ಗುರುಗ್ರಾಮ (ಜೂ.27): ಸಾಕಷ್ಟು ರಾಜ್ಯಗಳಲ್ಲಿ ಭಾರೀ ಹಾನಿ ಉಂಟು ಮಾಡಿದ್ದ ಮಿಡತೆಗಳು ಈಗ ಗುರುಗ್ರಾಮಕ್ಕೆ ದಾಳಿ ಇಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆಯದಂತೆ ಎಚ್ಚರಿಕೆ ನೀಡಲಾಗಿದೆ.
ಮಿಡತೆ ದಂಡು ರಾಜಸ್ಥಾನ, ಮಹಾರಾಷ್ಟ್ರ, ಮಧ್ಯ ಪ್ರದೇಶ ಸೇರಿ ಸಾಕಷ್ಟು ರಾಜ್ಯಗಳಲ್ಲಿ ಭಾರೀ ಹಾನಿ ಸೃಷ್ಟಿ ಮಾಡಿತ್ತು. ಈಗ ಈ ಮಿಡತೆಗಳು ಗುರುಗ್ರಾಮ ಭಾಗಕ್ಕೆ ದಾಳಿ ಇಡುವ ಮುನ್ಸೂಚನೆ ಇದೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ಶಬ್ದ ಮಾಡುವಂತೆ ಹಾಗೂ ಮನೆ ಬಾಗಿಲು, ಕಿಟಕಿ ತೆರೆಯದಂತೆ ಸೂಚನೆ ನೀಡಲಾಗಿದೆ.
ಮಹೇಂದ್ರಗಿರಿ ಜಿಲ್ಲೆಗೆ ಮಿಡತೆ ದಂಡು ಲಗ್ಗೆ ಇಟ್ಟಿದೆ. ಹೀಗಾಗಿ, ಇವು ಗುರುಗ್ರಾಮ ಭಾಗದತ್ತವೂ ತಿರುಗಬಹುದು. ಈ ಮಿಡತೆಗಳು ಶಬ್ದಕ್ಕೆ ಹೆದರುತ್ತವೆ. ಹೀಗಾಗಿ, ನಿರಂತರವಾಗಿ ಈ ಭಾಗದಲ್ಲಿ ಬಟ್ಟಲು, ಜಾಗಟೆ ಮತ್ತಿತ್ಯಾದಿ ವಸ್ತುಗಳನ್ನು ಬಡಿಯುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೆ.ಆರ್ ಮಾರ್ಕೆಟ್ ಕ್ಲೋಸ್ ಆದ್ರೇನು! ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ತಲೆಯೆತ್ತಿದೆ ಫುಟ್ಪಾತ್ ಮಾರ್ಕೆಟ್
ಇನ್ನು, ಹಳ್ಳಿಗಳಲ್ಲಿ ರೈತರ ಬಳಿ ಇರುವ ನೀರಿನ ಪಂಪ್ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆಯೂ ನಿರ್ದೇಶಿಸಲಾಗಿದೆ. ಒಂದೊಮ್ಮೆ ಮಿಡತೆಗಳು ದಾಳಿ ಇಟ್ಟರೆ ನೀರು ಹಾರಿಸುವ ಮೂಲಕ ಅವುಗಳನ್ನು ಓಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಈ ಮಿಡತೆಗಳು ಇರಾನ್ನಿಂದ ಹೊರಟು, ಪಾಕಿಸ್ತಾನ ಮಾರ್ಗವಾಗಿ ಭಾರತ ಪ್ರವೇಶ ಮಾಡಿದ್ದವು. ಇವು ಕ್ಷಣಮಾತ್ರದಲ್ಲಿ ಬೆಳೆಗಳನ್ನು ಸಂಪೂರ್ಣ ನಾಶ ಮಾಡುವ ತಾಕತ್ತನ್ನು ಹೊಂದಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ