• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಬುಡಕಟ್ಟು ಜನರಿಗಾಗಿ ಧ್ವನಿ ಎತ್ತಿದ ಮೆಹಬೂಬಾ ಮುಫ್ತಿ; ಕಳೆದ 15 ದಿನಗಳಲ್ಲಿ 3 ಬಾರಿ ಗೃಹ ಬಂಧನಕ್ಕೊಳಪಡಿಸಿದ ಕೇಂದ್ರ

ಬುಡಕಟ್ಟು ಜನರಿಗಾಗಿ ಧ್ವನಿ ಎತ್ತಿದ ಮೆಹಬೂಬಾ ಮುಫ್ತಿ; ಕಳೆದ 15 ದಿನಗಳಲ್ಲಿ 3 ಬಾರಿ ಗೃಹ ಬಂಧನಕ್ಕೊಳಪಡಿಸಿದ ಕೇಂದ್ರ

ಮೆಹಬೂಬ ಮುಫ್ತಿ.

ಮೆಹಬೂಬ ಮುಫ್ತಿ.

ಒಂದು ಕಡೆ ಬಿಜೆಪಿ ರಾಜಕಾರಣಿಗಳಿಗೆ ಕಣಿವೆಯ ಪ್ರತಿಯೊಂದು ಮೂಲೆ ಮೂಲೆಯಲ್ಲೂ ತಮ್ಮ ಆಯ್ಕೆಯ ಪ್ರಯಾಣವನ್ನು ಕೈಗೊಳ್ಳಲು ಸಂಪೂರ್ಣ ಭದ್ರತಾ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ. ನನ್ನ ವಿಷಯಕ್ಕೆ ಬಂದರೆ, ಗೃಹಬಂಧನದಲ್ಲಿರಿಸಲಾಗುತ್ತಿದೆ ಇದು ಪ್ರಜಾಪ್ರಭುತ್ವದ ಆಶಯವೇ? ಎಂದು ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ.

ಮುಂದೆ ಓದಿ ...
  • Share this:

    ಜಮ್ಮು-ಕಾಶ್ಮೀರ (ಡಿಸೆಂಬರ್​ 09); ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೀಡುತ್ತಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ವರ್ಷ ಆಗಸ್ಟ್​ 05 ರಂದು ರದ್ದುಗೊಳಿಸಿತ್ತು. ಆದರೆ, ಶಾಂತಿ ಕಾಪಾಡುವ ಉದ್ದೇಶದಿಂದ ಅಂದಿನಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಪೀಪಲ್​ ಡೆಮಾಕ್ರಟಿಕ್​ ಪಕ್ಷದ ಮುಖ್ಯಸ್ಥೆ ಹಾಗೂ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಸತತ ಕೋರಿಕೆಯ ನಂತರ ಅವರನ್ನು ಕಳೆದ ತಿಂಗಳು ಬಿಡುಗಡೆ ಮಾಡಲಾಗಿತ್ತಾದರೂ ಕೇಂದ್ರ ಸರ್ಕಾರ ಇದೀಗ ಮತ್ತೆ ಕಳೆದ 15 ದಿನಗಳಲ್ಲಿ ಅವರನ್ನು ಮೂರು ಬಾರಿ ವಶಕ್ಕೆ ಪಡೆದು ಗೃಹ ಬಂಧನದಲ್ಲಿರಿಸಿದೆ. ಈ ಕುರಿತು ಸ್ವತಃ ಟ್ವೀಟ್ ಮಾಡಿರುವ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


    ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಬುಡಕಟ್ಟು ಜನರನ್ನು ಅರಣ್ಯ ಪ್ರದೇಶಗಳಿಂದ ಹೊರಹಾಕಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನಡೆಯಿಂದ ಬುಡಕಟ್ಟು ಸಮುದಾಯದ ಕುಟುಂಬಗಳು ಬೀದಿಗೆ ಬೀಳುವಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಮೆಹಬೂಬಾ ಮುಫ್ತಿ ಬುಡಕಟ್ಟು ಸಮುದಾಯಗಳ ಕುಟುಂಬಗಳನ್ನು ಮುಖತಃ ಭೇಟಿ ಮಾಡಿ ಅವರ ಸಮಸ್ಯೆಯನ್ನು ಆಲಿಸಿದ್ದಾರೆ. ಇದೇ ಕಾರಣಕ್ಕೆ ಇದೀಗ ಅವರನ್ನು ಅವರ ಗುಪ್ಕರ್​ ನಿವಾಸದಿಂದ ಹೊರಬರದಂತೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಹೀಗಾಗಿ ಮೆಹಬೂಬಾ ಮುಫ್ತಿ ಸರಣಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.



    ತಮ್ಮ ಟ್ವೀಟ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಮೆಹಬೂಬಾ ಮುಫ್ತಿ, "ಕಳೆದ 15 ದಿನಗಳಲ್ಲಿ ಮೂರನೇ ಬಾರಿ ನಾನು ಗೃಹ ಬಂಧನಕ್ಕೆ ಒಳಪಡುತ್ತಿದ್ದೇನೆ. ಇದು ಪ್ರಜಾಪ್ರಭುತ್ವದ ಆಶಯವೇ? ಭದ್ರತಾ ಕಾಳಜಿಯಿಂದಾಗಿ ನನ್ನ ಚಳುವಳಿಗಳಿಗೆ ಅವಕಾಶ ನೀಡಲಾಗುತ್ತಿಲ್ಲ ಎಂಬುದಾದರೆ, ಬಿಜೆಪಿ ಸಚಿವರು ಮತ್ತು ನಾಯಕರುಗಳಿಗೆ ಮಾತ್ರ ಕೇಳಿದಾಗೆಲ್ಲ ಕಾಶ್ಮೀರದಲ್ಲಿ ಮುಕ್ತವಾಗಿ ಪ್ರಚಾರ ಮಾಡುವ ಅವಕಾಶವನ್ನು ಏಕೆ ನೀಡಲಾಗುತ್ತಿದೆ?"  ಎಂದು ಪ್ರಶ್ನೆ ಮಾಡಿದ್ದಾರೆ.


    ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿಗಾಗಿ ಕೇಂದ್ರ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು: ಸುಪ್ರೀಂ‌ ಆದೇಶ


    "ಒಂದು ಕಡೆ ಬಿಜೆಪಿ ರಾಜಕಾರಣಿಗಳಿಗೆ ಕಣಿವೆಯ ಪ್ರತಿಯೊಂದು ಮೂಲೆ ಮೂಲೆಯಲ್ಲೂ ತಮ್ಮ ಆಯ್ಕೆಯ ಪ್ರಯಾಣವನ್ನು ಕೈಗೊಳ್ಳಲು ಸಂಪೂರ್ಣ ಭದ್ರತಾ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ. ನನ್ನ ವಿಷಯಕ್ಕೆ ಬಂದರೆ, ಗೃಹಬಂಧನದಲ್ಲಿರಿಸಲಾಗುತ್ತಿದೆ. ಪ್ರಶ್ನೆ ಮಾಡಿದರೆ ಉನ್ನತ ಅಧಿಕಾರಿಗಳಿಂದ ಆದೇಶವಾಗಿದೆ ಎನ್ನುತ್ತಾರೆ" ಎಂದು ಮೆಹಬೂಬಾ ಮುಫ್ತಿ ಅಸಮಾಧಾನ ಹೊರಹಾಕಿದ್ದಾರೆ.


    ಕಣಿವೆ ರಾಜ್ಯದ ಅರಣ್ಯ ಪ್ರದೇಶಗಳಿಂದ ಸಾಂಪ್ರದಾಯಿಕ ಬುಡ್ಗಾ ಬುಡಕಟ್ಟು ಜನ ಸಮುದಾಯವನ್ನು ಹೊರಹಾಕುವ ಬಗ್ಗೆ ಮೆಹಬೂಬಾ ಮುಫ್ತಿ ಬಹಳ ದಿನಗಳಿಂದ ಧ್ವನಿ ಎತ್ತುತ್ತಿದ್ದಾರೆ. ಈ ಸಮುದಾಯಗಳು ಆ ಸ್ಥಳಗಳಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿವೆ. ಈ ಕುಟುಂಬಗಳನ್ನು ಭೇಟಿ ಮಾಡಲು ಮೆಹಬೂಬಾಇತ್ತೀಚೆಗೆ ಪಹಲ್ಗಾಂಗೆ ಭೇಟಿ ನೀಡಿದರು. ಅಲ್ಲದೆ, ಕಾನೂನುಬಾಹಿರ ಅತಿಕ್ರಮಣಗಳೆಂದು ಉಲ್ಲೇಖಿಸಿ ಈ ಬುಡಕಟ್ಟು ಜನರನ್ನು ಹೊರಹಾಕುವ ಕೇಂದ್ರ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದೇ ಕಾರಣಕ್ಕೆ ಪ್ರಸ್ತುತ ಅವರನ್ನು ಗೃಹ ಬಂಧನದಲ್ಲಿಡಲಾಗಿದೆ ಎಂದು ಹೇಳಲಾಗುತ್ತಿದೆ.

    Published by:MAshok Kumar
    First published: