• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Crime News| ಮಹಾರಾಷ್ಟ್ರದಲ್ಲಿ ನಿಧಿಗಾಗಿ ಹೆಂಡತಿಯನ್ನೇ ನರಬಲಿ ನೀಡಲು ಮುಂದಾಗಿದ್ದ ಆಸಾಮಿ ಇದೀಗ ಪೊಲೀಸರ ಅತಿಥಿ!

Crime News| ಮಹಾರಾಷ್ಟ್ರದಲ್ಲಿ ನಿಧಿಗಾಗಿ ಹೆಂಡತಿಯನ್ನೇ ನರಬಲಿ ನೀಡಲು ಮುಂದಾಗಿದ್ದ ಆಸಾಮಿ ಇದೀಗ ಪೊಲೀಸರ ಅತಿಥಿ!

ದಾಂಪತ್ಯದಲ್ಲಿ ಬಿರುಕು  ಕಾಣಿಸಿಕೊಂಡ ಬಳಿಕ ಸಂಧ್ಯಾ  ಮಳವಳ್ಳಿ ತಾಲೂಕಿನ ಕುಂದದೂರು ಗ್ರಾಮದ ತವರು ಮನೆ ಸೇರಿದ್ದರು. ತವರು ಮನೆಯಲ್ಲಿದ್ದುಕೊಂಡೇ ಸಂಧ್ಯಾ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು. ಆದ್ರೆ ಒಂದು ದಿನ ಕಂಪ್ಯೂಟರ್ ಕ್ಲಾಸ್ ಗೆ ಹೋಗಿದ್ದ ಸಂಧ್ಯಾ ಮನೆಗೆ ಹಿಂದಿರುಗಿರಲಿಲ್ಲ.

ದಾಂಪತ್ಯದಲ್ಲಿ ಬಿರುಕು  ಕಾಣಿಸಿಕೊಂಡ ಬಳಿಕ ಸಂಧ್ಯಾ  ಮಳವಳ್ಳಿ ತಾಲೂಕಿನ ಕುಂದದೂರು ಗ್ರಾಮದ ತವರು ಮನೆ ಸೇರಿದ್ದರು. ತವರು ಮನೆಯಲ್ಲಿದ್ದುಕೊಂಡೇ ಸಂಧ್ಯಾ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು. ಆದ್ರೆ ಒಂದು ದಿನ ಕಂಪ್ಯೂಟರ್ ಕ್ಲಾಸ್ ಗೆ ಹೋಗಿದ್ದ ಸಂಧ್ಯಾ ಮನೆಗೆ ಹಿಂದಿರುಗಿರಲಿಲ್ಲ.

ಸೆಪ್ಟೆಂಬರ್ 22 ರ ರಾತ್ರಿ, ಸಂತೋಷ್ ತನ್ನ ಮನೆಯಲ್ಲಿ ಅಡಗಿದ್ದ ನಿಧಿಯನ್ನು ಪತ್ತೆ ಮಾಡಲು ಒಬ್ಬ ಮಹಿಳಾ ತಂತ್ರಿಯನ್ನು ಕರೆತಂದಿದ್ದ. ಅವಳು ಕೆಲವು ಪೂಜೆ ಆಚರಣೆಗಳನ್ನು ಮಾಡಿದಳು. ಮರುದಿನ, ಸಂತೋಷ್ ತನ್ನ ಹೆಂಡತಿ ಸೀಮಾಗೆ ತಾನು ನಿಧಿಗಾಗಿ ಆಕೆಯನ್ನೇ ನರಬಲಿ ಕೊಡುವುದಾಗಿ ತಿಳಿಸಿದ್ದ.

ಮುಂದೆ ಓದಿ ...
  • Share this:

ಮುಂಬೈ; ನಿಧಿಯನ್ನು ಪಡೆಯುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನೇ ನರಬಲಿ ನೀಡಲು ಮುಂದಾದ ಘಟನೆ ಮಹಾರಾಷ್ಟ್ರದ (Maharashtra) ಜಲ್ನಾ ಜಿಲ್ಲೆಯ ಜಫ್ರಾಬಾದ್ ತಹಸಿಲ್‌ನಲ್ಲಿ ನಡೆದಿದೆ. ಮಹಿಳೆಯನ್ನು ಬಲಿ ನೀಡಿದರೆ ಅಪಾರ ನಿಧಿ ಸಿಗುತ್ತದೆ ಎಂಬ ಆಸೆಯಿಂದ ನರಬಲಿ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಮಹಿಳೆ ನೀಡಿದ ದೂರಿನ ಅನ್ವಯ, ನರಬಲಿ ನೀಡಲು ಮುಂದಾದ ಆರೋಪದಲ್ಲಿ ಪೊಲೀಸರು ಆಕೆಯ ಗಂಡ ಮತ್ತು ಮಹಿಳಾ ತಂತ್ರಿಕ್​ಳನ್ನು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ. ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯನ್ನೂ ಸಹ ಮೌಜೆ ಡೊಂಗಾವ್ ಎಂಬ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  


ಆರೋಪಿಗಳನ್ನು ಸಂತೋಷ್ ಪಿಂಪಲ್ (40), ಜೀವನ್ ಪಿಂಪಲ್ ಎಂದು ಗುರುತಿಸ ಲಾಗಿದೆ. ಈ ಇಬ್ಬರೂ ಡೊಂಗಾವ್ ನಿವಾಸಿಗಳು ಎಂದು ತಿಳಿದುಬಂದಿದೆ. ಇನ್ನೂ ಬಂಧಿತಳಾಗಿರುವ ತಂತ್ರಿಕ್ ಮಹಿಳೆಯಾಗಿದ್ದು, ಆಕೆ ಬುಲ್ಧಾನಾ ಜಿಲ್ಲೆಯ ದೇವಾಲ್ಗಾಂವ್ ರಾಜಾ ತಹಸಿಲ್ ಮೂಲದವರು ಎನ್ನಲಾಗಿದೆ. "ಆರೋಪಿ ಸಂತೋಷ್ ಕುಡಿತದ ಚಟಕ್ಕೆ ಒಳಗಾಗಿದ್ದ. ಅಲ್ಲದೆ, ಕುಡಿದು ಸ್ಮಶಾಸನಗಳಲ್ಲಿ ಅಲೆಯುತ್ತಿದ್ದ ಆತ ಹೆಚ್ಚಿನ ಸಮಯ ವನ್ನು ಅಲ್ಲೆ ಕಳೆಯುತ್ತಿದ್ದ. ಅಲ್ಲದೆ ತನ್ನ ಹೆಂಡತಿಯ ಬಳಿ ತಾನು ಶೀಘ್ರದಲ್ಲಿ ಕೆಲವು ಗುಪ್ತ ನಿಧಿಯನ್ನು ಕಂಡುಕೊಳ್ಳುತ್ತೇನೆ ಎಂದು ಹೇಳುತ್ತಿದ್ದನು" ಎಂದು ಪೊಲೀಸ್ ಇನ್ಸ್‌ಪೆಕ್ಟರ್ ರವೀಂದ್ರ ಠಾಕ್ರೆ ಮಾಹಿತಿ ನೀಡಿದ್ದಾರೆ.


"ಸೆಪ್ಟೆಂಬರ್ 22 ರ ರಾತ್ರಿ, ಸಂತೋಷ್ ತನ್ನ ಮನೆಯಲ್ಲಿ ಅಡಗಿದ್ದ ನಿಧಿಯನ್ನು ಪತ್ತೆ ಮಾಡಲು ಒಬ್ಬ ಮಹಿಳಾ ತಂತ್ರಿಯನ್ನು ಕರೆತಂದಿದ್ದ. ಅವಳು ಕೆಲವು ಪೂಜೆ ಆಚರಣೆಗಳನ್ನು ಮಾಡಿದಳು. ಮರುದಿನ, ಸಂತೋಷ್ ತನ್ನ ಹೆಂಡತಿ ಸೀಮಾಗೆ ತಾನು ನಿಧಿಗಾಗಿ ಆಕೆಯನ್ನೇ ನರಬಲಿ ಕೊಡುವುದಾಗಿ ತಿಳಿಸಿದ್ದ.


ಇದನ್ನೂ ಓದಿ: Petrol Price| ದಾವಣಗೆರೆಯಲ್ಲಿ 1 ಲೀಟರ್​ ಪೆಟ್ರೋಲ್​ಗೆ ಅತ್ಯಧಿಕ 106.60 ರೂ; ನಿಮ್ಮ ನಗರದಲ್ಲಿ ಇಂದಿನ ತೈಲ ಬೆಲೆ ಎಷ್ಟು?


ಇದರಿಂದ ಭಯಗೊಂಡಿದ್ದ ಆಕೆ, ಈ ವಿಚಾರವನ್ನು ಇಡೀ ಗ್ರಾಮಸ್ಥರಿಗೆ ತಿಳಿಸಿದ್ದಳು. ಅಲ್ಲದೆ, ತಂದೆಯ ಸಮೇತ ಪೊಲೀಸ್​ ಠಾಣೆ ಮಟ್ಟಿಲೇರಿ ದೂರನ್ನೂ ಸಹ ನೀಡಿದ್ದಳು. ಈ ದೂರಿನ ಅನ್ವಯ ಇದೀಗ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಮಹಾರಾಷ್ಟ್ರದ ನರಬಲಿ ನಿರ್ಮೂಲನೆ ಮತ್ತು ಇತರ ಅಮಾನವೀಯ, ದುಷ್ಟ ಅಘೋರಿ ಪದ್ಧತಿಗಳು, ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆ ಮತ್ತು ಇನ್ನು ಕೆಲವು ಐಪಿಸಿ ಸೆಕ್ಷನ್ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published: