ಮುಂಬೈ(ಜು.13): ಮಹಾರಾಷ್ಟ್ರದಲ್ಲಿ (Maharastra) ರಾಜಕೀಯ ತ್ವರಿತ ಬೆಳವಣಿಗಳಿಗೆ ದೇಶವೇ ಸಾಕ್ಷಿಯಾಗಿದೆ. ಶಿವಸೇನೆ ಇಬ್ಭಾಗವಾಗಿ ಹೊಸ ಸಿಎಂ ಕೂಡಾ ಆಯ್ಕೆಯಾಗಿದ್ದಾರೆ. ಇದೀಗ ಶಿವಸೇನೆಯ (Shivsena) ವಕ್ತಾರೆಯೇ (Spokesperson) ಸ್ವತಃ ಶಿಂದೆ ಬಣ ಸೇರಿಕೊಂಡು ಶಾಕ್ ಕೊಟ್ಟಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಮತ್ತೊಂದು ಆಘಾತದಲ್ಲಿ (Shock), ಪಕ್ಷದ ವಕ್ತಾರೆ ಮತ್ತು ಮಾಜಿ ಮುಂಬೈ ಕಾರ್ಪೊರೇಟರ್ ಶೀತಲ್ ಮ್ಹಾತ್ರೆ (Sheetal Mhatre) ಜುಲೈ 12, ಮಂಗಳವಾರ ಏಕನಾಥ್ ಶಿಂಧೆ (Ekanat shinde) ನೇತೃತ್ವದ ಬಣವನ್ನು ಸೇರಿದ್ದಾರೆ.
ಶೀತಲ್ ಅವರು ವಾರ್ಡ್ ನಂ. 2012 ಮತ್ತು 2017 ರಲ್ಲಿ ಉತ್ತರ ಮುಂಬೈನ ಉಪನಗರದ ದಹಿಸರ್ನಲ್ಲಿ 7, ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ಅವರಿಗೆ ಬಹಿರಂಗವಾಗಿ ಬೆಂಬಲವನ್ನು ಘೋಷಿಸಿದ ಮೊದಲ ಮಾಜಿ ಶಿವಸೇನೆ ಕಾರ್ಪೊರೇಟರ್.
ಶಿಂಧೆ ನಿವಾಸಕ್ಕೆ ಬಂದು ಬೆಂಬಲ
ಮಂಗಳವಾರ ರಾತ್ರಿ, ಶೀತಲ್ ಕೆಲವು ಶಿವಸೇನಾ ಕಾರ್ಯಕರ್ತರೊಂದಿಗೆ ಶಿಂಧೆ ಅವರ ನಿವಾಸಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಉದ್ಧವ್ ಠಾಕ್ರೆ ನೇತೃತ್ವದ ಸೇನೆಯು ಅಲಿಬಾಗ್-ಪೆನ್ ಪ್ರದೇಶಕ್ಕೆ 'ಸಂಪರ್ಕ ಸಂಘಟಕ' ಸಂಯೋಜಕಿಯಾಗಿ ಶೀತಲ್ ಅವರನ್ನು ನೇಮಿಸಿತ್ತು.
ಸೇನಾ ನಿಯಂತ್ರಿತ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ಗೆ (ಬಿಎಂಸಿ) ನಿರ್ಣಾಯಕ ಚುನಾವಣೆಗಳು ಮುಂದಿನ ಕೆಲವು ತಿಂಗಳುಗಳಲ್ಲಿ ನಡೆಯಲಿವೆ.
ಇದನ್ನೂ ಓದಿ: Covid-19: ಕೊರೋನಾ ಹೆಚ್ಚಳ, ಮಣಿಪುರದಲ್ಲಿ ಶಾಲೆಗಳು ಬಂದ್!
ಜೂನ್ನಲ್ಲಿ ಶಿವಸೇನೆಯೊಳಗೆ ಶಿಂಧೆಯವರ ಬಂಡಾಯವು ರಾಜ್ಯದಲ್ಲಿ ಮಹಾ ವಿಕಾಸ್ ಅಘಾಡಿ (MVA) ಸರ್ಕಾರದ ಪತನಕ್ಕೆ ಕಾರಣವಾಯಿತು.
मुंबई येथील दहिसर विभागातील माजी नगरसेविका सौ.शीतल मुकेश म्हात्रे यांनी आज वंदनीय हिंदुहृदयसम्राट शिवसेनाप्रमुख बाळासाहेब ठाकरे तसेच धर्मवीर आनंद दिघे साहेब यांच्या विचारांना प्रमाण मानून हिंदुत्वाचा विचार स्वीकारून आम्हाला साथ देण्याचा निर्णय घेतला.#realshivsena pic.twitter.com/zov9q5PFaV
— Eknath Shinde - एकनाथ शिंदे (@mieknathshinde) July 12, 2022
ಇದನ್ನೂ ಓದಿ: Mamata Banerjee: ಬೀದಿ ಬದಿ ಪಾನಿಪುರಿ ಹಂಚಿದ ಸಿಎಂ! ದೀದಿ ಸಿಂಪ್ಲಿಸಿಟಿಗೆ ಜನರು ಫಿದಾ
ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಣೆ
ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಣೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೇಲೆ ಶಿವಸೇನೆಯ ಸಂಸದರು ಒತ್ತಡ ಹೇರಿದ್ದರು. ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಬಹುತೇಕ ಸಂಸದರು ಎನ್ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕು ಎಂಬ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಉದ್ಧವ್ ಠಾಕ್ರೆ ಈ ನಿರ್ಧಾರ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಗೆ ಮತ್ತಷ್ಟು ಬಲ ಬಂದಿದೆ. ಇದರ ಜೊತೆಗೆ ಶಿವಸೇನೆಯಲ್ಲಿ ಉಂಟಾಗಬಹುದಾಗಿದ್ದ ಮತ್ತೊಂದು ಬಂಡಾಯದ ಬೀಸಿ ಶಮನ ಮಾಡುವ ಕೆಲಸವನ್ನ ಮಾಜಿ ಮುಖ್ಯಮಂತ್ರಿ ಮಾಡಿದ್ದಾರೆ.
ಇದನ್ನೂ ಓದಿ: Bihar: ಕುರ್ತಾ, ಪೈಜಾಮ ಧರಿಸಿ ಶಾಲೆಗೆ ಬಂದ ಹೆಡ್ಮಾಸ್ಟರ್ ಸ್ಯಾಲರಿ ಕಟ್!
ಬುಡಕಟ್ಟು ಸಮುದಾಯದ ಮಹಿಳೆಗೆ ಬೆಂಬಲ
ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗುವ ಅವಕಾಶವಿರುವುದಾಗಿ ಪಕ್ಷದ ಬುಡಕಟ್ಟು ಮುಖಂಡರು ಹೇಳಿರುವುದಾಗಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ನಾನು ಮುರ್ಮು ಅವರನ್ನು ಬೆಂಬಲಿಸಬಾರದು. ಆದರೆ, ನಾವು ಸಣ್ಣ ಮನಸ್ಥಿತಿ ಹೊಂದಿಲ್ಲ. ಹೀಗಾಗಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಶಿವಸೇನೆ ತೀರ್ಮಾನ ಮಾಡಿದೆ ಅಂತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ