ಕೋಲ್ಕತ್ತಾ(ಜು.06): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರ ಕಾಲಿಘಾಟ್ ನಿವಾಸಕ್ಕೆ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ (Iron Rod) ಹೊತ್ತೊಕೊಂಡು ನುಸುಳಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಹಫೀಜುಲ್ ಮೊಲ್ಲಾಹ್ ಎಂದು ಗುರುತಿಸಲಾದ ವ್ಯಕ್ತಿ ಮಮತಾ ಬ್ಯಾನರ್ಜಿ ಅವರ ಮನೆಯ ಗೋಡೆಗಳನ್ನು (Wall) ಅಳತೆ ಮಾಡಿದ್ದಾನೆ. ಮರುದಿನ ಬೆಳಿಗ್ಗೆ ಭದ್ರತಾ ಸಿಬ್ಬಂದಿ (Security Person) ಆ ವ್ಯಕ್ತಿಯನ್ನು ಪತ್ತೆಮಾಡುವವರೆಗೂ ಆ ವ್ಯಕ್ತಿಯು ಟಿಎಂಸಿ (TMC) ಮುಖ್ಯಸ್ಥೆ ಪತ್ರಿಕಾಗೋಷ್ಠಿ ನಡೆಸುವ ಸಭಾಂಗಣದ ಎದುರಿನ ಜಾಗದಲ್ಲಿ ಕುಳಿತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಕೋಲ್ಕತ್ತಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶರ್ಟ್ ಅಡಿಯಲ್ಲಿ ರಾಡ್ ಬಚ್ಚಿಟ್ಟಿದ್ದ ವ್ಯಕ್ತಿ
“ಅವರು ತಮ್ಮ ಶರ್ಟ್ ಅಡಿಯಲ್ಲಿ ಕಬ್ಬಿಣದ ರಾಡ್ ಅನ್ನು ಬಚ್ಚಿಟ್ಟುಕೊಂಡು ಸಿಎಂ ನಿವಾಸಕ್ಕೆ ನುಸುಳಿದರು. ಅದನ್ನು ತನ್ನೊಂದಿಗೆ ಕೊಂಡೊಯ್ಯುವ ಉದ್ದೇಶವನ್ನು ತಿಳಿಯಲು ನಾವು ಅವರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.
ತಪ್ಪಿಸಿಕೊಳ್ಳಲು ಯತ್ನಿಸುವಾಗ ಕೆಳಗೆ ಬಿದ್ದ ರಾಡ್
ಬ್ಯಾನರ್ಜಿ ಅವರ ನಿವಾಸದಲ್ಲಿ ಭದ್ರತಾ ಸಿಬ್ಬಂದಿಯನ್ನು ಗಮನಿಸಿದ ನಂತರ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ರಾಡ್ ನೆಲದ ಮೇಲೆ ಬಿದ್ದಿದೆ ಎಂದು ಅವರು ಹೇಳಿದ್ದಾರೆ. ಮೊಲ್ಲಾ ಮಾನಸಿಕವಾಗಿ ಅಸ್ಥಿರ ಎಂದು ಅವರ ಕುಟುಂಬ ಹೇಳಿಕೊಂಡಿದ್ದರೂ, ಪೊಲೀಸರು ಇನ್ನೂ ಸಿಎಂ ಮನೆಗೆ ಪ್ರವೇಶಿಸುವ ಉದ್ದೇಶವನ್ನು ಶಂಕಿಸಿದ್ದಾರೆ.
ವ್ಯಕ್ತಿಯ ಮಾನಸಿಕ ಸ್ಥಿತಿ ಪರೀಕ್ಷೆ
ಇಡೀ ಘಟನೆಯನ್ನು ಮರುನಿರ್ಮಾಣ ಮಾಡಲಾಗುವುದು. ವಿಷಯದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ತನಿಖಾಧಿಕಾರಿಗಳು ಮೊಲ್ಲಾ ಅವರ ಮೆಡಿಕಲ್ ಹಿಸ್ಟರಿ ಕಂಡುಹಿಡಿಯಲು ಅವರ ತಂದೆ ಮತ್ತು ಹೆಂಡತಿಯೊಂದಿಗೆ ಮಾತನಾಡಿದ್ದಾರೆ. ಅವರ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಇದನ್ನೂ ಓದಿ: Shocking Bride: ದಿಢೀರ್ ಮಂಟಪದಿಂದ ಎದ್ದು ಹೋದ ವಧು ಆತ್ಮಹತ್ಯೆ!
ಮೊಲ್ಲಾ ಅವರು ಭಾನುವಾರ ಬೆಳಗಿನ ಜಾವ 1.20 ರ ಸುಮಾರಿಗೆ ಬ್ಯಾನರ್ಜಿಯವರ ನಿವಾಸವನ್ನು ಪ್ರವೇಶಿಸಿದ್ದರು. ಮರುದಿನ ಬೆಳಿಗ್ಗೆ 8 ಗಂಟೆಯವರೆಗೆ ಆವರಣದೊಳಗೆ ಇದ್ದರು, ಭದ್ರತಾ ಸಿಬ್ಬಂದಿ ಅವರನ್ನು ಗಮನಿಸಿದಾಗ ಅವರನ್ನು ಕಾಳಿಘಾಟ್ ಪೊಲೀಸ್ ಠಾಣೆಗೆ ಒಪ್ಪಿಸಿದರು.
ಮನೆಯ ಗೋಡೆ ಅಳತೆ ತೆಗೆದಿದ್ದೇಕೆ?
ವಿಚಾರಣೆಯ ಸಮಯದಲ್ಲಿ, ಅವರು ಬ್ಯಾನರ್ಜಿಯವರ ನಿವಾಸವನ್ನು ಲಾಲ್ಬಜಾರ್ನಲ್ಲಿರುವ ಕೋಲ್ಕತ್ತಾ ಪೊಲೀಸ್ ಹೆಡ್ಕ್ವಾರ್ಟರ್ಸ್ ಎಂದು ತಪ್ಪಾಗಿ ಭಾವಿಸಿದ್ದರು. ಆದರೆ ಅವರು ಆವರಣದ ಗೋಡೆಯನ್ನು ಏಕೆ ಅಳೆದರು ಮತ್ತು ಯಾವ ಕಾರಣಕ್ಕಾಗಿ ಅವರು ಆ ಸಮಯದಲ್ಲಿ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಲು ಬಯಸಿದ್ದರು ಎಂಬುದರ ಕುರಿತು ಯಾವುದೇ ಸಮರ್ಥನೀಯ ವಿವರಣೆಯನ್ನು ನೀಡಲು ವಿಫಲರಾದರು.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಕೊಟ್ಟ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್!
ಈ ಘಟನೆಯು ಭದ್ರತಾ ಭಯವನ್ನು ಹುಟ್ಟುಹಾಕಿತು, ಅವರು ಮುಖ್ಯಮಂತ್ರಿ ಪಡೆಯುವ Z-ಪ್ಲಸ್ ಭದ್ರತಾ ಕವರ್ ಅನ್ನು ಹೇಗೆ ದಾಟಿದರು ಎನ್ನುವುದೇ ತಲೆನೋವಾಗಿದೆ. ಯಾರ ಗಮನಕ್ಕೂ ಬಾರದೆ ರಾತ್ರಿ ಕಳೆಯಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿತು. ಘಟನೆ ನಡೆದ ಕೂಡಲೇ ಪೊಲೀಸರು ಸಿಎಂ ನಿವಾಸ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ