• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಮಾವೋವಾದಿಗಳ ಸೆರೆಯಾಳಾಗಿದ್ದಾರೆ ಸಿಆರ್​ಪಿಎಫ್ ಕಮಾಂಡೋ; ಸ್ಥಳೀಯ ಪತ್ರಕರ್ತರು ಹೇಳಿದ್ದೇನು?

ಮಾವೋವಾದಿಗಳ ಸೆರೆಯಾಳಾಗಿದ್ದಾರೆ ಸಿಆರ್​ಪಿಎಫ್ ಕಮಾಂಡೋ; ಸ್ಥಳೀಯ ಪತ್ರಕರ್ತರು ಹೇಳಿದ್ದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಛತ್ತೀಸಗಢದ ಮಾವೋಪೀಡಿತ ಬಸ್ತಾರ್ ಪ್ರದೇಶದ ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ಕಳೆದ ವಾರ ಭದ್ರತಾ ಪಡೆ ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದೆ. ಭದ್ರತಾ ಪಡೆಗಳಿಗೆ ಸೇರಿದ 22 ಮಂದಿ ಬಲಿಯಾದರೆ 12 ಮಂದಿ ಗಾಯಗೊಂಡಿದ್ಧಾರೆ. ಹಲವು ನಕ್ಸಲರು ಈ ಎನ್​ಕೌಂಟರ್​ನಲ್ಲಿ ಮೃತಪಟ್ಟಿದ್ದರು. ಇನ್ನೂ ಕೆಲ ಯೋಧರು ನಾಪತ್ತೆಯಾಗಿದೆ.

ಮುಂದೆ ಓದಿ ...
  • Share this:

    ಕಳೆದ ವಾರ ಛತ್ತೀಸಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯ ಗಡಿಯಲ್ಲಿ ಭದ್ರತಾ ಪಡೆ ಹಾಗೂ ಮಾವೋವಾದಿಗಳ ನಡುವೆ ಮಾರಕ ಎನ್​ಕೌಂಟರ್​ ನಡೆದಿತ್ತು. ಈ ದಾಳಿಯ ಬಳಿಕ ಇಬ್ಬರು ಸ್ಥಳೀಯ ಪತ್ರಕರ್ತರು ಸೋಮವಾರ ಮಾತನಾಡಿ, ಗೌಪ್ಯ ನಂಬರ್​ನಿಂದ ತಮಗೆ ಕರೆ ಬಂದಿದ್ದು, ಅವರು ಕೇಂದ್ರ  ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್​) ನ ಕಮಾಂಡೊ ಒಬ್ಬರನ್ನು ಮಾವೋವಾದಿಗಳು ಸೆರೆಯಾಳಾಗಿ ಇರಿಸಿಕೊಂಡಿರುವುದಾಗಿ ಹೇಳಿರುವುದಾಗಿ ತಿಳಿಸಿದ್ದಾರೆ.


    ಕಮಾಂಡೋ ಸುರಕ್ಷಿತವಾಗಿದ್ದಾರೆ. ಮತ್ತು ಅವರಿಗೆ ಯಾವುದೇ ತರಹದ ತೊಂದರೆಯಾಗಿಲ್ಲ ಎಂದು ಕಾಲರ್​ ಹೇಳಿದ್ದಾರೆಂದು ಪತ್ರಕರ್ತರು ತಿಳಿಸಿದ್ದಾರೆ. ತರೇಮ್ ಭಾಗದ ಕಾಡಿನಲ್ಲಿ ದಾಳಿ ವೇಳೆ ಕಮಾಂಡೋ ತಪ್ಪಿಸಿಕೊಂಡ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.


    ಶನಿವಾರ, ಕುಖ್ಯಾತ ಮಾವೋವಾದಿ ತಂಡದ ಕಮಾಂಡರ್ ಮಾದ್ವಿ ಹಿಡ್ಮಾ ನೇತೃತ್ವ ವಹಿಸಿರಬಹುದು ಎಂದು ಶಂಕಿಸಲಾಗಿರುವ 600 ಸದಸ್ಯರ ಮಾವೋವಾದಿಗಳು  ಬಲಿಷ್ಠ ತಂಡ ಭದ್ರತಾ ಪಡೆಯ ಮೇಲೆ ದಾಳಿ ನಡೆಸಿ, 22 ಭದ್ರತಾ ಸಿಬ್ಬಂದಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದರು. ಎಡಪಂಥೀಯ ಉಗ್ರವಾದಿಗಳು ನಡೆಸಿದ ಅತ್ಯಂತ ಭೀಕರ ದಾಳಿ ಇದಾಗಿದೆ.


    ಕಾಲರ್​ ತನ್ನ ಹೆಸರು ಮತ್ತು ಗುರುತನ್ನು ಹೇಳಲಿಲ್ಲ. ಕಮಾಂಡೋನನ್ನು ಎರಡು-ಮೂರು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಮಾವೋವಾದಿಗಳು ಹೇಳಿದ್ದಾಗಿ ಕಾಲರ್ ತಿಳಿಸಿದ್ದಾರೆ ಎಂದು ಕರೆ ಸ್ವೀಕರಿಸಿದ ಇಬ್ಬರು ಪತ್ರಕರ್ತರಲ್ಲಿ ಒಬ್ಬರಾದ ಗಣೇಶ್ ಮಿಶ್ರಾ ಹೇಳಿದ್ದಾರೆ. ಇವರು ಹಾಲಿ ಬಿಜಾಪುರ ಪ್ರೆಸ್ ಕ್ಲಬ್​ನ ಅಧ್ಯಕ್ಷರಾಗಿದ್ದಾರೆ.


    ಸುಕ್ಮಾದಲ್ಲಿ ನವಭಾರತ ಮಾಧ್ಯಮ ಸಂಸ್ಥೆಯಲ್ಲಿ ಪತ್ರಕರ್ತರಾಗಿರುವ ರಾಜಾ ಸಿಂಗ್ ರಾಥೋರ್ ಅವರು ಸಹ ಕರೆ ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಆದರೆ, ತಮಗೆ ಕರೆ ಮಾಡಿದವರು ತಮ್ಮನ್ನು ಹಿಡ್ಮಾ ಎಂದು ಗುರುತಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ತಪ್ಪಿಸಿಕೊಂಡಿರುವ ಸೈನಿಕ ತಮ್ಮ ವಶದಲ್ಲಿದ್ದಾರೆ ಇದ್ದಾರೆ. ಮತ್ತು ಅವರು ಸುರಕ್ಷಿತವಾಗಿದ್ದಾರೆ. ಸೈನಿಕನ ಮಾಹಿತಿ ಹಾಗೂ ಫೋಟೋಗಳನ್ನು ಶೀಘ್ರದಲ್ಲಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾಗಿ ರಾಥೋರ್ ಹೇಳಿದ್ದಾರೆ.


    ಇದನ್ನು ಓದಿ: Naxal Encounter - ಛತ್ತೀಸ್​​ಗಡ ನಕ್ಸಲ್ ದಾಳಿ: ಭದ್ರತಾ ಪಡೆಯ 22 ಮಂದಿ ಬಲಿ – ಒಬ್ಬ ಯೋಧ ಇನ್ನೂ ನಾಪತ್ತೆ


    ಛತ್ತೀಸಗಢದ ಮಾವೋಪೀಡಿತ ಬಸ್ತಾರ್ ಪ್ರದೇಶದ ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ಕಳೆದ ವಾರ ಭದ್ರತಾ ಪಡೆ ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದೆ. ಭದ್ರತಾ ಪಡೆಗಳಿಗೆ ಸೇರಿದ 22 ಮಂದಿ ಬಲಿಯಾದರೆ 12 ಮಂದಿ ಗಾಯಗೊಂಡಿದ್ಧಾರೆ. ಹಲವು ನಕ್ಸಲರು ಈ ಎನ್​ಕೌಂಟರ್​ನಲ್ಲಿ ಮೃತಪಟ್ಟಿದ್ದರು. ಇನ್ನೂ ಕೆಲ ಯೋಧರು ನಾಪತ್ತೆಯಾಗಿದೆ.


    ಎನ್​ಕೌಂಟರ್ ಘಟನೆಯಲ್ಲಿ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಅದಾದ ಬಳಿಕ ಸಿಆರ್​ಪಿಎಫ್​ನ 7 ಮಂದಿ ಯೋಧರು ಸೇರಿ 21 ಮಂದಿ ಕಾಣೆಯಾಗಿದ್ದರೆನ್ನಲಾಗಿದೆ. “ಇವರನ್ನು ಹುಡುಕಲು ವಿವಿಧ ತಂಡಗಳನ್ನ ಕಳುಹಿಸಲಾಗಿದೆ” ಎಂದು ಛತ್ತೀಸ್​ಗಡದ ಪೊಲೀಸ್ ಮಹಾನಿರ್ದೇಶಕ ಡಿಎಂ ಅವಾಸ್ತಿ ತಿಳಿಸಿದ್ದಾರೆ. ಸಿಎಆರ್​ಪಿಎಫ್​ನ ಮಹಾನಿರ್ದೇಶಕ ಕುಲದೀಪ್ ಸಿಂಗ್ ಕೂಡ ತಮ್ಮ ಪಡೆಯ ಏಳು ಮಂದಿ ಸೈನಿಕರು ನಾಪತ್ತೆಯಾಗಿರುವ ಸಂಗತಿಯನ್ನು ಖಚಿತಪಡಿಸಿದ್ದಾರೆ. ಏಳು ಸಿಆರ್​ಪಿಎಫ್ ಯೋಧರು ಬಿಟ್ಟರೆ ನಾಪತ್ತೆಯಾಗಿದ್ದ ಉಳಿದ 14 ಮಂದಿ ಸಿಬ್ಬಂದಿ ಛತ್ತೀಸಗಢ ರಾಜ್ಯದ ಮೀಸಲು ಪಡೆ ಮತ್ತು ವಿಶೇಷ ಕಾರ್ಯಪಡೆಗೆ ಸೇರಿದವರಾಗಿದ್ದಾರೆ. ಈಗ ಇವರಲ್ಲಿ ಬಹುತೇಕರು ಸಾವನ್ನಪ್ಪಿದ್ದಾರೆ.

    Published by:HR Ramesh
    First published: