• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mann Ki Baat 100: ಕನ್ನಡಿಗರು, ಕರುನಾಡ ಸಾಧಕರ ಬಗ್ಗೆ ಮೋದಿ ಮುಕ್ತ ಮಾತು, 'ಮನ್‌ ಕಿ ಬಾತ್' ಎಲ್ಲಾ ಸಂಚಿಕೆಗಳ ವಿವರ ಇಲ್ಲಿದೆ

Mann Ki Baat 100: ಕನ್ನಡಿಗರು, ಕರುನಾಡ ಸಾಧಕರ ಬಗ್ಗೆ ಮೋದಿ ಮುಕ್ತ ಮಾತು, 'ಮನ್‌ ಕಿ ಬಾತ್' ಎಲ್ಲಾ ಸಂಚಿಕೆಗಳ ವಿವರ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಪಿಎಂ ಮೋದಿ ಅವರ ಮನ್​ ಕಿ ಬಾತ್ 100ನೇ ಸಂಚಿಕೆ ತಲುಪಿದೆ.​ ಕಳೆದ 99 ಸಂಚಿಕೆಗಳಲ್ಲಿ ಮೋದಿ ಅವರು ಕರ್ನಾಟಕದ (Karnataka) ಜನರ ಸಂಸ್ಕೃತಿ, ನವೀನ ಮನಸ್ಥಿತಿ ಮತ್ತು ಪ್ರಶಂಸನೀಯ ಕಾರ್ಯಗಳನ್ನು ಈ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ.

  • News18 Kannada
  • 2-MIN READ
  • Last Updated :
  • New Delhi, India
  • Share this:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ 'ಮನ್ ಕಿ ಬಾತ್' (Mann Ki Baat) ರೇಡಿಯೋ ಕಾರ್ಯಕ್ರಮ 100ನೇ ಸಂಚಿಕೆ ಪೂರ್ಣ ಗೊಳಿಸುತ್ತಿದೆ. ಕಳೆದ 99 ಸಂಚಿಕೆಗಳಲ್ಲಿ ಕರ್ನಾಟಕದ (Karnataka) ಜನರ ರೋಮಾಂಚಕ ಸಂಸ್ಕೃತಿ, ನವೀನ ಮನಸ್ಥಿತಿ ಮತ್ತು ಪ್ರಶಂಸನೀಯ ಕಾರ್ಯಗಳನ್ನು ಈ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ.  ಹಲವು ಸಂಚಿಕೆಗಳಲ್ಲಿ ಮೋದಿ ಅವರು ಹೆಚ್ಚಿನ ಬಾರಿ ಕರ್ನಾಟಕದ ಸಾಧಕರನ್ನು ಗುರುತಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಂದ ಹೆಚ್ಚಿನ ಬಾರಿ ಉಲ್ಲೇಖಗಳನ್ನು ಪಡೆಯುವ ಮೂಲಕ ರಾಜ್ಯವು ಅಗ್ರ ಸ್ಥಾನ ಪಡೆದಿದೆ. ತಂತ್ರಜ್ಞಾನದಿಂದ (Technology) ಕೃಷಿಯವರೆಗೆ (Agriculture) ವಿವಿಧ ಕ್ಷೇತ್ರಗಳಲ್ಲಿ ರಾಜ್ಯದ ವಿಶಿಷ್ಟ ಪದ್ಧತಿಗಳು, ಭಾಷೆ ಮತ್ತು ಉದ್ಯಮಶೀಲತೆಯ ಗುಣಮಟ್ಟವನ್ನು ಒತ್ತಿಹೇಳುವ ಹಲವಾರು ಕಥೆಗಳನ್ನು ಅವರು ದೇಶದ ಜನತೆ ಮುಂದೆ ಹಂಚಿಕೊಂಡಿದ್ದಾರೆ.


 ಸಿರಿಧಾನ್ಯ ಉತ್ಪನ್ನ ಮಾರಾಟ ಮಾಡುವ ಮಹಿಳೆಯರ ಬಗ್ಗೆ ಮೆಚ್ಚುಗೆ


ಮನ್ ​ಕಿ ಬಾತ್​ ಸಮಯದಲ್ಲಿ, ಮೋದಿಯವರು ಬೀದರ್ ಜಿಲ್ಲೆಯ ಹುಲಸೂರು ಪಟ್ಟಣದ ಮಹಿಳಾ ಕಿಸಾನ್ ಮಿಲೆಟ್ಸ್ ಪ್ರೋಡೂಸರ್ ಕಂಪನಿ ಲಿಮಿಟೆಡ್ (ಹುಲಸೂರು ಸಿರಿಧ್ಯಾನ ಕಂಪನಿ) ಬಗ್ಗೆ ಮನ್ ಕಿ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ಸುಮಾರು ನಾಲ್ಕು ಜನ ಯುವಕರು ಸೇರಿಕೊಂಡು ಆರಂಭಿಸಿದ ಈ ಸಂಸ್ಥೆಯಲ್ಲಿ 308 ಮಹಿಳಾ ಷೇರುದಾರರಿದ್ದಾರೆ. 63 ಜನ ಸಣ್ಣ ರೈತರು, 30 ಮಹಿಳಾ ರೈತರಿದ್ದು ಈ ರೈತರು ಬೆಳೆದ ಸಿರಿಧಾನ್ಯವನ್ನ ಕೊಂಡು ಅದನ್ನ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ವಿವರ ನೀಡಿದ್ದ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.


ಬಾಳೆಹಿಟ್ಟಿನ ದೋಸೆ ಬಗ್ಗೆ ಗುಣಗಾನ


ಕೋವಿಡ್-19 ಸಾಂಕ್ರಾಮಿಕದ ಮಧ್ಯೆ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಉದ್ಯಮಶೀಲ ಮಹಿಳೆಯರು ಬಾಳೆ ಹಿಟ್ಟಿನಿಂದ ದೋಸೆ, ಗುಲಾಬ್ ಜಾಮೂನ್ ಮತ್ತು ವಿವಿಧ ಭಕ್ಷ್ಯಗಳನ್ನು ತಯಾರಿಸುವ ವಿಶಿಷ್ಟ ಸಾಹಸವನ್ನು ಪ್ರಾರಂಭಿಸಿದ್ದರು. ಈ ಬೆಳೆವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ನಲ್ಲಿ ಗುರುತಿಸಿ, ಶ್ಲಾಘನೆ ವ್ಯಕ್ತಪಡಿಸಿದ್ದರು


ಹಲವಾರು ಸಾಧಕರ ಬಗ್ಗೆ ದೇಶಕ್ಕೆ ಪರಿಚಯಿಸಿದ ಪ್ರಧಾನ ಮಂತ್ರಿ ಅವರ ಮನ್​ ಕಿ ಬಾತ್​ ಕಾರ್ಯ 100ನೇ ಸಂಚಿಕೆಗೆ ಕಾಲಿಟ್ಟಿದೆ. ಹಿಂದಿನ 99 ಸಂಚಿಕೆಯಲ್ಲಿ ಕರ್ನಾಟಕ ಮತ್ತು ಇಲ್ಲಿನ ಸಾಧಕರ ಬಗ್ಗೆ ಮಾತನಾಡಿದ ಕೆಲವು ನಿದರ್ಶನಗಳು ಇಲ್ಲಿವೆ.


ಇದನ್ನೂ ಓದಿ:Mann Ki Baat: ಮೋದಿ 'ಮನ್​ ಕಿ ಬಾತ್' 100ನೇ ಸಂಚಿಕೆ ಇಡೀ ಜಗತ್ತೇ ಕೇಳಲಿದೆ! ಇದರ ಹಿಂದಿದೆ ಮಾಸ್ಟರ್ ಪ್ಲಾನ್!


1. ರೈತ ಉತ್ಪಾದಕ ಕಂಪನಿಗಳಾದ (EPC) ಆಳಂದ ಭೂತಾಯಿ (ಅಲಂದ್ ಭೂತಾಯಿ) ಮಿಲೆಟ್ಸ್ ಸಂಸ್ಥೆಯ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದ್ದರು. ಅವರು ಖಕ್ರಾ, ಬಿಸ್ಕತ್ತುಗಳು ಮತ್ತು ಲಡ್ಡೂಗಳಂತಹ ಜನಪ್ರಿಯ ಉತ್ಪನ್ನಗಳನ್ನು ಈ ಸಂಸ್ಥೆ ಉತ್ಪಾದಿಸುತ್ತದೆ. ಇದೇ ವೇಳೆ ಬೀದರ್ ಜಿಲ್ಲೆಯ ಹುಲ್ಸೂರು ರಾಗಿ ಉತ್ಪಾದಕ ಕಂಪನಿಯ ಮಹಿಳೆಯರು ರಾಗಿ ಬೆಳೆದು ಸಂಸ್ಕರಣೆ ಮಾಡುತ್ತಿದ್ದು ಆದಾಯ ಹೆಚ್ಚಿಸಿಕೊಳ್ಳುತ್ತಿರುವ ಬಗ್ಗೆ ಮಾತನಾಡಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ ಮನ್​ ಕಿ ಬಾತ್​ )


2. ಮನ್ ಕಿ ಬಾತ್ 92 ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ದೇಶದ ಹಲವು ರಾಜ್ಯಗಳಲ್ಲಿ ನಿರ್ಮಾಣವಾಗುತ್ತಿರುವ ʻಅಮೃತ ಸರೋವರʼ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ ಮೋದಿ ಅವರು ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಿಲ್ಕೇರೂರ ಗ್ರಾಮದಲ್ಲಿ ಸುಂದರ ಅಮೃತ ಸರೋವರವನ್ನು ನಿರ್ಮಿಸಲಾಗಿದೆ. ಇದು ಪ್ರವಾಹದ ವೇಳೆ ಎದುರಾಗುವ ಸಮಸ್ಯೆಗಳನ್ನು ಮಾತ್ರವಷ್ಟೇ ಪರಿಹರಿಸುವುದಿಲ್ಲ. ಜೊತೆಗೆ ಬೆಟ್ಟಗಳಿಂದ ಹರಿಯುವ ನೀರಿನಿಂದ ಉಂಟಾಗುವ ನಷ್ಟದಿಂದಲೂ ರೈತರನ್ನು ರಕ್ಷಿಸಿದೆ ಎಂದು ತಿಳಿದಿದ್ದರು.(ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್




3. ಅಮೃತ ಭಾರತಿ ಕನ್ನಡಾರ್ಥಿ ಅಭಿಯಾನದಡಿ ರಾಜ್ಯದ 75 ಸ್ಥಳಗಳಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಸಂಬಂಧಿಸಿದ ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದನ್ನು ಪ್ರಧಾನ ಮಂತ್ರಿ ಶ್ಲಾಘಿಸಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


4. ಮನ್ ಕಿ ಬಾತ್ ಸಂಚಿಕೆಯೊಂದರಲ್ಲಿ ಪ್ರಸ್ತುತ ಪಡಿಸಿದಂತೆ ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ, COVID-19 ಸಾಂಕ್ರಾಮಿಕ ಸಮಯದಲ್ಲಿ ಮಹಿಳೆಯರು ಬಾಳೆ ಹಿಟ್ಟಿನಿಂದ ದೋಸೆ, ಗುಲಾಬ್ಜಾಮುನ್ ಮತ್ತು ಇತರ ಆಹಾರ ಪದಾರ್ಥಗಳನ್ನು ತಯಾರಿಸುವ ವಿಶಿಷ್ಟ ವ್ಯವಹಾರವನ್ನು ಪ್ರಾರಂಭಿಸಿದ್ದರು. ಈ ಮಹಿಳೆಯರು ಖಾದ್ಯಗಳ ಫೋಟಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ವೈರಲ್ ಆದ ನಂತರ ಜನರು ಈ ಉತ್ಪನ್ನದ ಬಗ್ಗೆ ತಿಳಿದುಕೊಳ್ಳುತ್ತಾ ಸ್ವತಃ ಬರಲು ಶುರು ಮಾಡಿದರು. ಇದರಿಂದ ಅವರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಯಿತು, ಇದು ಅವರ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗಿತ್ತು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


ಇದನ್ನೂ ಓದಿ: Rising India Summit: ಮನ್‌ಕಿ ಬಾತ್‌ ಕುರಿತ ಪುಸ್ತಕ ಹೊರತಂದ ನ್ಯೂಸ್‌18 ನೆಟ್‌ವರ್ಕ್‌ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ


5. ಮನ್ ಕಿ ಬಾತ್ ಸಂಚಿಕೆಯೊಂದರಲ್ಲಿ ಯುವಾ ಬ್ರಿಗೇಡ್ ಕೈಗೊಂಡಿದ್ದ ಸ್ವಚ್ಛತಾ ಅಭಿಯಾನವನ್ನು ಮತ್ತು ಕರ್ನಾಟಕದ ಶ್ರೀರಂಗಪಟ್ಟಣದಲ್ಲಿರುವ ವೀರಭದ್ರ ಸ್ವಾಮಿ ಎಂಬ ಪುರಾತನ ಶಿವ ದೇವಾಲಯವನ್ನು ಜೀರ್ಣೊದ್ಧಾರ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದರು. ಅದೇ ರೀತಿ, ಪ್ರಧಾನಿ ಮೋದಿ ಅವರು ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿ ಇತರರಿಗೆ ಸ್ಫೂರ್ತಿ ನೀಡಿದ ಅನುದೀಪ್ ಮತ್ತು ಮಿನುಷಾ ದಂಪತಿಯ ಕಾರ್ಯವನ್ನು ಪ್ರಸ್ತಾಪಿಸಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


6. ಬಾಬಾಸಾಹೇಬ್ ಮತ್ತು ರಾಮಾನುಜಾಚಾರ್ಯರ ಬಗ್ಗೆ ಮಾತನಾಡುವಾಗ, ಪ್ರಧಾನ ಮಂತ್ರಿ ಬಸವೇಶ್ವರರ ಬೋಧನೆಗಳನ್ನು ಸಹ ನೆನಪಿಸಿಕೊಂಡಿದ್ದರು. “ಕಾಯಕವೇ ಕೈಲಾಸ ಅಂದರೆ ಯಾವುದೇ ವ್ಯಕ್ತಿ ತನ್ನ ಕರ್ತವ್ಯವನ್ನು ಸರಿಯಾದ ಶ್ರದ್ಧೆ ಮತ್ತು ಪರಿಶ್ರಮದಿಂದ ನಿರ್ವಹಿಸುಸಿದರೆ ಅದರ ಮೂಲಕ ಶಿವನನ್ನು ಅಂದರೆ ಪರಮಾತ್ಮನನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಬಹುದು ಎಂದರ್ಥ. ಬೇರೆ ರೀತಿಯಲ್ಲಿ ಹೇಳುವುದಾದರೆ, ಡಿಗ್ನಿಟಿ ಆಫ್ ಲೇಬರ್ ಅನ್ನು ಎತ್ತಿಹಿಡಿಯಲು ಶ್ರಮೆವ್ ಜಯತೇ ಯೋಜನೆ ಎಂಬ ವಾಕ್ಯವನ್ನು ಪ್ರಧಾನಿ ಮೋದಿ ಪದೇ ಪದೇ ಉಲ್ಲೇಖಿಸಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್




7. ಇ-ತ್ಯಾಜ್ಯ ನಿರ್ವಹಣೆಯಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವುದು ಮತ್ತು ಉದ್ಯೋಗವನ್ನು ಸೃಷ್ಟಿಸುವಂತಹ ಪ್ರಯತ್ನದಲ್ಲಿ ತೊಡಗಿರುವ ಬೆಂಗಳೂರಿನ ಇ-ಪರಿಸರದ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದ್ದರು. ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳಿಂದ ಅಮೂಲ್ಯ ಲೋಹಗಳನ್ನು ಹೊರತೆಗೆಯಲು ಈ ಸಂಸ್ಥೆಯು ಸ್ಥಳೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


8. ಗ್ರಾಮೀಣ ಭಾರತದ ಕಥೆಗಳನ್ನು ಜನಪ್ರಿಯಗೊಳಿಸುವ ವೆಬ್‌ಸೈಟ್ ಒಂದರ ಪ್ರಯತ್ನಗಳನ್ನು ಶ್ಲಾಘಿಸಿದ್ದರು. ಅಮರ್ ವ್ಯಾಸ್ ಮತ್ತು ಅವರ ಸಹೋದ್ಯೋಗಿಗಳು ನಡೆಸುತ್ತಿರುವ “Gathastory.in” ವೆಬ್‌ಸೈಟ್ ಕುರಿತು ಪ್ರಧಾನಿ ಪ್ರಸ್ತಾಪಿಸಿದರು. ಅಹಮದಾಬಾದ್‌ನ ಐಐಎಂನಲ್ಲಿ ಎಂಬಿಎ ಮುಗಿಸಿದ ಅಮರ್ ವ್ಯಾಸ್ ವಿದೇಶಕ್ಕೆ ಹೋಗಿ ನಂತರ ಹಿಂದಿರುಗಿದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ಅವರು ಕಥೆ ವಾಚನ ಮಾಡುವುದನ್ನು ಆಸಕ್ತಿದಾಯಕ ಚಟುವಟಿಕೆಯಾಗಿ ಅವರು ಪಾಲಿಸುತ್ತಾ ಬಂದಿದ್ದಾರೆ. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


9. ಪದ್ಮ ಪ್ರಶಸ್ತಿ ಪುರಸ್ಕೃತರ ಸ್ಪೂರ್ತಿದಾಯಕ ಕೆಲಸಗಳನ್ನು ಹಂಚಿಕೊಳ್ಳುವಾಗ, ಕರ್ನಾಟಕದ ಕೆಲವು ಸಾಧಕರ ಉದಾಹರಣೆಗಳನ್ನು ಪ್ರಧಾನಿ ಪ್ರಸ್ತಾಪಿಸಿದ್ದರು. ಕರ್ನಾಟಕದ ಸೀತವ್ವ ಜೋಡಟ್ಟಿ ಅವರು ದೇವದಾಸಿಯರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅಮೈ ಮಹಾಲಿಂಗ ನಾಯ್ಕ (ಸುರಂಗದ ಮನುಷ್ಯ) ಕೃಷಿಯಲ್ಲಿ ನಾವೀನ್ಯತೆಗಳಿಗೆ ಹೆಸರುವಾಸಿಯಾಗಿದ್ದಾರೆ. ಇನ್ನು107 ವರ್ಷದ ಸಾಲುಮರದ ತಿಮ್ಮಕ್ಕ (ವೃಕ್ಷ ಮಾತೆ) ಅವರ ಸಾಧನೆಯ ಬಗ್ಗೆ ಪ್ರಧಾನಿ ಮೋದಿನ ಪ್ರಸ್ತಾಪಿಸಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


10. ದೂರದ ಪ್ರದೇಶಗಳಲ್ಲಿ ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸಹಾಯ ಮಾಡುವ ಸೂಲಗಿತ್ತಿ, ಪದ್ಮಶ್ರೀ ಸೂಲಗಿತ್ತಿ ನರಸಮ್ಮ ಅವರಿಗೆ ಪ್ರಧಾನ ಮಂತ್ರಿಯವರು ಗೌರವ ಸಲ್ಲಿಸಿದ್ದರು. ಸಮಾಜ ಸೇವೆಗಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕಾರ್ಯವನ್ನು ಪ್ರಧಾನಿ ಶ್ಲಾಘಿಸಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


11. ಭಾರತವು ಸ್ಥಳೀಯ ಆಟಿಕೆಗಳ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ಸ್ಥಳೀಯ ಆಟಿಕೆ ಉದ್ಯಮಕ್ಕೆ ಉತ್ತೇಜನ ನೀಡುವಂತೆ ಮನವಿ ಮಾಡಿದ ಪ್ರಧಾನಿ, ಕರ್ನಾಟಕದ ರಾಮನಗರದಲ್ಲಿರುವ ಚನ್ನಪಟ್ಟಣದ ಆಟಿಕೆ ಕ್ಲಸ್ಟರ್ ಬಗ್ಗೆ ಪ್ರಸ್ತಾಪಿಸಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


12. ಕರ್ನಾಟಕದ ಹೆಣ್ಣು ಮಕ್ಕಳ ಅನೇಕ ಸ್ಪೂರ್ತಿದಾಯಕ ಕಥೆಗಳನ್ನು ಪ್ರಧಾನಿ ಹಂಚಿಕೊಂಡಿದ್ದಾರೆ. ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಶೌಚಾಲಯಕ್ಕಾಗಿ ಸತ್ಯಾಗ್ರಹ ಮಾಡಿದ ಮಲ್ಲಮ್ಮ ಅವರನ್ನು ಪ್ರಧಾನಿ ಉಲ್ಲೇಖಿಸಿದ್ದರು. ಬೆಳಗಾವಿಯ ರೈತನ ಮಗಳು ಅಕ್ಷಯ ಬಸವಾನಿ ಕಾಮತ್ ಖೇಲೋ ಇಂಡಿಯಾದಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿದ್ದನ್ನು ಸಹಾ ಸಹ ಪ್ರಸ್ತಾಪಿಸಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


13. ಮನ್ ಕಿ ಬಾತ್ ಸಂಚಿಕೆಯಲ್ಲಿ, ನೀರಿನ ಸಂರಕ್ಷಣೆಗೆ ಸಂಬಂಧಿಸಿದ ಕೆಲಸಕ್ಕಾಗಿ ಕಾಮೇಗೌಡ ಅಷ್ಟಮಠಾಧೀಶರ ಸ್ಪೂರ್ತಿದಾಯಕ ಕಥೆಯನ್ನು ಪ್ರಧಾನಿ ಹಂಚಿಕೊಂಡಿದ್ದಾರೆ. ಕಾಮೇಗೌಡ ಅವರು ಕುರಿಗಳನ್ನು ಮೇಯಿಸಲು ಮಾತ್ರವಲ್ಲದೆ ತಮ್ಮ ಪ್ರದೇಶದಲ್ಲಿ ಹೊಸ ಕೊಳಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದನ್ನು ಪ್ರಧಾನಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


14. ಪ್ರಧಾನ ಮಂತ್ರಿ ಅವರು ಲಕ್ಷ್ಮೇಶ್ವರದ ರಿದಾ ನದಾಫ್ ಅವರ ಕಾರ್ಯವನ್ನು ಸ್ಮರಿಸಿದ್ದರು. ಸೇನಾಧಿಕಾರಿಯ ಮಗಳಾಗಿರುವುದಕ್ಕೆ ನಾನು ಹೆಮ್ಮೆ ಹೆಮ್ಮೆಪಡುತ್ತೇನೆ ಎಂದು ಆಕೆ ಪ್ರಧಾನಿಗೆ ಬರೆದಿದ್ದರು. ಅದೇ ರೀತಿ, ಕಲ್ಬುರ್ಗಿಯ ಇರ್ಫಾನಾ ಬೇಗಂ ಎಂಬ ವಿದ್ಯಾರ್ಥಿನಿ ತನ್ನ ಗ್ರಾಮದಿಂದ 5 ಕಿಲೋಮೀಟರ್ ದೂರದಲ್ಲಿರುವ ಶಾಲೆಗೆ ತೆರಳಿ ಪರೀಕ್ಷೆ ಬರೆದಿರುವುದಾಗಿ ಬೆರೆದಿದ್ದ ಪತ್ರವನ್ನು ನೆನೆದು ಶ್ಲಾಘಿಸಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


15. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸುರೇಶ್ ಕುಮಾರ್ ಅವರ ಸ್ಪೂರ್ತಿದಾಯಕ ಕಥೆಯನ್ನೂ ಮೋದಿ ಹಂಚಿಕೊಂಡಿದ್ದರು. ಸಹಕಾರನಗರದ ಅರಣ್ಯವನ್ನು ಪುನರುಜ್ಜೀವನಗೊಳಿಸುವ ಸುರೇಶ್ ಅವರ ಉಪಕ್ರಮ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಸಹಕಾರನಗರದಲ್ಲಿ ಬಸ್ ತಂಗುದಾಣ ನಿರ್ಮಿಸಿರುವುದರ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


16. ಗದಗದಲ್ಲಿ ವಾಸಿಸುವ ಕಾವೆಂಶ್ರೀ(ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ)ಕಳೆದ 25 ವರ್ಷಗಳಿಂದ ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಧ್ಯೇಯದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಕಲಾ ಚೇತನ’ ಎಂಬ ಹೆಸರಿನಲ್ಲಿ ವೇದಿಕೆ ಸೃಷ್ಟಿಸಿದ್ದನ್ನು ಸ್ಮರಿಸಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್


17. ಹಾಗೆಯೇ ಅಡಿಕೆ ನಾರಿನಿಂದ ತಯಾರಿಸಿದ ಅನೇಕ ವಿಶಿಷ್ಟ ಉತ್ಪನ್ನಗಳನ್ನು ಲಂಡನ್ ಮತ್ತು ಯುರೋಪ್‌ನಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುತ್ತಿರುವ ಶಿವಮೊಗ್ಗದ ಸುರೇಶ್ ಮತ್ತು ಅವರ ಪತ್ನಿ ಮೈಥಿಲಿ ಬಗ್ಗೆಯೂ ಪ್ರಸ್ತಾಪಿಸಿದ್ದರು. (ಮಾಹಿತಿಗಾಗಿ ಕ್ಲಿಕ್​ ಮಾಡಿ) ಮನ್​ ಕಿ ಬಾತ್

First published: