news18-kannada Updated:January 4, 2021, 9:16 AM IST
ಮಲೆಯಾಳಂ ಕವಿ ಅನಿಲ್ ಪನಚೂರನ್
ತಿರುವನಂತಪುರಂ(ಜ.04): ಖ್ಯಾತ ಮಲೆಯಾಳಂ ಕವಿ ಮತ್ತು ಗೀತ ರಚನೆಕಾರ ಅನಿಲ್ ಪನಚೂರನ್ ಅವರು ಭಾನುವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 55 ವರ್ಷ ವಯಸ್ಸಾಗಿದ್ದ ಪನಚೂರನ್ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಕೊಲ್ಲಂ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ರಾತ್ರಿ 8.20ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.
ಪನಚೂರನ್ ಅವರು ಪ್ರಸಿದ್ಧ ಗೀತ ರಚನೆಕಾರರಾಗಿದ್ದು, ಜನಪ್ರಿಯತೆ ಗಳಿಸಿದ್ದರು. ಅರಬಿಕಾಧಾ, ಕಾಧಾ ಪರಾಯುಂಬೋಲ್, ಮದಂಬಿ, ಮೇರಿಕುಂದೋರು ಕುಂಜಾಡು, ವೆಲಿಪಡಿಂಟೆ ಪುಸ್ತಕಂ ಸೇರಿ ಅನೇಕ ಸಿನಿಮಾಗಳಲ್ಲಿನ ಸಾಹಿತ್ಯಕ್ಕೆ ಇವರು ಹೆಸರುವಾಸಿಯಾಗಿದ್ದಾರೆ.
ಉತ್ತರ ಕನ್ನಡ: ಗ್ರಾ.ಪಂ.ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ ಹಿನ್ನೆಲೆ; ಎಂಎಲ್ಸಿ ಟಿಕೆಟ್ಗೆ ಹೆಚ್ಚಿನ ಬೇಡಿಕೆ ಸಾಧ್ಯತೆ
ಅನಿಲ್ ಪನಚೂರನ್ ನಿಧನಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿಥಾಲಾ ಮತ್ತು ಇತರರು ಸಂತಾಪ ಸೂಚಿಸಿದ್ದಾರೆ. ಪನಚೂರನ್ ಅವರ ಅಕಾಲಿಕ ನಿಧನವು ರಾಜ್ಯದ ಸಾಂಸ್ಕೃತಿಕ ಮತ್ತು ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ ಎಂದು ಸಿಎಂ ಪಿಣರಾಯಿ ವಿಜಯನ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಪನಚೂರನ್ ಕವಿಯೊಂದಿಗೆ ನಮಗೆ ಉತ್ತಮ ಬಾಂಧವ್ಯ ಇತ್ತು. ಅಂತಹ ಪ್ರತಿಭಾವಂತ ಕವಿ ಮತ್ತು ಗೀತರಚನೆಕಾರರನ್ನು ಕಳೆದುಕೊಂಡಿದ್ದು ನಮ್ಮ ನಾಡಿಗೆ ದೊಡ್ಡ ನಷ್ಟ ಎಂದು ರಮೇಶ್ ಚೆನ್ನಿಥಾಲಾ ವಿಷಾದ ವ್ಯಕ್ತಪಡಿಸಿದ್ದಾರೆ.
Published by:
Latha CG
First published:
January 4, 2021, 9:16 AM IST