ಪುಣೆ(ಫೆ.14): ರೈಲು, ಬಸ್ಗಳಲ್ಲಿ ಸೀಟು ಹಿಡಿಯೋಕೆ ಹರಸಾಹಸ ಮಾಡಬೇಕು. ಅದರಲ್ಲೂ ತುಂಬಾ ಜನರು ಹತ್ತುವ ರೈಲುಗಳಲ್ಲಿ ಸೀಟು ಸಿಗೋದು ಕಷ್ಟವೇ ಸರಿ. ಈ ಜನ ಸಂದಣಿಯಲ್ಲಿ ಗರ್ಭಿಣಿಯರು, ಮಕ್ಕಳು ಬಂದರಂತೂ ಅವರ ಕಥೆ ಮುಗಿದಂತೆ. ಮುಂಬೈ-ಲಾಥೂರ್-ಬೀದರ್ ರೈಲಿನಲ್ಲಿ ಸೀಟಿಗಾಗಿ ಜಗಳ ನಡೆದು ಅದು ಕೊಲೆಯಲ್ಲಿ ಅಂತ್ಯ ಕಂಡಿದೆ.
ರೈಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮಗುವಿಗೆ ಸೀಟು ಕೇಳಿದ್ದ. ಅದು ಅಲ್ಲಿನ ಪ್ರಯಾಣಿಕರಿಗೆ ತಪ್ಪಾಗಿ ಕಾಣಿಸಿತೋ ಏನೋ ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿದ್ದಾರೆ. ಇಂತಹ ಕೃತ್ಯ ಮುಂಬೈ ರೈಲಿನಲ್ಲಿ ನಡೆದಿದೆ.
ಸಾಗರ್ ಮಾರ್ಕಂಡ್ ಬುಧವಾರ ರಾತ್ರಿ ತನ್ನ ಹೆಂಡತಿ ಜ್ಯೋತಿ ಮತ್ತು 2 ವರ್ಷದ ಮಗುವಿನ ಜೊತೆ ಮುಂಬೈ-ಲಾಥುರ್-ಬೀದರ್ ಎಕ್ಸ್ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ. ರೈಲು ಜನರಿಂದ ತುಂಬಿ ತುಳುಕುತ್ತಿತ್ತು. ಆದ ಕಾರಣ ಅವರಿಗೆ ಸೀಟು ಸಿಕ್ಕಿರಲಿಲ್ಲ. ಸಾಗರ್ ತನ್ನ ಹೆಂಡತಿ ಮಗುವನ್ನು ಕೂರಿಸಲು ಅಲ್ಲಿ ಕುಳಿತಿದ್ದ ಮಹಿಳೆಯರ ಬಳಿ ಸೀಟು ಕೇಳಿದ್ದಾನೆ. ಆದರೆ ಸೀಟು ಬಿಡಲೊಪ್ಪದ ಮಹಿಳೆಯರು ಸಾಗರ್ ಜೊತೆ ಜಗಳಕ್ಕಿಳಿದಿದ್ದಾರೆ.
ಟ್ರಂಪ್ ಭಾರತದ ಭೇಟಿ, ವ್ಯಾಪಾರ ವೃದ್ಧಿಗೆ ಮಾತುಕತೆ; ದೇಶದ ಡೈರಿ ಉತ್ಪನ್ನಗಳಿಗೆ ತೆರೆಯಲಿದೆಯೇ ಅಮೆರಿಕ ಬಾಗಿಲು?
ಈ ಜಗಳ ಅತಿರೇಕಕ್ಕೆ ತಿರುಗಿ ಮಹಿಳೆಯರು ಹಾಗೂ ಗಂಡಸರು ಸಾಗರ್ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಸಾಗರ್ ಹೆಂಡತಿ ಜ್ಯೋತಿ ತನ್ನ ಗಂಡನನ್ನು ಕಾಪಾಡುವಂತೆ ಅಲ್ಲಿದ್ದವರ ಬಳಿ ಸಹಾಯ ಕೇಳಿದ್ದಾಳೆ. ಆದರೆ ಯಾರೊಬ್ಬರೂ ಸಹ ಸಾಗರ್ನನ್ನು ರಕ್ಷಿಸಲು ಮುಂದೆ ಬರಲಿಲ್ಲ.
ಡಾಂಟ್ ಸ್ಟೇಷನ್ ಬಳಿ ರೈಲು ನಿಲ್ಲಿಸಿದಾಗ ಜ್ಯೋತಿ ರೈಲ್ವೆ ಪೊಲೀಸರ ಸಹಾಯ ಪಡೆದು, ಕೂಡಲೇ ಪಕ್ಕದ ಆಸ್ಪತ್ರೆಗೆ ಸಾಗರ್ನನ್ನು ರವಾನಿಸಿದ್ದಾರೆ. ತುಂಬಾ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇನ್ನು, ಸಾಯುವ ಹಾಗೆ ಥಳಿಸಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ಆನಂದ್ ಸಿಂಗ್ಗೆ ಅರಣ್ಯ ಇಲಾಖೆ ನೀಡಿದ್ದು ಕಳ್ಳನ ಕೈಯಲ್ಲಿ ಕೀಲಿ ಕೊಟ್ಟಂತಾಗಿದೆ; ಹೆಚ್ ಎಂ ರೇವಣ್ಣ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ