ಭೋಪಾಲ್(ಜೂ.10): ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ (Village) ಮುಂಜಾನೆ ಮಗುವಿನ ಮೇಲೆ ದಾಳಿ ಮಾಡಿದ ಚಿರತೆ (Leopard) ಪೋಷಕರ ಮುಂದೆಯೇ ಮಗುವನ್ನು ಕೊಂದು ಹಾಕಿದೆ. ಮೊವ್ ತೆಹಸಿಲ್ನ ಹಳ್ಳಿಯೊಂದರಲ್ಲಿ ಆರು ವರ್ಷದ ಬಾಲಕಿಯ (Girl) ಮೇಲೆ ಚಿರತೆ ದಾಳಿ ನಡೆಸಿ ಕೊಂದಿದೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ದುಧಿ ಬವಡಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ಮನೆಯ ಹೊರಗೆ ರವಿನಾ ವಾಸ್ನಿಕ್ ಎಂಬ ಮಗು ತನ್ನ ಹೆತ್ತವರೊಂದಿಗೆ ಮಲಗಿದ್ದಾಗ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಕೋರಲ್ ಅರಣ್ಯ ವಲಯದ ಅಧಿಕಾರಿ ರಾಹುಲ್ ಜೈನ್ ತಿಳಿಸಿದ್ದಾರೆ.
ಚಿರತೆ ಆಕೆಯ ಮೇಲೆ ದಾಳಿ ಮಾಡಿ ಸ್ಥಳದಲ್ಲೇ ಕೊಂದು ಹಾಕಿದೆ. ಆಕೆಯ ಪೋಷಕರು ಚಿರತೆಯನ್ನು ಹೆದರಿಸಿದ ನಂತರ ನರಭಕ್ಷಕ ಸ್ಥಳದಿಂದ ಓಡಿಹೋಗಿದೆ ಎಂದು ಅವರು ಹೇಳಿದರು.
ಪರಿಸ್ಥಿತಿ ಪರಿಶೀಲಿಸಿದ ಅಧಿಕಾರಿಗಳು
ನಾನು ಇಂದು ಮುಂಜಾನೆ ದುಧಿ ಬಾವಡಿ ಗ್ರಾಮಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಮ್ರೋಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದ್ದು, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಜೈನ್ ಹೇಳಿದರು.
ಮಧ್ಯಪ್ರದೇಶದಲ್ಲಿ ಪದೇ ಪದೇ ಚಿರತೆ ದಾಳಿ
ಜನವರಿಯಲ್ಲಿ ಮಧ್ಯಪ್ರದೇಶದ ಜಿಲ್ಲೆಯ ದೇವರಾನ್, ಹಿನೌಟಾ, ಭೋರಸಾ ಮತ್ತು ಅಬ್ಖೇದಿ ಗ್ರಾಮಗಳಲ್ಲಿ ನಡೆದ ಘಟನೆಗಳಲ್ಲಿ ಗ್ರಾಮಸ್ಥರು ಚಿರತೆ ದಾಳಿಗೊಳಗಾಗಿದ್ದರು.
ದಾಳಿಯಲ್ಲಿ ನಂದ್ರಾಂ ಆದಿವಾಸಿ (40), ರಾಘವೇಂದ್ರ ಪಟೇಲ್ (30), ಅನೀಶ್ ರೈಕ್ವಾರ್ (22), ಅರವಿಂದ ಪರಿಹಾರ್ (26) ಮತ್ತು ಅವರ ಸಹೋದರ ಸುರೇಂದ್ರ (35) ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಚಿರತೆ ದೇವರಾನ್ಗೆ, ನಂತರ ಹಿನೌಟಾ, ಭೋರಸಾ (ಗ್ರಾಮ) ಮತ್ತು ಅಬ್ಖೇಡಿ ಗ್ರಾಮಕ್ಕೆ ದಾರಿತಪ್ಪಿ ಸುತ್ತಲಿನ ದಟ್ಟಕಾಡುಗಳಲ್ಲಿ ಕಣ್ಮರೆಯಾಯಿತು. ಈ ಪ್ರದೇಶದಲ್ಲಿ ಭೀತಿಯನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: BJP Leaders In Resort: ಶಾಸಕರನ್ನು ರೆಸಾರ್ಟ್ಗೆ ಶಿಫ್ಟ್ ಮಾಡಿದ ಬಿಜೆಪಿ!
ಚಿರತೆಯನ್ನು ಪತ್ತೆಹಚ್ಚಲು ಡ್ರೋನ್ಗಳನ್ನು ಅಳವಡಿಸಲಾಗಿತ್ತು. ಉತ್ತರ ಭಾರತದ ಹಲವು ಕಡೆ ಹಳ್ಳಿಗಳಲ್ಲಿ ಚಿರತೆ ದಾಳಿ ಸಾಮಾನ್ಯವಾಗಿಬಿಟ್ಟಿದೆ.
ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಚಿರತೆಗಳು ರಾಜ್ಯದ ಬುಂದೇಲ್ಖಂಡ್ ಪ್ರದೇಶದ ಜಿಲ್ಲಾ ಕೇಂದ್ರದಿಂದ 18 ಕಿಮೀ ದೂರದಲ್ಲಿರುವ ಅಬ್ಖೇಡಿ ಗ್ರಾಮದ ಸುತ್ತಲೂ ಸಂಚರಿಸುತ್ತದೆ.
ಕೊಡಗಿನಲ್ಲಿ ಕಾಡು ಪ್ರಾಣಿಗಳ ಉಪಟಳ
ಕರ್ನಾಟಕದಲ್ಲಿ ಕಾಡುಪ್ರಾಣಿಗಳ ತೊಂದರೆ ಅನುಭವಿಸುವವರು ಹೆಚ್ಚಾಗಿ ಕೊಡಗಿನ ಮಂದಿ. ಕೊಡಗಿನಲ್ಲಿಯೂ ಹುಲಿ, ಚಿರತೆ ದಾಳಿ ಸಾಮಾನ್ಯವಾಗಿಬಿಟ್ಟಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಎಷ್ಟೋ ಸಲ ಚಿರತೆ ದಾಳಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: Newborn Baby: ಹೆತ್ತ ಮಗುವನ್ನೇ ಮಾರಾಟ ಮಾಡಿ ಬಾಯ್ಫ್ರೆಂಡ್ಗೆ ಬೈಕ್, ಮನೆಗೆ ಫ್ರಿಡ್ಜ್, ಟಿವಿ ತಂದ ಯುವತಿ
ನರ ಭಕ್ಷಕ ಚಿರತೆಗಳು
ನರಭಕ್ಷಕ ಚಿರತೆಗಳು ಬೇಟೆಯಾಡುವ ನಡವಳಿಕೆಯ ಮಾದರಿಯಾಗಿ ಮನುಷ್ಯರನ್ನು ಬೇಟೆಯಾಡುವ ಪ್ರಾಣಿ ಎಂದು ಗುರುತಿಸಲ್ಪಡುತ್ತದೆ. ಇದು ಶವಗಳನ್ನು ಕಸಿದುಕೊಳ್ಳುವುದು, ಅವಕಾಶ ಅಥವಾ ಹತಾಶ ಹಸಿವಿನಿಂದ ಒಂದೇ ಬಾರಿ ದಾಳಿ ಮಾಡಿಕೊಲ್ಲುವುದು, ಅಥವಾ ಆತ್ಮರಕ್ಷಣೆಗಾಗಿ ಪ್ರಾಣಿಯನ್ನು ಕೊಂದ ಮಾನವನನ್ನು ದಾಳಿ ಮಾಡಿ ಕೊಲ್ಲುತ್ತದೆ. ಮಾನವ ಮಾಂಸವನ್ನು ತಿಂದು ಅಭ್ಯಾಸವಾದ ಎಷ್ಟೋ ನರಭಕ್ಷಕಗಳ ಪ್ರಕರಣ ನಾವು ನೋಡಿದ್ದೇವೆ.
ಮನುಷ್ಯರು ಅನೇಕ ರೀತಿಯ ಪ್ರಾಣಿಗಳಿಂದ ಆಕ್ರಮಣಕ್ಕೆ ಒಳಗಾಗಬಹುದಾದರೂ, ನರಭಕ್ಷಕ ಚಿರತೆಗಳು ತಮ್ಮ ಸಾಮಾನ್ಯ ಆಹಾರದಲ್ಲಿ ಮಾನವ ಮಾಂಸವನ್ನು ಸೇರಿಸಿಕೊಳ್ಳುತ್ತವೆ. ಸಕ್ರಿಯವಾಗಿ ಮನುಷ್ಯರನ್ನು ಬೇಟೆಯಾಡಿ ಕೊಲ್ಲುತ್ತವೆ. ನರಭಕ್ಷಕಗಳ ಹೆಚ್ಚಿನ ಪ್ರಕರಣಗಳು ಸಿಂಹಗಳು, ಹುಲಿಗಳು, ಚಿರತೆಗಳು, ಹಿಮಕರಡಿಗಳು ಮತ್ತು ದೊಡ್ಡ ಮೊಸಳೆಗಳನ್ನು ಒಳಗೊಂಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ