• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಬೂಟು ಒದ್ದೆಯಾಗುವುದನ್ನು ತಪ್ಪಿಸಲು ತಮಿಳುನಾಡು ಸಚಿವರನ್ನು ಹೊತ್ತು ಸಾಗಿದ ಬೆಸ್ತ; ವಿಡಿಯೋ ವೈರಲ್

ಬೂಟು ಒದ್ದೆಯಾಗುವುದನ್ನು ತಪ್ಪಿಸಲು ತಮಿಳುನಾಡು ಸಚಿವರನ್ನು ಹೊತ್ತು ಸಾಗಿದ ಬೆಸ್ತ; ವಿಡಿಯೋ ವೈರಲ್

ಸಚಿವರನ್ನು ಎತ್ತಿ ಸಾಗುತ್ತಿರುವ ಬೆಸ್ತರು.

ಸಚಿವರನ್ನು ಎತ್ತಿ ಸಾಗುತ್ತಿರುವ ಬೆಸ್ತರು.

ವಿಡಿಯೋ ವೈರಲ್ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಹಲವರು ಸಚಿವರ ನಡೆಯನ್ನು ಕಟು ಶಬ್ಧಗಳಿಂದ ಪ್ರಶ್ನಿಸಿದ್ದಾರೆ. ಇದು ಸಚಿವರ ಲಜ್ಜೆಗೆಟ್ಟ ವಿಐಪಿ ನಡವಳಿಕೆ ಎಂದು ದೂರಿದ್ದಾರೆ.

  • Share this:

    ಚೆನ್ನೈ (ಜುಲೈ 09); ತಮಿಳುನಾಡಿನ ಕರಾವಳಿ ತೀರದ ಭಾಗಕ್ಕೆ ಪರಿಶೀಲನೆಗೆ ಎಂದು ತೆರಳಿದ್ದ ಅಲ್ಲಿನ ಮೀನುಗಾರಿಕಾ ಸಚಿವ ಅನಿತಾ ರಾಧಾಕೃಷ್ಣನ್ ನೀರಿನಲ್ಲಿ ಕಾಲಿಟ್ಟರೆ ತಮ್ಮ ಬೂಟು ಒದ್ದೆಯಾಗುತ್ತದೆ ಎಂದು ನೀರಿನಲ್ಲಿ ಕಾಲಿಡಲು ನಿರಾಕರಿಸಿದ್ದಾರೆ. ಈ ವೇಳೆ ಬೆಸ್ತರು ಅವರನ್ನು ನೀರಿನಲ್ಲಿ ಕಾಲಿಡದಂತೆ ಎತ್ತಿಕೊಂಡು ಹೋಗಿರುವ ಪೋಟೋ ಮತ್ತು ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.  ಸಚಿವ ಅನಿತಾ ರಾಧಾಕೃಷ್ಣನ್ ತಿರುವಳ್ಳೂರ್ ಜಿಲ್ಲೆಯ ಉಪ್ಪನ್​ಕುಳಲಿ ಸರೋವರದ ಪರಿಶೀಲನೆಗೆ ಇಂದು ತೆರಳಿದ್ದರು. ಈ ಸರೋವರದ ತೀರವನ್ನು ಸಮುದ್ರದ ಅಲೆಗಳ ಉಬ್ಬರವಿಳಿತದಿಂದ ಸವೆತ ಉಂಟಾಗುತ್ತಿದೆ ಎಂದು ಕಾರಣಕ್ಕೆ ಈ ಭಾಗದಲ್ಲಿ ದೋಣಿ ಸಂಚಾರಕ್ಕೆ ನಿರ್ಭಂದ ಹೇರಲಾಗಿತ್ತು. ಆದರೆ, ಇದರ ಪರಿಶೀಲನೆಗೆ ತೆರಳಿದ್ದ ಸಚಿವ ಅನಿತಾ ರಾಧಾಕೃಷ್ಣನ್ ಅವರನ್ನು ಸಣ್ಣ ಬೋಟ್​ನಲ್ಲಿ ಇಲ್ಲಿಗೆ ಕರೆದುಕೊಂಡು ಹೋಗಲಾಗಿತ್ತು.


    ಆದರೆ, ಆ ಸಣ್ಣ ಬೋಟ್​ನಲ್ಲಿ 30ಕ್ಕೂ ಹೆಚ್ಚು ಜನ ಇದ್ದ ಕಾರಣ ಅದು ಭಾರಕ್ಕೆ ಒಂದೇ ಕಡೆ ವಾಲಿದೆ. ಈ ವೇಳೆ ಬೋಟ್​ನಲ್ಲಿದ್ದ ಎಲ್ಲರನ್ನೂ ಮತ್ತೊಂದು ಬೋಟ್​ಗೆ ವರ್ಗಾಯಿಸಿ ದಡಕ್ಕೆ ತಲುಪಿಸಲಾಗಿತ್ತು. ದಡಕ್ಕೆ ಹಿಂದಿರುಗಿದಾಗ ಸಚಿವರು ತಾನು ನೀರಿನಲ್ಲಿ ಕಾಲಿಡಲು ನಿರಾಕರಿಸಿದ್ದಾರೆ. ತನ್ನ ಬೂಟು ಒದ್ದೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.


    ಹೀಗಾಗಿ ಆ ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಕುರ್ಚಿಯನ್ನು ತಂದ ನಂತರ ಮೀನುಗಾರರು ಸಚಿವರನ್ನು ಎತ್ತಿಕೊಂಡೆ ಹೋಗಿ ಆ ಖುರ್ಚಿಯಲ್ಲಿ ಕೂರಿಸಿದ್ದಾರೆ. ಆದರೆ, ಈ ಪ್ರಸಂಗಗಳು ಕೆಲವರು ಮೊಬೈಲ್​ ಪೋನ್​ನಲ್ಲಿ ಸೆರೆಯಾಗಿದ್ದು ತಮಿಳುನಾಡಿನ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.


    ಅಲ್ಲದೆ, ವಿಡಿಯೋ ವೈರಲ್ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಹಲವರು ಸಚಿವರ ನಡೆಯನ್ನು ಕಟು ಶಬ್ಧಗಳಿಂದ ಪ್ರಶ್ನಿಸಿದ್ದಾರೆ. ಇದು ಸಚಿವರ ಲಜ್ಜೆಗೆಟ್ಟ ವಿಐಪಿ ನಡವಳಿಕೆ ಎಂದು ದೂರಿದ್ದಾರೆ.


    ಇದನ್ನೂ ಓದಿ: Sumalatha Ambrish| ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ದಾಖಲೆ ತನ್ನಿ; ಕುಮಾರಸ್ವಾಮಿಗೆ ಸಂಸದೆ ಸುಮಲತಾ ಸವಾಲು!


    ಆದರೆ, ತಮಿಳುನಾಡಿನ ಮಾಧ್ಯಮಗಳು ಈ ಬಗ್ಗೆ ಪ್ರತಿಕ್ರಿಯೆಗಾಗಿ ಸಚಿವರನ್ನು ಸಂಪರ್ಕಿಸಿದಾಗ ವಿವರಣೆ ನೀಡಿರುವ ಅನಿತಾ ರಾಧಾಕೃಷ್ಣನ್, "ನಾನು ನೀರಿನಲ್ಲಿ ಇಳಿಯಲು ಸಿದ್ಧನಾಗಿದ್ದೆ. ನನ್ನನ್ನು ದಡಕ್ಕೆ ಎತ್ತಿಕೊಂಡು ಹೋಗಿ ಎಂದು ನಾನು ಯಾರಲ್ಲೂ ಮನವಿ ಮಾಡಿರಲಿಲ್ಲ. ಆದರೆ, ಗುಂಪಿನಲ್ಲಿದ್ದ ಓರ್ವ ಮೀನುಗಾರ ಸಚಿವರು ನಮ್ಮ ಭಾಗಕ್ಕೆ ಭೇಟಿ ನೀಡಿದ್ದಾರೆ ಎಂದು ಪ್ರೀತಿಯಿಂದ ನನ್ನನ್ನು ಎತ್ತಿಕೊಂಡು ಹೋಗಿದ್ದರು" ಎಂದು ಸ್ಪಷ್ಟೀಕರಣ ನೀಡಿದ್ದಾರೆ.


    ಇದನ್ನೂ ಓದಿ: Nitrogen Dioxide in Bangalore| ಬೆಂಗಳೂರಿನಲ್ಲಿ ಶೇ.90ರಷ್ಟು ಹೆಚ್ಚಳವಾಯ್ತು ನೈಟ್ರೋಜನ್ ಡೈ ಆಕ್ಸೈಡ್ ..!


    ತಿರುವಳ್ಳೂರ್ ಜಿಲ್ಲೆಗೆ ಭೇಟಿ ನೀಡಿರುವ ಮೀನುಗಾರಿಕಾ ಸಚಿವ ಅನಿತಾ ರಾಧಾಕೃಷ್ಣನ್  ಮೀನುಗಾರಿಕೆ ದೋಣಿಗಳು ಬಳಸುವ ಡೀಸೆಲ್‌ಗೆ ಸಹಾಯಧನವನ್ನು ಹೆಚ್ಚಿಸುವುದಾಗಿ ಮೀನುಗಾರರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:MAshok Kumar
    First published: