿ ವಿಫಲವಾಗಿವೆ. ಅಲ್ಲದೆ, ಇಂದು ತಮ್ಮ ಸರ್ಕಾರದ ಪ್ರಯತ್ನಗಳಿಗೂ ತಡೆಗೋಡೆಯಾಗಿವೆ" ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.

    First published: