Mamata- Sonia: ಏಕಾಂಗಿಯಾಗಿ ಏನು ಸಾಧ್ಯವಿಲ್ಲ, ಒಗ್ಗೂಡಬೇಕಿದೆ ; ಸೋನಿಯಾ ಭೇಟಿಯಾದ ಮಮತಾ

ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ,

ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ,

ಬೆಕ್ಕಿನ ಕುತ್ತಿಗೆಗೆ ಗಂಟೆ ಕಟ್ಟುವ ಕೆಲಸಕ್ಕೆ ನಾನು ಸಹಾಯ ಮಾಡುತ್ತಿದ್ದೇನೆ. ನನಗೆ ನಾಯಕಿಯಾಗುವ ಯಾವುದೇ ಇಚ್ಛೆ ಇಲ್ಲ

  • Share this:

    ನವದೆಹಲಿ (ಜು. 28):  2024ರ ಲೋಕಸಭೆಗೆ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡುತ್ತಿವೆ. ಇದೇ ಹಿನ್ನಲೆ ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಈ ಚರ್ಚೆ ವೇಳೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಕೂಡ ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ. ಇನ್ನು ಸಭೆ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ, ಒಬ್ಬರಿಂದ ನಾವು ಏನು ಸಾಧ್ಯವಿಲ್ಲ. ನಾವು ಒಟ್ಟುಗೂಡಬೇಕು. ಕಾಂಗ್ರೆಸ್​ ಅಧ್ಯಕ್ಷರ ಭೇಟಿ ಸಕಾರಾತ್ಮಕವಾಗಿದ್ದು, ಮುಂದಿನ ಭವಿಷ್ಯದಲ್ಲ ಸಕಾರಾತ್ಮಕವಾಗಿ ಏನಾದರೂ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


    ಐದು ದಿನಗಳ ದೆಹಲಿ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಇದಕ್ಕೂ ಮುನ್ನ ಕಾಂಗ್ರೆಸ್​ ನಾಯಕರಾದ ಕಮಲ್​ ನಾಥ್​ ಮತ್ತು ಆನಂದ್​ ಶರ್ಮಾ ಅವರನ್ನು ಭೇಟಿಯಾಗಿದ್ದರು. ಇಂದು ಸೋನಿಯಾ ಗಾಂಧಿ ಚಹಾ ಕೂಟದ ಆಹ್ವಾನದ ಮೇರೆ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದರು.


    ಇದಕ್ಕೂ ಮುನ್ನ ಕೆಲ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ತಮಗೆ ಪ್ರಧಾನಿಯಾಗುವ ಯಾವುದೇ ಅಭಿಲಾಷೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಬೆಕ್ಕಿನ ಕುತ್ತಿಗೆಗೆ ಗಂಟೆ ಕಟ್ಟುವ ಕೆಲಸಕ್ಕೆ ನಾನು ಸಹಾಯ ಮಾಡುತ್ತಿದ್ದೇನೆ. ನನಗೆ ನಾಯಕಿಯಾಗುವ ಯಾವುದೇ ಇಚ್ಛೆ ಇಲ್ಲ ಎಂದಿದ್ದಾರೆ.


    ಇದನ್ನು ಓದಿ: ಪ್ರಧಾನಿ ನಿವಾಸಕ್ಕೆ ಮಮತಾ; ಕುತೂಹಲ ಮೂಡಿಸಿದ ಮೋದಿ- ಬ್ಯಾನರ್ಜಿ ಮಾತುಕತೆ


    ನಾನು ರಾಜಕೀಯದ ಜೋತಿಷ್ಯಿಯಲ್ಲ. ಮುಂದಿನ ಘಟನೆಗಳು ಪರಿಸ್ಥಿತಿ ಆಧಾರದ ಮೇಲೆ ಇರುತ್ತದೆ. ಯಾರಾದರೂ ಮುನ್ನೆಡೆಸಿದರೆ ತಮಗೆ ತೊಂದರೆ ಇಲ್ಲ. ಈ ಕುರಿತು ಚರ್ಚಿಸಿದ ಬಳಿಕ ನಾವು ನಿರ್ಧರಿಸಬಹುದು. ಈ ಸಂಬಂಧ ಒತ್ತಡ ಹೇರಲು ಸಾಧ್ಯವಿಲ್ಲ ಎಂದರು.
    ಸೋನಿಯಾ ಗಾಂಧಿ ಭೇಟಿ ಫಲಪ್ರದವಾಗಿದೆ. ನಾನು ಭೇಟಿಯಾಗುತ್ತಿರುವ ನಾಯಕರಲ್ಲಿ ಬಹುತೇಕರು ನನ್ನ ಹಳೆಯ ಸ್ನೇಹಿತರು, ನಾವು ಹೊಸ ಮತ್ತು ಹಳೆಯ ದಿನಗಳ ಕುರಿತು ಚರ್ಚಿಸಿದ್ದೇವೆ. ನಾಡಿದ್ದು, ಅರವಿಂದ್​ ಕೇಜ್ರೀವಾಲ್​ ಅವರನ್ನು ಭೇಟಿಯಾಗುತ್ತೇನೆ. ಜಾವೀದ್​ ಅಖ್ತರ್​ ಮತ್ತು ಶಬಾನಾ ಆಜ್ಮಿ ಕೂಡ ಸಮಯ ಕೇಳಿದ್ದಾರೆ, ಅವರನ್ನು ಕೂಡ ಭೇಟಿ ಮಾಡುತ್ತೇನೆ. ನಾಳೆ ಪಕ್ಷದ ಸಂಸದರನ್ನು ಭೇಟಿಯಾಗುತ್ತೇನೆ ಎಂದರು.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು

    Published by:Seema R
    First published: