• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Union Budget 2021: ಬಜೆಟ್​ ಪ್ರತಿ ಇಲ್ಲ, ಹಲ್ವಾ ಸಂಭ್ರಮವಿಲ್ಲ; ಈ ಬಾರಿ ಹಲವು ವಿಶೇಷತೆಗಳನ್ನು ಹೊಂದಿರಲಿದೆ ಬಜೆಟ್​​

Union Budget 2021: ಬಜೆಟ್​ ಪ್ರತಿ ಇಲ್ಲ, ಹಲ್ವಾ ಸಂಭ್ರಮವಿಲ್ಲ; ಈ ಬಾರಿ ಹಲವು ವಿಶೇಷತೆಗಳನ್ನು ಹೊಂದಿರಲಿದೆ ಬಜೆಟ್​​

ಸಂಸತ್ತು

ಸಂಸತ್ತು

ಬಜೆಟ್​ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿರುವ ಹಲ್ವಾ (ಸಿಹಿ ಖಾದ್ಯ) ಸಮಾರಂಭ ಈ ಬಾರಿ ನಡೆಯುವುದಿಲ್ಲ.

  • Share this:

    ನವದೆಹಲಿ (ಜ. 19): ಕೋವಿಡ್​ ಮುನ್ನೆಚ್ಚರಿಕೆಯೊಂದಿಗೆ ಇದೇ ಜ. 29ರಂದು ಸಂಸತ್​ ಅಧಿವೇಶನ ಶುರುವಾಗಲಿದ್ದು, ಫೆ. 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡಿಸಲಿದ್ದಾರೆ. ಸಂಸತ್​ ಸದಸ್ಯರಿಗೆ ಕೋವಿಡ್​ ಪರೀಕ್ಷೆ ಕಡ್ಡಾಯವಾಗಿದ್ದು, ಸಾಮಾಜಿಕ ಅಂತರ ಕಾಪಾಡುವುದು ಅತ್ಯವಶ್ಯಕವಾಗಿದೆ. ಆರ್ಥಿಕತೆ ಮೇಲೆ ಈಗಾಗಲೇ ಸಾಕಷ್ಟು ಹೊಡೆತವನ್ನು ಕೊರೋನಾ ತಂದೊಡ್ಡಿದೆ. ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಮಂಡಿಸಲಾಗುತ್ತಿರುವ ಈ ಬಾರಿಯ ಬಜೆಟ್​ನಲ್ಲಿ ಅನೇಕ ವಿಷಯಗಳಲ್ಲಿ ಮಾರ್ಪಾಡು ಮಾಡಲಾಗಿದೆ.


    ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್​


    ಸ್ವಾತಂತ್ರ್ಯ ಬಂದಾಗಿನಿಂದಲೂ ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್​ ಮಂಡಿಸಲಾಗುತ್ತಿದೆ. ಪ್ರತಿ ವರ್ಷ ಕೇಂದ್ರ ಬಜೆಟ್​ ಅನ್ನು ಹಣಕಾಸು ಸಚಿವಾಲಯದ ಆಂತರಿಕ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತಿತ್ತು. ಈ ಬಜೆಟ್​ ಪ್ರತಿ ಮುದ್ರಿಸುವ ಹದಿನೈದು ದಿನಗಳ ಈ ಕಾರ್ಯದಲ್ಲಿ ಸುಮಾರು 100 ಉದ್ಯೋಗಿಗಳು ಭಾಗಿಯಾಗುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಬಜೆಟ್​ ಪ್ರತಿಯನ್ನು ಸರ್ಕಾರ ಮುದ್ರಿಸಿಲ್ಲ. ಕೋವಿಡ್​ ಹಿನ್ನಲೆಯಲ್ಲಿ ಬಜೆಟ್​ ಮುದ್ರಣಕ್ಕೆ ತಡೆ ನೀಡಲಾಗಿದೆ. ಬಜೆಟ್​ ಮಂಡನೆ ವೇಳೆ ಕೂಡ ಸಂಸದರಿಗೆ ಹಾರ್ಡ್​ ಕಾಪಿ ಬದಲು ಸಾಫ್ಟ್​ ಕಾಪಿ ನೀಡಲು ನಿರ್ಧರಿಸಲಾಗಿದೆ.


    ಎರಡು ಭಾಗದಲ್ಲಿ ಬಜೆಟ್​


    ಕೇಂದ್ರ ಬಜೆಟ್​ ಅನ್ನು ಫೆ. 1ರಂದು ನಿರ್ಮಲಾ ಸೀತಾರಾಮನ್​ ಮಂಡಿಸಲಿದ್ದಾರೆ. ಬಜೆಟ್​ನ ಮೊದಲ ಸೆಷನ್​ ಜನವರಿ 29ರಿಮದ ಫೆ. 15ರವರೆಗೆ ನಡೆಯಲಿದೆ. ಎರಡನೇ ಅಧಿವೇಶನ ಮಾರ್ಚ್​ 8ರಿಂದ ಎಪ್ರಿಲ್​ 8ರವರೆಗೆ ನಡೆಯಲಿದೆ.


    ಹಲ್ವಾ ಕಾರ್ಯಕ್ರಮವಿಲ್ಲ


    ಬಜೆಟ್​ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿರುವ ಹಲ್ವಾ (ಸಿಹಿ ಖಾದ್ಯ) ಸಮಾರಂಭ ಈ ಬಾರಿ ನಡೆಯುವುದಿಲ್ಲ. ಬಜೆಟ್​ ಮುದ್ರಣ ಸಂದರ್ಭದಲ್ಲಿ ಬಜೆಟ್​ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಸಿಬ್ಬಂದಿಗಳಿಗೆ ಸಿಹಿ ಖಾದ್ಯ ವಿತರಿಸಲಾಗುತ್ತದೆ. ಈ ಬಾರಿ ಈ ಸಿಹಿ ಹಂಚುವ ಸಂಭ್ರಮವಿರುವುದಿಲ್ಲ.


    ಟ್ರಕ್​ಗಳು ಕಾಣಸಿಗದು


    ಬಜೆಟ್​ ದಿನದಂದು ಸಾಮಾನ್ಯವಾಗಿ ಸಂಸತ್ತಿನ ಮುಂದೆ ಬಜೆಟ್​ ಪ್ರತಿ ಹೊತ್ತ ಟ್ರಕ್​ಗಳು ಕಂಡು ಬರುತ್ತವೆ. ಆದರೆ, ಈ ಬಾರಿ ಈ ಟ್ರಕ್​ಗಳು ಕಂಡು ಬರುವುದಿಲ್ಲ. ಅಷ್ಟೇ ಅಲ್ಲದೇ ಈ ಬಜೆಟ್​ ಹೊತ್ತ ಬ್ರಿಫ್ಕೇಸ್​ ಹಿಡಿಯುವ ಸಂಪ್ರಾದಾಯ ಕೂಡ ಕಾಣಸಿಗದು.


    ಸಾಮಾಜಿಕ ಅಂತರ


    ಕೋವಿಡ್​ ಮಾರ್ಗಸೂಚಿಗಳು ಇನ್ನು ಜಾರಿಯಲ್ಲಿರುವ ಹಿನ್ನಲೆ ಸಾಮಾಜಿಕ ಅಂತರದಂತಹ ಸುರಕ್ಷತಾ ನಿಯಮವನ್ನು ಕಾಪಾಡಲಾಗುವುದು. ಮೊದಲ ಬಾರಿಗೆ ಸಂಸತ್​ ಸದಸ್ಯರು ಮೂರು ವಿಭಿನ್ನ ಸ್ಥಳಗಳಲ್ಲಿ ಕೂರಲಿದ್ದಾರೆ. ಜಂಟಿ ಅಧಿವೇಶನ ಸಂದರ್ಭದಲ್ಲಿ ಒಟ್ಟಾಗಿ ಕುಳಿತುಕೊಳ್ಳುತ್ತಿದ್ದ ಸದಸ್ಯರು ಈಗ ಲೋಕಸಭಾ , ರಾಜ್ಯಸಭಾ ಕೊಠಡಿಗಳಲ್ಲಿ ಕೂರಲಿದ್ದಾರೆ, ಸೆಂಟ್ರಲ್​ ಹಾಲ್​ನಿಂದ ರಾಷ್ಟ್ರಪತಿಗಳು ಭಾಷಣ ನಡೆಸಲಿದ್ದಾರೆ.

    Published by:Seema R
    First published: